Ad imageAd image

ಕರ್ನಾಟಕ ರಾಜ್ಯ ನಿವೃತ್ತ ನೌಕರರ ತಾಲೂಕು ಸಂಘದ ವಾರ್ಷಿಕೋತ್ಸವ ಹಾಗೂ ನಿವೃತ್ತ ನೌಕರರ ಸನ್ಮಾನ ಕಾರ್ಯಕ್ರಮ

Bharath Vaibhav
ಕರ್ನಾಟಕ ರಾಜ್ಯ ನಿವೃತ್ತ ನೌಕರರ ತಾಲೂಕು ಸಂಘದ ವಾರ್ಷಿಕೋತ್ಸವ ಹಾಗೂ ನಿವೃತ್ತ ನೌಕರರ ಸನ್ಮಾನ ಕಾರ್ಯಕ್ರಮ
WhatsApp Group Join Now
Telegram Group Join Now

ವಿಜಯಪುರ :ಜಿಲ್ಲೆಯಬಸವನ ಬಾಗೇವಾಡಿ ಪಟ್ಟಣದ ವಿರಕ್ತಮಠದಲ್ಲಿ ಕರ್ನಾಟಕ ರಾಜ್ಯ ನಿವೃತ್ತ ನೌಕರರ ತಾಲೂಕು ಸಂಘ ಆಯೋಜಿಸುವ ಮೂಲಕ ಪ್ರಸಕ್ತ ಸಾಲಿನ ವಾರ್ಷಿಕೋತ್ಸವ ಹಾಗೂ 75 ವರ್ಷ ತುಂಬಿದ ನಿವೃತ್ತ ನೌಕರರ ಸನ್ಮಾನ ಕಾರ್ಯಕ್ರಮವನ್ನು ಸಿದ್ದಲಿಂಗ ಸ್ವಾಮಿಗಳು ಹಾಗೂ ಸಚಿವ ಶಿವಾನಂದ್ ಪಾಟೀಲ್ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು .


ನಂತರ ಸಚಿವರಾದ ಕಾರ್ಯಕ್ರಮ ಕುರಿತು ಮಾತನಾಡಿದರು ಚಿಕ್ಕ ವಯಸ್ಸಿಗೆ ಯುವಕರು ಮೃತರಾಗುತ್ತಿದ್ದಾರೆ. ಈಗ ನೀವೇ ಪುಣ್ಯವಂತರು. 75, 80, 90 ದಾಟಿದವರೂ ಇಲ್ಲಿದ್ದೀರಿ. ಕೊರೊನಾ ಭಯದಲ್ಲೂ ಹಿರಿಯರು ಜಪ್ಪೆನ್ನದೆ ಬದುಕಿ ತೋರಿಸಿದ್ದು, ಯುವಕರು ನಾಚುವಂತೆ ಮಾಡಿದೆ. ಜಾತಿಯತೆ, ನಿರುದ್ಯೋಗ, ದುಶ್ಚಟ ಅತಿಯಾಗಿದೆ. ದುಶ್ಚಟಗಳಿಂದ ಯುವಕರ ಆರೋಗ್ಯ ಪೂರ್ಣ ಹದಗೆಟ್ಟು ಮೃತರಾಗುತ್ತಿದ್ದಾರೆ ಅಂತ ಮಾತನಾಡಿದರು.

ಉಪನ್ಯಾಸ ನೀಡಿದ ನಿವೃತ್ತ ಪ್ರಾಧ್ಯಾಪಕ ವೈ.ಬಿ.ಪಟ್ಟಣಶೆಟ್ಟಿ ವಯಸ್ಸು 60-70 ದಾಟಿದ ಮೇಲೆ ಆರೋಗ್ಯದ ಕಡೆಗೆಹೆಚ್ಚು ಸಮಯ ವ್ಯಾಯಾಮ ಮಾಡಿ, ಸಂತ್ಸಂಗ, ಪ್ರವಚನ, ದೇವಸ್ಥಾನ ದರ್ಶನ, ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸು ಆನಂದವಾಗಿರುತ್ತದೆ.

ಜನರಿಗೆ ಸಕ್ಕರೆ ಕಾಯಿಲೆ ಇದೆ. ಇದಕ್ಕೆ ಆಹಾರ ಕಲಬೆರಕೆಯೂ ಕಾರಣ. ಇಂತಹ ಕಲಬೆರಕೆಗೆ ಕಡಿವಾಣ ಹಾಕುಬೇಕು ಅನೇಕ ಕಾಯಿಲೆಯಿಂದಲೂ ಇಂದು ದೇಶದಲ್ಲಿ ಸಾಕಷ್ಟು ಜನರು ಸಾಯುತ್ತಿದ್ದಾರೆ. ಹಿತವಾದ ಊಟ ಮಾಡಿ ಆರೋಗ್ಯ ಕಾಪಾಡಿಕೊಳ್ಳು ಬೇಕು ಎಂದರು.

ನ್ಯಾಯವಾದಿ ಬಿ.ಕೆ.ಕಲ್ಲೂರ, ನಿವೃತ್ತ ನೌಕರರ ಸಂಘದ ಕಾರ್ಯದರ್ಶಿ ಎಸ್.ಕೆ. ಸೋಮನಕಟ್ಟಿ, ಅಧ್ಯಕ್ಷತೆ ವಹಿಸಿದ್ದ ಶ್ರೀ ಎಫ್.ಡಿ.ಮೇಟಿ, ಅಧ್ಯಕ್ಷರು ಕೆ. ರಾ .ನೀ.ನೌ.ಸಂಘ ಬಸವನಬಾಗೇವಾಡಿ. ಮಹಾಂತೇಶ ಆದಿಗೊಂಡ, ಸುರೇಶಗೌಡ ಪಾಟೀಲ ಇತರರು ಮಾತನಾಡಿದರು. ಸಿದ್ದಲಿಂಗ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ವೇದಿಕೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಶ್ರೀ ಎಸ್.ಪಿ.ಬಿರಾದಾರ. (ಕಡ್ಲೆವಾಡ), ಶ್ರೀ ಸುರೇಶ ಹಾರಿವಾಳ, ರೇಣುಕಾ,H. ಶ್ರೀ ಲ.ರು. ಗೊಳಸಂಗಿ ಸೇರಿ ವೇದಿಕೆ ಮೇಲಿದ್ದರು. ಇತರರಿದ್ದರು. 75 ವರ್ಷ ತುಂಬಿದ ೨೦ಜನ ನಿವೃತ್ತರಿಗೆ ಸನ್ಮಾನಿಸಲಾಯಿತು.

WhatsApp Group Join Now
Telegram Group Join Now
Share This Article
error: Content is protected !!