ಹುಬ್ಬಳ್ಳಿ : ದೈವಜ್ಞ ಬ್ರಾಹ್ಮಣ ಸಮಾಜದ ರಾಜ್ಯ ಮಟ್ಟದ ವಧು-ವರರ ಅನ್ವೇಷಣೆ ಮತ್ತು ಜಾತಕ ವಿನಿಮಯ ಸಮಾವೇಶ ’ ಋಣಾನುಬಂಧ’ ನಾಳೆ ದಿ. ೯ರಂದು ವಿದ್ಯಾನಗರದ ದೈವಜ್ಞ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಸುದಿಗೋಷ್ಠಿಯಲ್ಲಿ ವಿವರ ನೀಡಿದ ದೈವಜ್ಞ ಬ್ರಾಹ್ಮಣ ಸುವರ್ಣಕಾರ ಸೊಸೈಟಿ ಅಧ್ಯಕ್ಷ ಸತೀಶ ಶೇಜವಾಡಕರ ಅವರು ಈ ರಾಜ್ಯ ಮಟ್ಟದ ಸಮಾವೇಶವನ್ನು ಶಿವಮೊಗ್ಗದ ದೈವಜ್ಞ ಪ್ರತಿಭಾ ರಂಗ, ಹಾಗೂ ಹುಬ್ಬಳ್ಳಿ ದೈವಜ್ಞ ಸಮಾಜದ ಚಿನ್ನ ಮತ್ತು ಬೆಳ್ಳಿ ಕೆಲಸಗಾರರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಚಿನ್ನ, ಬೆಳ್ಳಿ ಕೆಲಸಗಾರರಿಗೆ ವಿವಾಹವಾಗಲು ಬಯಸುವ ವಧುವಿನ ಜಾತಕವನ್ನು ಉಚಿತ ನೊಂದಣಿ, ಜಾತಕಗಳ ಪರಸ್ಪರ ವಿನಿಮಯ ಮುಂತಾದವುಗಳನ್ನು ಮಾಡಲಾಗುವುದು.ಬೆಳಿಗ್ಗೆ ೯ಕ್ಕೆ ಸಮಾವೇಶ ಉದ್ಘಾಟನೆಗೊಂಡು ೯-೩೦ಕ್ಕೆ ಜಾತಕ ನೊಂದಣಿ ಆರಂಭಗೊಳ್ಳಲಿದೆ ಎಂದರು.
ಮಧ್ಯಾಹ್ನ ೧ ಗಂಟೆಗೆ ಸಭಾ ಕಾರ್ಯಕ್ರಮವನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಉದ್ಘಾಟಿಸಲಿದ್ದಾರೆ. ಶಾಸಕ ಮಹೇಶ ಟೆಂಗಿನಕಾಯಿ, ಸತೀಶ ಶೇಜವಾಡಕರ, ವಿಷ್ಣು ರಾಯ್ಕರ, ವಿಜಯ ವೆರ್ಣೇಕರ , ಪ್ರೇಮಾ ಭಟ್, ಉದಯ ವೆರ್ಣೇಕರ, ಪೂಜಾ ಸತೀಶ ಶೇಜವಾಡಕರ, ಪಾಲ್ಗೊಳ್ಳಲಿದ್ದು, ಅಧ್ಯಕ್ಷೆ ದೈವಜ್ಞ ಪ್ರತಿಭಾ ರಂಗದ ವೆಂಕಟೇಶ ರಾಯ್ಕರ್ ವಹಿಸಲಿದ್ದು, ಮಂಜುನಾಥ ಶೇಟ, ನಾಗರಾಜ ರಾಯ್ಕರ ಉಪಸ್ಥಿತರಿರುವರು.
ಗೋಷ್ಠಿಯಲ್ಲಿ ವಿಷ್ಣು ರಾಯ್ಕರ, ಗೋವಿಂದರಾಜ ಹೆರ್ಡೆಕರ,ಮಹೇಶ ಶೇಟ, ಮಂಜುನಾಥ ವೆರ್ಣೇಕರ, ಶ್ರೀಪಾದ ರೇವಣಕರ, ಮಂಜುನಾಥ ಕುಡಾಳಕರ, ಸತ್ಯನಾರಾಯಣ ರಾಯ್ಕರ, ಆತ್ಮಾನಂದ ರೇವಣಕರ, ಸಚಿನ ವೆರ್ಣೇಕರ, ನಾಗರಾಜ ಪಾಲ್ಗೊಂಡಿದ್ದರು.
ವರದಿ : ಸುಧೀರ್ ಕುಲಕರ್ಣಿ