Ad imageAd image

ಶ್ರೀರಾಮಚಂದ್ರ, ಶ್ರೀಕೃಷ್ಣ ಗಾಂಧೀಜಿ ಕುರಿತು ಅವಹೇಳನ : ಇಬ್ಬರ ವಿರುದ್ಧ ಎಫ್‌ಐಆರ್ 

Bharath Vaibhav
ಶ್ರೀರಾಮಚಂದ್ರ, ಶ್ರೀಕೃಷ್ಣ ಗಾಂಧೀಜಿ ಕುರಿತು ಅವಹೇಳನ : ಇಬ್ಬರ ವಿರುದ್ಧ ಎಫ್‌ಐಆರ್ 
WhatsApp Group Join Now
Telegram Group Join Now

ಬೀದರ್: ಶ್ರೀರಾಮಚಂದ್ರ, ಶ್ರೀಕೃಷ್ಣ ಹಾಗೂ ಮಹಾತ್ಮಾ ಗಾಂಧೀಜಿ ಕುರಿತು ಅವಹೇಳನಕಾರಿ ಪದ ಬಳಸಿದ ಆರೋಪದಡಿ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಬೀದರ್ ಜಿಲ್ಲೆಯ ಹುಲಸೂರದ ಅಟ್ಟರಗಾ ಗ್ರಾಮದ ಕಾಳಿದಾಸ್ ಅರ್ಜುನ್ ರಾವ್ ಸೂರ್ಯವಂಶಿ ಹಾಗೂ ರಾಹುಲ್.ವಿ ಖಂಡಾರೆ ಎಂಬುವರ ವಿರುದ್ಧ ಅವಹೇಳನಕಾರಿ ಪದ ಬಳಕೆಯ ಹಿನ್ನಲೆಯಲ್ಲಿ ಬಿಎನ್‌ಎಸ್ ಕಾಯ್ದೆಯ ಕಲಂ 299, 196 ಮತ್ತು 353ರ ಅಡಿ ಪ್ರಕರಣ ದಾಖಲಾಗಿದೆ.

ಕಾಳಿದಾಸ್ ಅರ್ಜುನರಾವ್ ಸೂರ್ಯವಂಶಿ ಎಂಬಾತ ಮರಾಠಿ ಭಾಷೆಯಲ್ಲಿ ಶ್ರೀರಾಮಚಂದ್ರ, ಶ್ರೀಕೃಷ್ಣ ಹಾಗೂ ಮಹಾತ್ಮ ಗಾಂಧೀಜಿ ಕುರಿತಂತೆ ಅವಹೇಳನಕಾರಿ ಪದಗಳನ್ನು ಬಳಿ ಕಾಳಿದಾಸ್ ಆಡಿದ ಮಾತುಗಳನ್ನು ರಾಹುಲ್ ವಿ ಖಂಡಾರೆ ಅವರ ಮೊಬೈಲ್ ನಲ್ಲಿ ಚಿತ್ರೀಕರಿಸಿ, ಬಳಿಕ ಅದನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಲಾಗಿತ್ತು. ಆನಂತ್ರ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹರಿದಾಡಿ, ಸಾಕಷ್ಟು ಚರ್ಚೆ ಆಕ್ರೋಶಕ್ಕೆ ಕಾರಣವಾಗಿತ್ತು.

ಈ ಸಂಬಂಧ ಬುಧವಾರದಂದು ತಡರಾತ್ರಿಯವರೆಗೂ ಹಿಂದೂಪರ ಸಂಘಟನೆಗಳಿಂದ ಮೆಹಕರ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದರು. ಅಲ್ಲದೇ ಆರೋಪಿಗಳನ್ನು ಬಂಧಿಸುವಂತೆಯೂ ಆಗ್ರಹಿಸಿದ್ದರು. ಈ ಹಿನ್ನಲೆಯಲ್ಲಿ ಇದೀಗ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!