ಇಳಕಲ್ : ಶ್ರೇಷ್ಠ ತತ್ವಜ್ಞಾನಿ ದಿ.ಮಾನಪ್ಪಜ್ಜ ಅವ್ವಣ್ಣಪ್ಪ ನಾಲತವಾಡ ಅವರು ರಚಿಸಿದ ಅನುಭವ ರಸಾಯನ ಗ್ರಂಥ ಸಾವಿರ ಗ್ರಂಥಗಳಿಗೆ ಸಮಾನ ಎಂದು ಸಂಸ್ಕೃತ ಪಂಡಿತ ಜನಾರ್ಧನ ಪಾಣಿಬಾತೆ ಹೇಳಿದರು
ನಗರದ ಶ್ರೀ ಚೌಡೇಶ್ವರಿ ಮಂಗಲ ಭವನದಲ್ಲಿ ಹಮ್ಮಿ:ಕೊಂಡ ತತ್ವಜ್ಞಾನಿ ದಿ.ಮಾನಪ್ಪಜ ಅವರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಅನುಭವ ರಸಾಯನ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು ಶ್ರೀ ಶಾಲ್ಯ ಸಂಸ್ಥಾನದ ಶ್ರೀ ಕೃಷ್ಣರಾಜರು ಪ್ರಣೀತಪ್ಪ ಅವರು ಬರೆದ ಮೂಲ ಗ್ರಂಥವನ್ನು ದಿ.ಮಾನಪ್ಪಜ್ಜ ಅವರು ಹಳೇಗನ್ನಡಕ್ಕೆ ಗುರು ಶಿಷ್ಯರ ಸಂಭಾಷಣೆಯೊಂದಿಗೆ ಅನುವಾದಿಸಿದ್ದರು ನಂತರ ನಾನು ಸುಮಾರು ಎರಡು ತಿಂಗಳ ಅವಧಿಯಲ್ಲಿ ಈ ಗ್ರಂಥವನ್ನು ಶುದ್ಧ ಕನ್ನಡಕ್ಕೆ ಅನುವಾದಿಸುವ ಸೌಭಾಗ್ಯ ನನ್ನದಾಯಿತು ಎಂದರು
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮಳೆರಾಜೇಂದ್ರಮಠ ಮುರನಾಳದ ಪೂಜ್ಯ ಶ್ರೀ ನಿತ್ಯಾನಂದ ಸ್ವಾಮಿಗಳು,ಪೂಜ್ಯ ಶ್ರೀ ಗುರುನಾಥ ಮಹಾಸ್ವಾಮಿಗಳು ಹಾಗೂ ಬ್ರಹ್ಮಾನಂದ ಭೇರಿ ಮಠದ ವಿಶ್ವನಾಥ ಮಹಾಸ್ವಾಮಿಗಳು, ಬಸವಂತಾಚಾರ್ಯ ಗುರುವಿನ ವಹಿಸಿದ್ದರು.
ಅಮ್ಮಾ ಸೇವಾ ಸಂಸ್ಥೆಯ ಸಂಸ್ಥಾಪಕ ಸದಸ್ಯ ಗುರುದಾಸ ನಾಗಲೋಟಿ,ವಿಶ್ವಕರ್ಮ ಸಮಾಜದ ಹಿರಿಯ ಮುಖಂಡರಾದ ರಾಮಣ್ಣ ಮರೋಳ, ವೀರಭದ್ರಪ್ಪ ಹಿಪ್ಪರಗಿ ಅತಿಥಿಗಳಾಗಿ ಭಾಗವಹಿಸಿದ್ದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ
ಡಾ.ವಿಶ್ವನಾಥ ವಂಶಾಕೃತಮಠ ಹಾಗೂ ನಿವೃತ್ತ ಪ್ರಾಚಾರ್ಯ ಡಾ.ಶಂಕರ ಕಂದಗಲ್ಲ ಅವರಿಗೆ ಆಧ್ಯಾತ್ಮಿಕ ಸೇವಾ ರತ್ನ ಪ್ರಶಸ್ತಿ ನೀಡಿ ಸನ್ಮಾನನಿಸಲಾಯಿತು.
ಚಿನ್ನಪ್ಪ ಸೂಳಿಭಾವಿ, ಗಂಗಾಧರ ನಾಲತವಾಡ, ವಿಶ್ವಕರ್ಮ ನಾಲತವಾಡ, ಸುವರ್ಣಬಾಯಿ ನಾಲತವಾಡ,ಶಿಲ್ಪಾ ನಾಲತವಾಡ, ವೈಶಾಲಿ ನಾಲತವಾಡ,ಲಕ್ಷ್ಮೀ ನಾಲತವಾಡ, ಮುರಳಿಧರ ನಾಲತವಾಡ, ಶಶಿಧರ ನಾಲತವಾಡ, ವಿಶ್ವಕರ್ಮ ಸಮಾಜದ ಹಿರಿಯರು,ಯುವಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಾಹಿತ್ಯ ಬುತ್ತಿ ಹೊತ್ತು ತಂದ ಕುಮಾರಿ ಶ್ರೀರಕ್ಷಾ ನಾಲತವಾಡ ಎಲ್ಲರ ಗಮನ ಸೆಳೆದಳು, ಜಗನ್ನಾತ ಮರೋಳ ತಮ್ಮ ಸ್ವರಚಿತ ಪ್ರಾರ್ಥನೆಯನ್ನ ಹಾಡಿದರು. ಮೌನೇಶ ನಾಲತವಾಡ ಪ್ರಾಸ್ತಾವಿಕವಾಗಿ ಮಾತನಾಡಿದರು, ಮಂಜುನಾಥ ಮರೋಳ ಪರಿಚಯಿಸಿದರು, ಮೌನೇಶ ಪತ್ತಾರ (ತಾವರಗೇರಿ) ನಿರೂಪಿಸಿದರು.
ವರದಿ : ದಾವಲ್ ಶೇಡಂ




