Ad imageAd image

ರಾಜ್ಯಕ್ಕೆ ಬರಬೇಕಾಗಿದ್ದ 622 ಕೋಟಿ ರೂ. ನರೇಗಾ ಹಣ ಶೀಘ್ರ ಬಿಡುಗಡೆ : ಶಿವರಾಜ್ ಸಿಂಗ್ ಚೌಹಾಣ್

Bharath Vaibhav
ರಾಜ್ಯಕ್ಕೆ ಬರಬೇಕಾಗಿದ್ದ 622 ಕೋಟಿ ರೂ. ನರೇಗಾ ಹಣ ಶೀಘ್ರ ಬಿಡುಗಡೆ : ಶಿವರಾಜ್ ಸಿಂಗ್ ಚೌಹಾಣ್
WhatsApp Group Join Now
Telegram Group Join Now

ನವದೆಹಲಿ: ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕರ್ನಾಟಕಕ್ಕೆ ಬರಬೇಕಾಗಿದ್ದ ಹಣವನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.

ಲೋಕಸಭೆಯಲ್ಲಿ ಈ ಕುರಿತಾಗಿ ಸದಸ್ಯರೊಬ್ಬರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಕೇಂದ್ರದಿಂದ ಕರ್ನಾಟಕಕ್ಕೆ ನೀಡಬೇಕಿದ್ದ ನರೇಗಾ ಯೋಜನೆ ಬಾಕಿ 622 ಕೋಟಿ ರೂ.ಗಳನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.

ರಾಜ್ಯಕ್ಕೆ ಕೂಲಿ ಮೊತ್ತ 8.94 ಕೋಟಿ ರೂ., ಸಾಮಗ್ರಿ ವೆಚ್ಚ 576 ಕೋಟಿ ರೂ., ಆಡಳಿತಾತ್ಮಕ 37 ಕೋಟಿ ರೂ. ಬಿಡುಗಡೆ ಮಾಡಬೇಕಿದೆ.

ಗ್ರಾಮೀಣಾಭಿವೃದ್ಧಿ ಸಚಿವಾಲಯವು ಕರ್ನಾಟಕಕ್ಕೆ ಬಿಡುಗಡೆ ಮಾಡಬೇಕಿರುವ 622 ಕೋಟಿ ರೂ. ಬಾಕಿ ಇರಿಸಿಕೊಂಡಿದ್ದು, ಇದನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!