ಮೊಳಕಾಲ್ಮುರು : ತಾಲ್ಲೂಕಿನ ಸಂತೆ ಗುಂಡ ಗ್ರಾಮ ಪಂಚಾಯತಿಯಲ್ಲಿ ಸೋಮವಾರ ನಡೆದ ಉಪಾಧ್ಯಕ್ಷರ ಚುನಾವಣೆಯಲ್ಲಿ ದೇವರಾಜ್ ಆರ್ ಇವರನ್ನು ಅವಿರೋದವಾಗಿ ಎಲ್ಲಾ ಸದಸ್ಯರ ಸಮ್ಮುಖದಲ್ಲಿ ಚುನಾವಣಾಧಿಕಾರಿಗಳಾದ ನಿರ್ಮಲಾದೇವಿ ಘೋಷಣೆ ಮಾಡಿದ್ದಾರೆ.
ಚುನಾವಣೆ ನಡೆದ ಸಂದರ್ಭದಲ್ಲಿ ಜನ ಮೆಚ್ಚಿದ ಯುವ ನಾಯಕ ಎನ್ ವೈ ಚೇತನ್ ಭೇಟಿ ನೀಡಿ ಮಾತನಾಡಿದ ಇವರು ಸಂತೆ ಗುಡ್ಡ ಗ್ರಾಮ ಪಂಚಾಯತಿಯಲ್ಲಿ ಎಲ್ಲಾ ಸದಸ್ಯರ ಸಹಯೋಗದಲ್ಲಿ ದೇವರಾಜ್ ರವರು ಉಪಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಿರುವುದಕ್ಕೆ ಸಂತೋಷವಾಗಿದೆ. ಈ ಗ್ರಾಮ ಪಂಚಾಯತಿಗೆ ಸೇರಿದ ಎಲ್ಲಾ ಗ್ರಾಮಗಳಲ್ಲಿ ಅಭಿವೃದ್ಧಿ ಕೆಲಸ ಮಾಡಲು ಸಹಕಾರ ಮಾಡುತ್ತೇವೆ ಎಂದು ತಿಳಿಸಿದರು.
ನೂತನವಾಗಿ ಆಯ್ಕೆಯಾದ ದೇವರಾಜ್ ಆರ್ ಮಾತನಾಡಿ ನಾನು ಎಲ್ಲಾ ಸದಸ್ಯರು ಜೊತೆಯಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇನೆ. ಗ್ರಾಮ ಪಂಚಾಯತಿಯಲ್ಲಿ ಬರುವ ಉದ್ಯೋಗ ಖಾತರಿ 15th ಹಣಕಾಸು ಕೆಲಸ ಕಾರ್ಯಕ್ರಮ ಮಾಡಿ ಅಭಿವೃದ್ಧಿ ಪಡಿಸುತ್ತೇವೆ ಎಂದು ತಿಳಿಸಿದರು.
ಸಂದರ್ಭದಲ್ಲಿ ಪಿ ಡಿ ಒ ಪಾಲಯ್ಯ ಅಧ್ಯಕ್ಷರು ಶಿಲ್ಪಾ ಗೋವಿಂದಪ್ಪ, ಸದಸ್ಯರಾದ ಭೀಮಪ್ಪ ಎನ್ ವೈ, ದುರುಗಮ್ಮ ಗೋಪಮ್ಮ , ಲಕ್ಷ್ಮಿ ಮಾರಕ್ಕ ನಾಗಮ್ಮ ನಾಗರಾಜ್ ತಂದೆ ಸಣ್ಣ ಚಿತ್ರಯ್ಯ ಓಬಳಾಸ್ವಾಮಿ ತಂದೆ ದೇವೇಂದ್ರಪ್ಪ ಪುಷ್ಪವತಿ ಟಿ ಒ ಸುಮಂಗಳ ಮುಖಂಡರುಗಳಾದ ಎನ್ ಕುಮಾರ್ ಸ್ವಾಮಿ, ಕೆಳಗಳ ಕಣಿವೆ ಪಾಲಯ್ಯ, ಬಾಂಡ್ರಾವಪ್ಪ ಸಿ, ಮಲಿಯಪ್ಪ, ಕೃಷ್ಣ, ನಿರ್ಮಲ ಗೋವಿಂದಪ್ಪ ನರಸಿಂಹ ಪಟೇಲ್ ಇಸ್ಮಾಯಿಲ್ ಗ್ರಾಮ ಪಂಚಾಯತಿ ಸಿದ್ದೇಶ್ ಜಂಬಣ್ಣ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
ವರದಿ : ಪಿಎಂ ಗಂಗಾಧರ