ಸಿಂಧನೂರು : ಫೆ.5 ಮಾನ್ವಿ ತಾಲೂಕಿನ ಪೋತ್ನಾಳ್ ಶಾಲೆಯಲ್ಲಿ 2ನೇ ತರಗತಿ ಓದುತ್ತಿದ್ದ 7 ವರ್ಷದ ಪುಟ್ಟ ಕಂದಮ್ಮನ ಮೇಲೆ ಅತ್ಯಾಚಾರ ಎಸಿಗಿದ ಆರೋಪಿಗೆ ಕಠಿಣ ಶಿಕ್ಷೆ ನೀಡಲು ಒತ್ತಾಯಿಸಿ ದಲಿತ ವಿದ್ಯಾರ್ಥಿ ಪರಿಷತ್ ಹಾಗೂ ಜನಪರ ಸಂಘಟನೆಗಳ ಒಕ್ಕೂಟಗಳಿಂದ ಬೃಹತ್ ಪ್ರತಿಭಟನೆ ನಡೆಸಿ ಮಾತನಾಡಿ ಶಾಲೆ ಬಿಡುವ ವೇಳೆ ಮದ್ದಲಂಗುಡ್ಡಿ ಗ್ರಾಮದ ಶಿವನಗೌಡ ಎಂಬ 35 ವರ್ಷ ಅದೇ ಗ್ರಾಮದ ಎರಡನೇ ತರಗತಿಯಲ್ಲಿ ಪೋತ್ನಾಳ ವಿದ್ಯಾಭಾರತಿ ಖಾಸಗಿ ಶಾಲೆಯಲ್ಲಿ ಓದುತ್ತಿರುವ ಬಾಲಕಿಯನ್ನು ಗ್ರಾಮಕ್ಕೆ ಕರೆದುಕೊಂಡು ಹೋಗುವ ನೆಪ ಹೇಳಿ ಗ್ರಾಮದ ದಾರಿಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ದಾರಿಯಲ್ಲಿ ಬಿಟ್ಟು ಪರಾರಿಯಾಗಿದ್ದಾನೆ.
ಸಮಯಕ್ಕೆ ಸರಿಯಾಗಿ ಪೋಷಕರು ಜೊತೆ ಮಕ್ಕಳನ್ನು ಕಳಿಸಬೇಕಾಗಿದ್ದ ಶಾಲೆಯ ಮುಖ್ಯಸ್ಥರು ಅಪರಿಚಿತ ವಾಗಿರುವಂತ ಶಿವನಗೌಡ ಎಂಬುವನ ಜೊತೆ ಬಾಲಕಿಯನ್ನು ಕಳಿಸಿದ್ದರಿಂದ ಈ ಕೃತ್ಯ ನಡೆದಿದೆ ಇಂಥ ನೀಚ ಕಾಮುಕರಿಗೆ ಸರ್ಕಾರ ಕಠಿಣ ಶಿಕ್ಷೆಯನ್ನು ನೀಡಿ ಮುಂದೆಂದು ಇಂತಹ ದುಷ್ಕೃತ್ಯಗಳು ಮರುಕಳಿಸದಂತೆ ಕಠಿಣ ಕಾನೂನು ಜಾರಿಗೊಳಿಸಬೇಕು ಹಾಗೂ ಬಾಲಕಿ ಓದುತ್ತಿದ್ದ ವಿದ್ಯಾಭಾರತಿ ಶಾಲೆ ಮುಖ್ಯಸ್ಥರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಮಾನ್ವಿ ತಸಿಲ್ದಾರ್ ಮುಖಾಂತರ ಸನ್ಮಾನ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ- ದಲಿತ ವಿಧ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕ ಮೌನೇಶ್ ಜಾಲವಾಡಗಿ, ತಾಲೂಕು ಸಂಚಾಲಕ ಬಂಡೆ ಗುರು, ದುರ್ಗೇಶ್ ಕಲ್ಮಂಗಿ, ಹುಚ್ಚಪ್ಪ ಉಟಕನೂರು, ಹೊಳೆಯಪ್ಪ ಉಟಕನೂರು, ವಿಜಯರಾಣಿ ಸಿರವಾರ, ಚನ್ನಬಸವ ಯಾಪಲಪರ್ವಿ, ಓಂ ಶ್ರೀ ಮಾನ್ವಿ, ಬಾಲರಾಜ್ ಸಿರವಾರ, ಇನ್ನು ಅನೇಕರಿದ್ದರು.
ಬಸವರಾಜ ಬುಕ್ಕನಹಟ್ಟಿ.