ನಿಪ್ಪಾಣಿ : ಭೋಜ ಪಿ.ಕೆ.ಪಿ.ಎಸ್ ಗೆ ನೂತನ ಅಧ್ಯಕ್ಷರಾಗಿ ಡಾ. ಸುದರ್ಶನ ಮೂರಾಬಟ್ಟೆ ಅವಿರೋಧ ಆಯ್ಕೆ. ಆಡಳಿತ ಮಂಡಳಿಯಿಂದ ಸನ್ಮಾನ ಅಭಿಮಾನಿಗಳಿಂದ ಆನಂದೋತ್ಸವ.
ನಿಪ್ಪಾಣಿ ತಾಲೂಕಿನ ಧರ್ಮ ನಗರಿ ಭೋಜ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿಯಮಿತ ಸದರಿ ಸಂಸ್ಥೆಯ ಮುಂಬರುವ ಕಾಲಾವಧಿಗಾಗಿ ನೂತನ ಅಧ್ಯಕ್ಷರಾಗಿ ಡಾಕ್ಟರ್ ಸುದರ್ಶನ್ ಮುರಾಬಟ್ಟೆ ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಚುನಾವಣಾ ಅಧಿಕಾರಿ ಎಮ್ ಎಸ್ ಪತ್ತಾರ್ ಘೋಷಿಸಿದರು. ಈ ಹಿಂದೆ ಪಿಕೆಪಿಎಸ್ ಸಂಸ್ಥೆಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಪ್ರಶಾಂತ ಪಾಟೀಲರು ತಮ್ಮ ಅಧಿಕಾರವಧಿ ಮುಗಿದಿದ್ದರಿಂದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ತೆರುವಾದ ಸ್ಥಾನಕ್ಕೆ ಇಂದು ಸೋಮವಾರ ಬೆಳಿಗ್ಗೆ 11 ಗಂಟೆಗೆ ಚುನಾವಣಾಧಿಕಾರಿ ಪತ್ತಾರ್ ಅವರ ಕಾರ್ಯವೈಖರಿಯಲ್ಲಿ ಚುನಾವಣೆ ಪ್ರಕ್ರಿಯೆ ಸಂಪನ್ನಗೊಂಡಿತು. ಚುನಾವಣೆ ಅವಧಿ ಮಧ್ಯಾನ 1 ಗಂಟೆಯ ವರೆಗೆ ಅಧ್ಯಕ್ಷ ಸ್ಥಾನಕ್ಕೆ ಕೇವಲ ಒಂದೇ ಒಂದು ನಾಮಪತ್ರ ಸಲ್ಲಿಸಿದ್ದರಿಂದ ಡಾಕ್ಟರ್ ಸುದರ್ಶನ ಮೊರಬಟ್ಟೆ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿರುವುದಾಗಿ ಚುನಾವಣೆ ಅಧಿಕಾರಿಗಳು ಘೋಷಿಸಿದರು. ಡಾಕ್ಟರ್ ಮುರಾಬಟ್ಟಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುತ್ತಿದ್ದಂತೆ ಆಡಳಿತ ಮಂಡಳಿ ಹಾಗೂ ಅವರ ಅಭಿಮಾನಿಗಳಿಂದ ಪಟಾಕಿ ಗುಲಾಲ ಹಾರಿಸಿ ಸಿಹಿ ಹಂಚಿ ಆನಂದಿಸಿದರು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಡಾ.ಸುದರ್ಶನ ಹಾಗೂ ರೈತ ಸಂಘಟನೆಯ ತಾಲೂಕ ಅಧ್ಯಕ್ಷ ರಮೇಶ ಪಾಟೀಲ ಮಾತನಾಡಿ ಶತಮಾನೋತ್ಸವ ಆಚರಿಸಿಕೊಂಡ ಸದರಿ ಸಂಸ್ಥೆ ಪ್ರಗತಿಯತ್ತ ಹೆಜ್ಜೆ ಹಾಕುತ್ತಿದ್ದು ಮಿತ ಖರ್ಚು, ಪಾರದರ್ಶಕ ಆಡಳಿತದೊಂದಿಗೆ ಎಲ್ಲರೂ ಕೂಡಿಕೊಂಡು ವಿಶ್ವಾಸದಿಂದ ಸಂಸ್ಥೆಯನ್ನು ಹೆಮ್ಮರವಾಗಿ ಬಳಸೋಣ ಇದಕ್ಕೆ ತಮ್ಮ ಸಹಕಾರವಿರಲಿ ಎಂದು ಕೇಳಿಕೊಂಡರು. ಮಾಜಿ ಅಧ್ಯಕ್ಷ ಪ್ರಶಾಂತ ಪಾಟೀಲ ಹಾಗೂ ಆಡಳಿತ ಮಂಡಳಿಯಿಂದ ನೂತನ ಅಧ್ಯಕ್ಷರಿಗೆ ಶಾಲ ಶ್ರೀಫಲ ನೀಡಿ ಸನ್ಮಾನಿಸಲಾಯಿತು. ಈ ಸಂಧರ್ಭದಲ್ಲಿ ಉಪಾಧ್ಯಕ್ಷೆ ಶ್ರೀಮತಿ ರಂಜನಾ ಮೂರಾಬಟ್ಟೆ ಸಚಿನ ಕೇಸ್ತೆ ಭರತ ಗುರವ ಇಂದ್ರಯಣಿ ಮಾನೆ,ಅಶ್ವಿನಿ ಮಮದಾಪುರೆ ಬ್ಯಾಂಕ ಪ್ರತಿನಿಧಿ ಸಂತೋಷ ಚವಾಣ್ ಗ್ರಾಮದ ಗಣ್ಯರು ಉಪಸ್ಥಿತರಿದ್ದರು.
ವರದಿ: ಮಹಾವೀರ ಚಿಂಚಣೆ