Ad imageAd image

 ಶುಚಿತ್ವ ಕಾರ್ಯದ ನಿಮಿತ್ಯ ಬನಶಂಕರಿ ದೇವಿಯ ದರ್ಶನ ಬಂದ್..

Bharath Vaibhav
 ಶುಚಿತ್ವ ಕಾರ್ಯದ ನಿಮಿತ್ಯ ಬನಶಂಕರಿ ದೇವಿಯ ದರ್ಶನ ಬಂದ್..
WhatsApp Group Join Now
Telegram Group Join Now

ಬಾಗಲಕೋಟೆ :ಶುಚಿತ್ವ ಕಾರ್ಯದ ನಿಮಿತ್ಯ ಬನಶಂಕರಿ ದೇವಿಯ ದರ್ಶನ ಬಂದ್.. ದಿನಾಂಕ 10/02/2025 ಸೋಮವಾರದಂದು ಚಾಲುಕ್ಯರ ಅಧಿದೇವತೆ ಬಾದಾಮಿ ಬನಶಂಕರಿ ದೇವಿಯ ದರ್ಶನ ಬಂದ್..

ಚಾಲುಕ್ಯರ ಅಧಿದೇವತೆ, ನವಶಕ್ತಿ ಪೀಠಗಳಲ್ಲಿ ಒಂದಾದ ಶಕ್ತಿ ಪೀಠ, ಶಾಖoಭರಿ, ಆದಿಶಕ್ತಿ ವನದೇವತೆ, ಜಗನ್ಮಾತೆ ಬಾದಾಮಿ ಸುಕ್ಷೇತ್ರ ಬನಶಂಕರಿ ದೇವಸ್ಥಾನದಲ್ಲಿ ಸಂಪ್ರೋಷಣೆ( ಶುಚಿತ್ವ ) ಕಾರ್ಯ ಇರುವುದರಿಂದ ಇದೇ ತಿಂಗಳು ದಿನಾಂಕ 10/02/2025 ಸೋಮವಾರದಂದು ಮುಂಜಾನೆ 9:30 ಗಂಟೆಯಿಂದ ಮಧ್ಯಾಹ್ನ 2:30 ಗಂಟೆಯವರೆಗೆ ಭಕ್ತಾದಿಗಳಿಗೆ ಶ್ರೀ ಬನಶಂಕರಿ ದೇವಿಯವರ ದರ್ಶನಕ್ಕೆ ಅವಕಾಶವಿರುವವುದಿಲ್ಲ.

ಅದರಲ್ಲೂ ಬನಶಂಕರಿ ದೇವಿ ಜಾತ್ರೆ ಇರುವುದರಿಂದ ಸಾಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಭಕ್ತರು ಸಹಕರಿಸಬೇಕೆಂದು ಮಧ್ಯಾಹ್ನ 2:30 ಗಂಟೆಯ ನಂತರ ಶ್ರೀ ಬನಶಂಕರಿ ದೇವಿಯ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವದು ಎಂದು ಶ್ರೀ ಬನಶಂಕರಿ ದೇವಸ್ಥಾನದ ಟ್ರಸ್ಟ್ ಕಮಿಟಿ ಚೇರಮನ್ ರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ವರದಿ: ರಾಜೇಶ್. ಎಸ್. ದೇಸಾಯಿ 

WhatsApp Group Join Now
Telegram Group Join Now
Share This Article
error: Content is protected !!