ತುಮಕೂರು : ಜಿಲ್ಲೆಯ ಪಾವಗಡ ತಾಲೂಕಿನ ನಾಗಲಮಡಿಕ್ಕೆ ಹೋಬಳಿಯ ವ್ಯಾಪ್ತಿಯಲ್ಲಿ ಬರುವ ನಾಗೇನಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎನ್ನುವುದಕ್ಕೆ ಸಂಬಂಧಿಸಿದ ವರದಿ ಮಾದ್ಯಮಗಳಲ್ಲಿ
ಭಾನುವಾರ ಪ್ರಸಾರ ಮಾಡಲಾಗಿತ್ತು ಜೊತೆಗೆ ಈ ಒಂದು ಸುದ್ದಿ ಸ್ವರೂಪ ಪಡೆದುಕೊಂಡ ಹಿನ್ನೆಲೆ ಸ್ಥಳಕ್ಕೆ ದಿನಾಂಕ, 19/02/25 ಬುಧವಾರ ಸಂಜೆ 6 ಗಂಟೆಯಲ್ಲಿ ತುಮಕೂರು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿಯನ್ನು ಪಡೆದುಕೊಂಡಿದ್ದಾರೆ,
ಸದ್ಯ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿದ್ದು, ಗ್ರಾಮಸ್ಥರು ಈಗ ಪ್ರತಿದಿನ ನೀರು ಬರುತ್ತಿವೆ ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಕಾಯನ್ ಸಿಸ್ಟಮ್ ಅಳವಡಿಸಬೇಕೆಂದು ಮನವಿ ಮಾಡಿದರು ಇದಕ್ಕೆ ಕಾಯನ್ ಸಿಸ್ಟಮ್ ಅಳವಡಿಕೆ ಮಾಡಲು ಕುಡಿಯುವ ನೀರು ವಿಭಾಗದ ಇಂಜಿನಿಯರ್ ಬಸವಲಿಂಗಪ್ಪ ಅವರಿಗೆ ಸೂಚನೆ ನೀಡಿದರು.
ಗ್ರಾಮದಲ್ಲಿ ರಸ್ತೆ ಬದಿಯಲ್ಲಿದ್ದ ತಿಪ್ಪೆ ಮತ್ತು ಕಸದ ರಾಶಿಗಳನ್ನು ಕಂಡ ಅವರು ಸಮರ್ಪಕವಾಗಿ ಗ್ರಾಮದಲ್ಲಿ ಕಸ ವಿಲೇವಾರಿ ಮಾಡಬೇಕು ಈ ರೀತಿ ಇದ್ದರೆ ಜನರಿಗೂ ಕಾಯಿಲೆಗೆ ತುತ್ತಾಗುತ್ತಾರೆ ಜನವಸತಿ ಪ್ರದೇಶಗಳನ್ನು ಸ್ವಚ್ಛವಾಗಿಡಬೇಕೆಂದು, ಗ್ರಾಮೀಣ ಭಾಗದಲ್ಲಿ ಯಾವುದೇ ರೀತಿಯಾದಂತಹ ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕೆಂದು ಪಿಡಿಒ ಸುದರ್ಶನ್ ಗೆ ಖಡಕ್ ಸೂಚನೆ ನೀಡಿದರು
ಸ್ಥಳದಲ್ಲಿ ಮಧುಗಿರಿ ಎಸಿ ಗೋಟುರು ಶಿವಪ್ಪ, ತಹಸೀಲ್ದಾರ್ ಡಿ ಎನ್ ವರದರಾಜು, ಆರ್ ಐ ಗಳಾರಾದ ನಾರಾಯಣ ಗೌಡ. ರಾಜಗೋಪಾಲ. ಇನ್ನೂ ಮುಂತಾದ ತಾಲೂಕು ಅಧಿಕಾರಿಗಳು ಹಾಜರಿದ್ದರು
ವರದಿಗಾರರು, ಶಿವಾನಂದ ಬಿವಿ5 ನ್ಯೂಸ್ ಪಾವಗಡ ತಾಲ್ಲೂಕು ತುಮಕೂರು ಜಿಲ್ಲೆ