Ad imageAd image

ಹುಳು ತುಂಬಿದ ಚರಂಡಿ :ಸೋಮನಾಳ ಗ್ರಾ. ಪಂ. ಅಧಿಕಾರಿಗಳ ನಿರ್ಲಕ್ಷ

Bharath Vaibhav
ಹುಳು ತುಂಬಿದ ಚರಂಡಿ :ಸೋಮನಾಳ ಗ್ರಾ. ಪಂ. ಅಧಿಕಾರಿಗಳ ನಿರ್ಲಕ್ಷ
WhatsApp Group Join Now
Telegram Group Join Now

ಕಾರಟಗಿ: ತಾಲೂಕಿನ ಸೋಮನಾಳ ಗ್ರಾಮ ಪಂಚಾಯತಿ ಅಧಿಕಾರಿಗಳ ನಿರ್ಲಕ್ಷದಿಂದ ಚರಂಡಿಯ ಹುಳು ತುಂಬಿದ್ದು ಗ್ರಾಮಸ್ಥರು ಅನೇಕ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ದಲಿತ ವಿಮೋಚನಾ ಸೇನೆಯ ತಾಲೂಕಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ವಣಗೇರಿ ಆರೋಪಿಸಿದ್ದಾರೆ.

ಸೋಮನಾಳ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚರಂಡಿಯಲ್ಲಿ ಹುಳು ತುಂಬಿದ್ದು ನೀರು ಸರಾಗವಾಗಿ ಸಾಗದೆ ಗ್ರಾಮಸ್ಥರು ಸಾಂಕ್ರಾಮಿಕ ರೋಗದ ಭೀತಿಯಲ್ಲಿದ್ದಾರೆ. ಚರಂಡಿಯಲ್ಲಿ ಕಸಕಡ್ಡಿ ತುಂಬಿದ್ದು ವಿಷಜಂತುಗಳ ವಾಸಸ್ಥಾನವಾಗಿದೆ. ಚಿಕ್ಕ ಮಕ್ಕಳು ಗ್ರಾಮದ ಬೀದಿಯಲ್ಲಿ ಅಡ್ಡಾಡುವುದು ಕಷ್ಟವಾಗಿದೆ. ರಾತ್ರಿ ವೇಳೆ ವಿಷಕಾರಿ ಹಾವುಗಳು ಮನೆಗಳಿಗೆ ನುಗ್ಗುತ್ತಿವೆ ಎಂದು ಆರೋಪಿಸಿದರು. ಶೀಘ್ರದಲ್ಲೆ ಗ್ರಾಮ ಪಂಚಾಯತಿ ಅಧೀಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಶೇಖರಪ್ಪ ಹುಡೇದ, ಹುಲುಗಪ್ಪ ಗೋನಾಳ್, ಮಾರುತಿ ಡಣಾಪುರ್, ಚಿದಾನಂದ ಪೂಜಾರಿ, ಮುತ್ತುರಾಜ್ ಬಳಗನೂರ್, ಮುದುಕಣ್ಣ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article
error: Content is protected !!