ಬೆಳಗಾವಿ :ಜಿಲ್ಲೆ ರಾಮದುರ್ಗ ಪಟ್ಟಣದ ತಾಲೂಕ ಪಂಚಾಯತ್ ಸಭಾ ಭವನದಲ್ಲಿ ಸೋಮವಾರ ನಡೆದ 2025 26 ನೇ ಸಾಲಿನ ತ್ರೈಮಾಸಿಕ ಪ್ರಗತಿ ಪರಿಶೀಲನ ಸಭೆಯಲ್ಲಿ ಕಾರ್ಮಿಕ ಇಲಾಖೆ ನಿರೀಕ್ಷಕ ತನ್ನ ಇಲಾಖೆಯ ವರದಿ ವಾಚಿಸುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಶಾಸಕ ಪಟ್ಟಣ ಕೆಲಸದ ವೇಳೆಯಲ್ಲಿ ಇಲಾಖೆಯಲ್ಲಿ ಲಭ್ಯವಿರದೆ ಏಜೆಂಟ್ ಮೂಲಕ ಕೆಲಸ ನಿರ್ವಹಿಸುವ ಕುರಿತು ದೂರುಗಳು ಕೇಳಿ ಬಂದಿವೆ ಸ್ವತಃ ನಾನೇ ಹಲವು ಬಾರಿ ಕಚೇರಿಗೆ ಬಂದರು ಕೈಗೆ ಸಿಗುತ್ತಿಲ್ಲ ನಿಮ್ಮ ನಡೆಯಲ್ಲಿ ಬದಲಾವಣೆ ಕಾಣದೆ ಇದೇ ರೀತಿ ಮುಂದುವರೆದಲ್ಲಿ ಭ್ರಷ್ಟಾಚಾರ ಆರೋಪ ದಡಿಯಲ್ಲಿ ನಿಮ್ಮನ್ನು ಮನೆಗೆ ಕಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು
40 ವರ್ಷಗಳಿಂದ ಅರಣ್ಯ ಇಲಾಖೆಯ ಭೂಮಿಯಲ್ಲಿ ಮನೆ ಮಾಡಿಕೊಂಡಿರುವ ಜನತೆಯನ್ನು ತೆರೆವುಗೊಳಿಸಬೇಡಿ ಅವುಗಳನ್ನು ಅವರಿಗೆ ಸಕ್ರಮಗೊಳಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುತ್ತೇನೆ ಅಂತಹ ಜನತೆಗೆ ಶಾಶ್ವತ ಪರಿಹಾರ ಕಲ್ಪಿಸಲು ಶ್ರಮಿಸುತ್ತೇನೆ ಅರಣ್ಯ ಇಲಾಖೆಯ ಅಧಿಕಾರಿಗಳು ಅಂತಹ ನಾಗರಿಕರಿಗೆ ತೊಂದರೆ ಕೊಡಬಾರದು ಎಂದು ಸೂಚನೆ ನೀಡಿದರು.

ಸಮಸ್ಯೆ ಹೇಳಿಕೊಳ್ಳಲು ಬಂದ ಸಾರ್ವಜನಿಕರೊಂದಿಗೆ ಪೊಲೀಸ್ ಇಲಾಖೆ ಅಧಿಕಾರಿಗಳು ಅನ್ಯೋನ್ಯತೆಯಿಂದ ವರ್ತಿಸಿ ಪರಿಸ್ಥಿತಿ ತಿಳಿಗೊಳಿಸಬೇಕು ಎಂದ ಅವರು ತಶೀಲ್ದಾರ್ ಕಾರ್ಯಾಲಯದಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳು ವಿಳಂಬವಾಗುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿವೆ ಸಾರ್ವಜನಿಕರನ್ನು ಸತಾಯಿಸದೆ ಕೆಲಸ ಕಾರ್ಯ ನಿರ್ವಹಿಸುವಂತೆ ಸ್ಥಳದಲ್ಲಿದ್ದ ತಹಶೀಲ್ದಾರ್ ಪ್ರಕಾಶ್ ಹೊಳೆಪಗೋಳ್ ಅವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಹಾಗೂ ರಾಮ್ದುರ್ಗ ತಾಲೂಕ ಪಂಚಾಯತ್ ಆಡಳಿತ ಅಧಿಕಾರಿ ಚೇತನ್ ಕುಮಾರ್ ತಹಸೀಲ್ದಾರದ ಪ್ರಕಾಶ್ ಹೊಳೆಪ್ಪಗೋಳ ತಾಲೂಕು ಪಂಚಾಯತ್ ಬಸವರಾಜ್ ಐನಾಪುರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ವರದಿ: ಮಂಜುನಾಥ ಕಲಾದಾಗಿ




