ರೋಣ: ನಮ್ಮ ಕರ್ನಾಟಕ ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಹೊಗಲಾಡಿಸಲು (ಜಿಟಿ ಟಿಸಿ ) ಒಂದು ಉಪಯುಕ್ತ ತರಬೇತಿ ಕೇಂದ್ರವಾಗಿದೆ.
ಇದರಿಂದ ನಿರುದ್ಯೋಗ ಸಮಸ್ಯೆ ಹೂಗಲಾಡಿಸುವ ಎಲ್ಲಾ ಲಕ್ಷಣಗಳು ಇವೆ ಎಂದು ಶಾಸಕ ಹಾಗೂ ಖನಿಜ ಅಭಿವೃದ್ಧಿ ನಿಗಮದ ಅದ್ಯಕ್ಷ ಜಿ. ಎಸ್. ಪಾಟೀಲ ಹೇಳಿದರು.
ಕೌಶಲ್ಯಾಭಿವೃದ್ಧಿ ಉದ್ಯಮ ಶೀಲತೆ ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ ಮತ್ತು ಜೀವನೋಪಾಯ ಇಲಾಖೆ ಇವರ ವತಿಯಿಂದ ರೋಣ ನಗರದ ಬದಾಮಿ ರಸ್ತೆಯಲ್ಲಿ ರೂ. 50 ಕೊಟ್ಟಿ ವೆಚ್ಚದಲ್ಲಿ ಮಂಜೂರಾದ ಹೊಸ ಸರಕಾರಿ ಜಿಟಿ- ಟಿಸಿ. ಕಾಮಗಾರಿ ಪ್ರಾರಂಭೂತ್ಸ ಕಾರ್ಯಕ್ರಮದಲ್ಲಿ
ಮಾತನಾಡಿದರು.
ಈ ಜಿಟಿ-ಟಿಸಿ. ತರಬೇತಿ ಕೇಂದ್ರವು ಕರ್ನಾಟಕ ರಾಜ್ಯದಲ್ಲಿ 40 ಕ್ಕಿಂತ ಕಡಿಮೆ ಸ್ಥಳಗಳಲ್ಲಿ ಮಾತ್ರ ಇದ್ದು ಇದು ರೋಣ ನಗರಕ್ಕೆ ಒಲಿದು ಬಂದಿದ್ದು ರೋಣ ತಾಲೂಕಿನ ಸೌಬಾಗ್ಯವಾಗಿದೆ.
ಕರ್ನಾಟಕ ರಾಜ್ಯ ಸರಕಾರವು ಈಗಾಗಲೇ ಈ ಯೋಜನೆಗೆ 50 ಕೊಟ್ಟಿ ರೂಪಾಯಿ ಅನುದಾನವನ್ನು ನೀಡಿದ್ದು, ಹೆಮ್ಮೆ ಪಡುವಂತಹ ಸಂಗತಿಯಾಗಿದೆ ಎಂದರು.
ತಾಲೂಕಿನ ಸುತ್ತಮುತ್ತಲಿನ ವಿದ್ಯಾರ್ಥಿಗಳು ಈ ಜಿಟಿಟಿಸಿ ತರಬೇತಿ ಕೇಂದ್ರದ ಸದುಪಯೋಗ ಪಡೆಯಬೇಕೆಂಬ ಉದ್ದೇಶ ದಿಂದ ಇದೇ ವರ್ಷ ದಿಂದ ವಿದ್ಯಾರ್ಥಿಗಳಿಗೆ ತರಬೇತಿಗಳನ್ನು ಪ್ರಾರಂಭ ಮಾಡಲಾಗುವುದು ಎಂದರು.
ಗುರುಪಾದ ಮಹಾಸ್ವಾಮಿಗಳು ಗುಲಗಂಜಿಮಠ ದಿವ್ಯಸಾನಿದ್ಯ ವಹಿಸಿದ್ದರು.
ರೋಣ ತಾಲೂಕ ಗ್ಯಾರಂಟಿ ಸಮಿತಿ ಅದ್ಯಕ್ಷ ಮಿಥುನ ಪಾಟೀಲ.
ಪುರಸಭೆ ಅದ್ಯಕ್ಷೆ ಗೀತಾ ಮಾಡಲಗೇರಿ.
ಉಪಾಧ್ಯಕ್ಷ ದುರಗಪ್ಪ ಹಿರೇಮನಿ.
ಐ. ಎಸ್ ಪಾಟೀಲ. ಅಕ್ಷಯ ಪಾಟೀಲ.
ಬಸವರಾಜ ನವಲಗುಂದ.
ಬವಾಸಬ್ ಬೆಟಗೇರಿ.
ಮಲಯ್ಯ ಮಹಾಪುರಷಮಠ.
ಸಂಗಪ್ಪ ಜಿಡ್ಡಿಬಾಗಿಲ.
ನಾಜಬೇಗಂ ಯಲಿಗಾರ.
ಲಕ್ಷ್ಮಿ ಗಡಗಿ. ಸೇರಿದಂತೆ ಮುಂತಾದವರು ಇದ್ದರು.
ಕೌಶಲ್ಯಾಭಿವೃದ್ಧಿ ಉದ್ಯಮ ಶೀಲತೆ ಉಪಕರಣ ಮತ್ತು ತರಬೇತಿ ಕೇಂದ್ರ ಚಾಲನೆ- ಶಾಸಕ ಗುರುಪಾದಗೌಡ ಪಾಟೀಲ
