Ad imageAd image

ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರಕ್ಕೆ ಟಿ ಯು ಸಿ ಐ ಬೆಂಬಲ 

Bharath Vaibhav
ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರಕ್ಕೆ ಟಿ ಯು ಸಿ ಐ ಬೆಂಬಲ 
WhatsApp Group Join Now
Telegram Group Join Now

ಸಿಂಧನೂರು : ಫೆ.17 ಗ್ರಾಮ ಆಡಳಿತ ಅಧಿಕಾರಿಗಳು ದಿ, 10.2. 2025 ರಿಂದ ತಮ್ಮ ಕೇಂದ್ರ ಸಮಿತಿ ಕರೆಯ ಮೇರೆಗೆ ರಾಜ್ಯದ್ಯಂತ ವಿಎ. ಗಳು ಆರಂಭಿಸಿರುವ ಅನಿರ್ಧಿಷ್ಟವದಿ ಮುಷ್ಕರಕ್ಕೆ ‘ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ’ ಸಂಪೂರ್ಣ ಬೆಂಬಲ ಪ್ರಕಟಿಸಿದೆ.

ಇದು ಈ ನೌಕರರ 2ನೇ ಹಂತದ ಮುಷ್ಕರವಾಗಿದ್ದು ಸರಾಸರಿ 8000 ಹೆಚ್ಚು ವಿಎ ಗಳು ತಮ್ಮ ದೈನಂದಿನ ಕರ್ತವ್ಯವನ್ನು ನಿಲ್ಲಿಸಿ , ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ ಈ ನೌಕರರ ಎಲ್ಲಾ ಬೇಡಿಕೆಗಳು ಕಾನೂನು ಸಮ್ಮತವಾಗಿವೆ ಒಬ್ಬ ಗ್ರಾಮ ಆಡಳಿತ ಅಧಿಕಾರಿ ಕನಿಷ್ಠ ಐದು ಗರಿಷ್ಠ 10 ಹಳ್ಳಿಗಳಲ್ಲಿ ಕಂದಾಯ ಇಲಾಖೆ ಎಲ್ಲಾ ದಾಖಲೆಗಳು ನಿರ್ವಹಣೆ ಆಸ್ತಿ ವರ್ಗಾವಣೆ ಜನನ ಮರಣ ಬರ ಪ್ರಕೃತಿ ವಿಕೋಪ ಕೃಷಿ ಸಂಬಂಧಿತ ದಾಖಲೆಗಳು ಹೀಗೆ ಹತ್ತಾರು ಜವಾಬ್ದಾರಿಗಳನ್ನು ನಿಭಾಯಿಸ ಬೇಕಾಗುತ್ತದೆ ಆದರೆ ಸರ್ಕಾರ ಇವರಿಗೆ ಕೊಡಬೇಕಾದ ಮೂಲಸೌಕರ್ಯಗಳು ಉಪಕರಣಗಳು ಹಾಗೂ ಸಹಾಯಕ ಕೆಲಸಗಳು ಸೊನ್ನೆಯಾಗಿದೆ
ಇತರೆ ಇಲಾಖೆಗಳ ನೌಕರರು ಸಂಘ ಸಂಸ್ಥೆಗಳು ಇವರ ಮುಸ್ಕರಕ್ಕೆ ಸಂಪೂರ್ಣವಾಗಿ ಬೆಂಬಲಿಸಿಬೇಕೆಂದು ಟಿ ಯು ಸಿ ಐ ಮನವಿ ಮಾಡಿದೆ ಹಾಗೆಯೇ ಕೂಡಲೇ ರಾಜ್ಯ ಸರ್ಕಾರ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘ ಪದಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಕಾಮಾತ್ಮಕವಾಗಿ ಇವರ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಲಾಗುತ್ತದೆ.

ಈ ಸಂದರ್ಭದಲ್ಲಿ  ಎಂ ಗಂಗಾಧರ ಟಿ ಯು ಸಿ ಐ ರಾಜ್ಯ ಉಪಾಧ್ಯಕ್ಷರು, ಗುರುರಾಜ ಮುಕುಂದ ದಲಿತ ಮಹಾಸಭಾ ರಾಜ್ಯ ಕಾರ್ಯದರ್ಶಿ, ದುರ್ಗೇಶ್ ಬಾಲಿ ಕರ್ನಾಟಕ ರಕ್ಷಣಾ ಸೇನೆ ಕಾರ್ಮಿಕ ಘಟಕ ಅಧ್ಯಕ್ಷರು, ಕೆ ಮರಿಯಪ್ಪ ದಸಂಸ ಜಿಲ್ಲಾ ಅಧ್ಯಕ್ಷರು, ಹನುಮಂತ ಗೋಡ್ಯಾಳ ಕೆಆರ್‌ಎಸ್ ಉಪಾಧ್ಯಕ್ಷ, ಮಾಂಕಳಪ್ಪ, ಮರಿಯಪ್ಪ, ದರಗಯ್ಯ, ಇನ್ನು ಅನೇಕರಿದ್ದರು.

ವರದಿ:ಬಸವರಾಜ ಬುಕ್ಕನಹಟ್ಟಿ

WhatsApp Group Join Now
Telegram Group Join Now
Share This Article
error: Content is protected !!