Ad imageAd image

ಶಿರಸಿ ಆಸ್ಪತ್ರೆಯ ಹದಗೆಟ್ಟ ರಸ್ತೆ: Bv ನ್ಯೂಸ್  ಸುದ್ದಿಗೆ ಎಚ್ಚೆತ್ತ ಆರೋಗ್ಯ ಇಲಾಖೆ

Bharath Vaibhav
ಶಿರಸಿ ಆಸ್ಪತ್ರೆಯ ಹದಗೆಟ್ಟ ರಸ್ತೆ: Bv ನ್ಯೂಸ್  ಸುದ್ದಿಗೆ ಎಚ್ಚೆತ್ತ ಆರೋಗ್ಯ ಇಲಾಖೆ
WhatsApp Group Join Now
Telegram Group Join Now

———————-Big ಪಲಶ್ರುತಿ

ಶಿರಸಿ: ಮೊನ್ನೆ ತಾನೇ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಶಿರಸಿ ತಾಲ್ಲೂಕು ಆಸ್ಪತ್ರೆಯ ಮುಖ್ಯ ರಸ್ತೆಯ ಅವ್ಯವಸ್ಥೆಯ ಬಗ್ಗೆ ವರದಿ ತಯಾರಿಸಿ ಬೆಳಕು ಚೆಲ್ಲಿದ್ದರು. ಇದಕ್ಕೆ ಕೂಡಲೇ ಎಚ್ಚೆತ್ತ ಉತ್ತರ ಕನ್ನಡ ಡಿ.ಎಚ್.ಓ ಡಾ.ನೀರಜ್ ಹಾಗೂ ಆರೋಗ್ಯ ಇಲಾಖೆ ಇಂಜಿನಿಯರಿಂಗ್ ಉಪ ವಿಭಾಗದ ಹಾವೇರಿ-ಉತ್ತರ ಕನ್ನಡ ಜಿಲ್ಲೆಗಳ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಆದ ಹರೀಶ್ ರವರು ಸ್ಥಳಕ್ಕೆ ಭೇಟಿಕೊಟ್ಟು, ಈ ರಸ್ತೆಗೆ ತಾತ್ಕಾಲಿಕ ಕಾಯ ಕಲ್ಪ ನೀಡಲು ಕೆಲಸ ಆರಂಭಿಸಿ ದುರಸ್ತಿ ಮಾಡಿಸಿದ್ದಾರೆ. ಇದರಿಂದ ಸಾಕಷ್ಟು ಸಮಸ್ಯೆಯಾಗುತ್ತಿದ್ದ ವಾಹನಗಳು ಹಾಗೂ ರೋಗಿಗಳು ನಿಟ್ಟುಸಿರು ಬಿಡುವಂತಾಗಿದೆ. ಇನ್ನೂ ವರದಿ ತಯಾರಿಸಿದ 24 ಘಂಟೆ ಗಳಲ್ಲೇ ಈ ರಸ್ತೆಗೆ ಕಾಯಕಲ್ಪ ನೀಡಲು ಮುಂದಾದ ಅಧಿಕಾರಿಗಳು, ಇಂಜಿನಿಯರ್ ಗಳು ಮತ್ತು ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಅವರಿಗೆ ಶಿರಸಿ ಭಾಗದ ಜನತೆಯಿಂದ ಪ್ರಶಂಸೆಗಳು ವ್ಯಕ್ತವಾಗುತ್ತಿವೆ.

ವರದಿ: ಬಸವರಾಜು 

 

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!