ಮುದಗಲ್ಲ : ಪುರಸಭೆ ವತಿಯಿಂದ ವಚನಕಾರರಾದ ಮಾದಾರ ಚನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಹಾಗೂ ಉರಿಲಿಂಗಪೆದ್ದಿ ಅವರ ಭಾವಚಿತ್ರಗಳಿಗೆ ಪುರಸಭೆ ಸಿಬ್ಬಂದಿ ಚನಮ್ಮ ದಳವಾಯಿ ಹಿರೇಮಠ ಅವರು ಪೂಜೆ ಮಾಡಿ ಪುಷ್ಪ ಗೌರವ ಸಲ್ಲಿಸಿದರು.
ದಲಿತ ವಚನಕಾರರು ಜಯಂತಿ ಗೆ ದಲಿತರಿಗೆ ಮುಖಂಡರಿಗೆ ಆಹ್ವಾನ ನೀಡದೆ ಪುರಸಭೆ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ಯ ತಾಲೂಕು ಅಧ್ಯಕ್ಷರಾದ ಶರಣಪ್ಪ ಕಟ್ಟಿಮನಿ ಅವರು ಆಕ್ರೋಶ ವ್ಯಕ್ತಪಡಿಸಿದರು
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಶಬೀರ್, ಪುರಸಭೆ ಕಂದಾಯ ವಿಭಾಗದ ಅಧಿಕಾರಿಗಳಾದ ದೇವರಾಜ , ಜಸ್ಸ್ ಪಾಲ್ ಸಿಂಗ್,ನಿಸಾರ್ ಅಹಮದ್, ಕಾಂಗ್ರೆಸ್ ಮುಖಂಡರಾದ ಹುಸೇನ್ ಅಲಿ, ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು..
ವರದಿ:- ಮಂಜುನಾಥ ಕುಂಬಾರ