ಚಿಟಗುಪ್ಪ:ಹತ್ತು ದಿನಗಳು ಕಳೆದರೂ ಸ್ಪಂದಿಸದ ಸರ್ಕಾರ .ಜನಪ್ರತಿನಿದಿನಗಳು ಮತ್ತು ಸರ್ಕಾರ ವಿರುದ್ಧ ಅಸಮಾಧಾನಗೊಂಡ ಗ್ರಾಮ ಆಡಳಿತ ಅಧಿಕಾರಿಗಳು
ಹೌದು ಚಿಟಗುಪ್ಪ ಪಟ್ಟಣದ ತಹಶೀಲ್ ಕಛೇರಿ ಆವರಣದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ವಿವಿಧ ಬೇಡಿಕೆ ಈಡೇರಿಕೆಗಾಗಿ ಸುಮಾರು ಹತ್ತು ದಿನಗಳಿಂದ 2ನೇ ಹಂತದ ಅನಿರ್ಧಷ್ಟಾವಾದಿ ಮುಷ್ಕರ ಕೈಗೊಂಡರು ಇಲ್ಲಿಯವರೆಗೆ ಸರ್ಕಾರವಾಗಲಿ ಜನ ಪ್ರತಿನಿಧಿಗಳಾಗಲಿ ಸೌಜನ್ಯಕ್ಕಾದರೂ ಭೇಟಿ ನೀಡಿಲ್ಲ ಎಂದು ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಉಪಾಧ್ಯಕ್ಷ ರಮೇಶ ವಾಲೀಕರ ಅಸಮಾಧಾನ ಹೊರಕಾಕಿದ್ದು ಹೀಗೆ…….
ಬಳಿಕ ಮಾತನಾಡಿದ ಸಮಾಜ ಸೇವಕ ಈಶ್ವರ ನೇಳಗಿ, ಸದಸ್ಯ ಶೈಕ್ಷಣಿಕ ವರ್ಷ ಆರಂಭಗೊಳ್ಳುತ್ತಿದ್ದು ವಿದ್ಯಾರ್ಥಿಗಳಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಅವಶ್ಯಕವಾಗಿ ಬೇಕಾಗಿವೆ.ಗ್ರಾಮ ಆಡಳಿತ ಅಧಿಕಾರಿಗಳು ಮುಷ್ಕರ ಹಮ್ಮಿಕೊಂಡಿದ್ದರಿಂದ ತುಂಬಾ ಸಮಸ್ಯೆಯಾಗುತ್ತಿದೆ.ಜೊತೆಗೆ ವಿಳಂಬವಾಗುತ್ತಿದೆ.ಸರ್ಕಾರ ಕೂಡಲೇ ಅವರ ಬೇಡಿಕೆ ಈಡೇರಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳಾದ ಕೆರೆಸಿದ್ದ,ಬಸವರಾಜ,ರವಿ,ರಾಧಾ, ರಾಧಿಕಾ,ಅನಿಲಕುಮಾರ,ಸಂತೋಷ ಸೇರಿ ಅನೇಕರು ಇದ್ದರು.
ವರದಿ:ಸಜೀಶ ಲಂಬುನೋರು