ಮೊಳಕಾಲ್ಮುರು: ತಾಲೂಕಿನ ರಾಯಪುರ ಗ್ರಾಮದಲ್ಲಿ ಊರು ಮಾರಮ್ಮನ ಜಾತ್ರೆಯು ಬಹಳ ವಿಜೃಂಭಣೆಯಿಂದ ನಡೆಯಿತು, ಕಳೆದ ಒಂದು ವಾರದಿಂದ ವಿವಿಧ ಕಾರ್ಯಕ್ರಮಗಳನ್ನು ನಡೆಸಿ ಮಾರಮ್ಮ ದೇವಿಗೆ ವಿವಿಧ ಅಲಂಕಾರಗಳನ್ನು ನೆರವೇರಿಸಿ ಮಂಗಳವಾರ ಸಾವಿರಾರು ಭಕ್ತರೊಂದಿಗೆ ಊರಿನ ಪಕ್ಕದಲ್ಲಿರುವ ಒಳಗೆ ಗಂಗಾ ಪೂಜೆಗೆ ಹೊರಟು ಗಂಗಾ ಪೂಜೆಯನ್ನು ನೆರವೇರಿಸಿ ವಿವಿಧ ಕಾರ್ಯಕ್ರಮಗಳನ್ನು ಮುಗಿಸಿ ಸಂಜೆ ಮಾರಮ್ಮ ದೇವಿಯನ್ನು ಗುಡಿ ತುಂಬಲಾಯಿತು,
ಸುಮಾರು ಐದು ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಯು ಇಡೀ ಊರು ತುಂಬೆಲ್ಲ ಪ್ರತಿ ಮನೆಮನೆಯು ಮದವಣಗಿತ್ತಿಯಂತೆ ಶೃಂಗಾರ ಮಾಡುತ್ತಾರೆ ಇಡೀ ಊರಿನ ತುಂಬೆಲ್ಲ ದೀಪದ ಅಲಂಕಾರ ಮಾಡಿದ್ದು, ಎಲ್ಲರ ಗಮನ ಸೆಳೆಯಿತು.
ಐದು ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಯು ಮಾಡುವುದರಿಂದ ಊರಿಗೆ ಸಮೃದ್ಧಿ ಬೆಳೆ , ಊರಿಗೆ ಯಾವುದು ಕೆಡುಕು ಉಂಟಾಗುವುದಿಲ್ಲ ಊರಿಗೆ ಎಲ್ಲವೂ ಒಳ್ಳೆಯದಾಗುತ್ತದೆ ಎಂದು ಹೇಳುತ್ತಾರೆ ಗ್ರಾಮದ ಮುಖಂಡ ಮತ್ತು ಗೌಡರಾದ ಪಟೇಲ್ ಜಿ ಪಾಪು ನಾಯಕ್,
ಒಟ್ಟಿನಲ್ಲಿ ಬುಡಕಟ್ಟು ಸಂಸ್ಕೃತಿಯನ್ನು ಇಂದಿಗೂ ಪಾಲಿಸುತ್ತಿರುವುದು ಇಡೀ ಗ್ರಾಮಕ್ಕೆ ಸಂತೋಷ ಸಮೃದ್ಧಿ ಸಿಗುತ್ತದೆ ಎನ್ನುವುದು ಪ್ರತಿತಿ,
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಊರಿನ ಮುಖಂಡರು ವಿವಿಧ ಗ್ರಾಮಗಳಿಂದ ಆಗಮಿಸಿದ ಭಕ್ತರು ಮಹಿಳೆಯರು ಇನ್ನೂ ಹಲವಾರು ಉಪಸ್ಥಿತರಿದ್ದರು.
ವರದಿ :ಪಿಎಂ ಗಂಗಾಧರ