Ad imageAd image

ಕ್ರಿಕೆಟ್ ವಿಶ್ವದ ಯುವಕರ ಕಣ್ಮಣಿ ಸಚಿನ ತೆಂಡೂಲ್ಕರ್ ಕುಟುಂಬದವರಿಂದ ಶ್ರೀ ಕ್ಷೇತ್ರ ನರಸಿಂಹವಾಡಿ ದತ್ತ ದರ್ಶನ.ಮುಗಿಬಿದ್ದ ಕ್ರೀಡಾ ರಸಿಕರು

Bharath Vaibhav
ಕ್ರಿಕೆಟ್ ವಿಶ್ವದ ಯುವಕರ ಕಣ್ಮಣಿ ಸಚಿನ ತೆಂಡೂಲ್ಕರ್ ಕುಟುಂಬದವರಿಂದ ಶ್ರೀ ಕ್ಷೇತ್ರ ನರಸಿಂಹವಾಡಿ ದತ್ತ ದರ್ಶನ.ಮುಗಿಬಿದ್ದ ಕ್ರೀಡಾ ರಸಿಕರು
WhatsApp Group Join Now
Telegram Group Join Now

ನಿಪ್ಪಾಣಿ : ಕ್ರಿಕೆಟ್ ವಿಶ್ವದಲ್ಲಿಯೇ ಯುವಕರು ದೇವರೆಂದು ಮನ್ನಿಸುವ ಖ್ಯಾತ ಕ್ರಿಕೆಟ್ ಪಟು ಸಚಿನ್ ತೆಂಡೂಲ್ಕರ್ ಕುಟುಂಬದವರು ಕೊಲ್ಲಾಪುರ ಜಿಲ್ಲೆಯ ಶ್ರೀ ಕ್ಷೇತ್ರ ನರಸಿಂಹ ವಾಡಿ ದತ್ತಮಂದಿರಕ್ಕೆ ಬುಧವಾರ ಭೇಟಿ ನೀಡಿ ದತ್ತ ದೇವರ ಪಾದುಕೆ ಯ ದರ್ಶನ ಪಡೆದು ಕೃತಾರ್ಥರಾದರು.

ಶ್ರೀ ಕ್ಷೇತ್ರ ದತ್ತ ಮಂದಿರದ ಅಪಾರ ಶ್ರದ್ಧೆ ಹೊಂದಿದ ತೆಂಡೂಲ್ಕರ್ ಕುಟುಂಬದಲ್ಲಿಯ ಸಚಿನ್ ತೆಂಡೂಲ್ಕರ್ ಪತ್ನಿ ಅಂಜಲಿ ಪುತ್ರ ಅರ್ಜುನ್ ಹಾಗೂ ಪುತ್ರಿ ಸಾರ ಸೇರಿ ಕುಟುಂಬದ ಎಲ್ಲರೂ ಮುಂಬೈಯಿಂದ ಕೊಲ್ಲಾಪುರಕ್ಕೆ ಆಗಮಿಸಿದರು. ಆಗ ಕೊಲ್ಲಾಪುರದ ಖ್ಯಾತ ಉದ್ಯಮಿ ತೇಜ ಘಾಟಗೆ ತೆಂಡೂಲ್ಕರ್ ಕುಟುಂಬವನ್ನು ಸ್ವಾಗತಿಸಿಕೊಂಡರು.

ತದನಂತರ ಅವರು ಶ್ರೀ ಕ್ಷೇತ್ರ ನರಸಿಂಹವಾಡಿಗೆ ಆಗಮಿಸಿದರು. ಈ ಸಂದರ್ಭದಲ್ಲಿ ದತ್ತ ದೇವರ ಪಾದುಕೆಯ ದರ್ಶನ ಪಡೆದು ಹರಕೆ ಪೂರೈಸಿದರು.ಇದೇ ವೇಳೆ ದತ್ತ ದೇವಸ್ಥಾನದ ಮುಖ್ಯ ಅರ್ಚಕರು ತೆಂಡೂಲ್ಕರ್ ಕುಟುಂಬದವರಿಗೆ ದತ್ತ ಮಹಾರಾಜರ ಪ್ರತಿಮೆ ನೀಡಿ ಪ್ರಸಾದ ಹಂಚಿದರು.

ತದನಂತರ ನಾಲ್ವರು ತೆಂಡೂಲ್ಕರ್ ಕುಟುಂಬದವರು ಮಹಾರಾಜರ ದರ್ಶನ ಪಡೆದು ಅಲ್ಲಿಂದ ಕೊಲ್ಲಾಪುರದತ್ತ ಪ್ರಯಾಣ ಬೆಳೆಸಿದರು.ತೆಂಡೂಲ್ಕರ್ ಕುಟುಂಬ ನರಸಿಂಹ ವಾಡಿಗೆ ಬಂದ ಸುದ್ದಿ ಕಾಲ್ಜಿಡ್ಚಿನಂತೆ ಹರಡುತ್ತಿದ್ದಂತೆ ಅಭಿಮಾನಿಗಳು ತೆಂಡೂಲ್ಕರ್ ಬೆಟ್ಟಿಗಾಗಿ ,ಸೆಲ್ಫಿಗಾಗಿ ಮುಗಿಬಿದ್ದಿದ್ದರು.

ವರದಿ : ಮಹಾವೀರ ಚಿಂಚಣೆ 

 

WhatsApp Group Join Now
Telegram Group Join Now
Share This Article
error: Content is protected !!