Ad imageAd image

ನಾಯಿ ತಪ್ಪಿಸಲು ಹೋಗಿ ಬೈಕ್ ಸ್ಕೀಡ್ : ಶಿಕ್ಷಕನ ಸಾವು, ಕಣ್ಣಿರಿಡುತ್ತಿರುವ ಮಕ್ಕಳು 

Bharath Vaibhav
ನಾಯಿ ತಪ್ಪಿಸಲು ಹೋಗಿ ಬೈಕ್ ಸ್ಕೀಡ್ : ಶಿಕ್ಷಕನ ಸಾವು, ಕಣ್ಣಿರಿಡುತ್ತಿರುವ ಮಕ್ಕಳು 
WhatsApp Group Join Now
Telegram Group Join Now

ವಿಜಯಪುರ: ಭೀಕರ ರಸ್ತೆ ಅಪಘಾತದಲ್ಲಿ ಶಿಕ್ಷಕರೊಬ್ಬರು ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಅಂಬಳನೂರ ಕ್ರಾಸ್ ಬಳಿ ನಡೆದಿದೆ.

ವಾಸುದೇವ ಹಂಚಾಟೆ (46) ಮೃತ ಶಿಕ್ಷಕ. ಎಂದಿನಂತೆ ಬೆಳಿಗ್ಗೆ ಬೈಕ್ ನಲ್ಲಿ ಶಾಲೆಗೆ ಹೋಗುತ್ತಿದ್ದ ವೇಳೆ ರಸ್ತೆಯಲ್ಲಿ ನಾಯಿಯೊಂದು ಅಡ್ಡ ಬಂದಿದೆ.

ನಾಯಿಯನ್ನು ತಪ್ಪಿಸಲು ಹೋಗಿ ಬೈಕ್ ಅಪಘಾತಕ್ಕೀಡಾಗಿದೆ.ಅಪಘಾತದ ರಭಸಕ್ಕೆ ವಾಸುದೇವ್ ಅವರಿಗೆ ತಲೆಗೆ ಗಂಭೀರಾವಾದ ಪೆಟ್ಟಾಗಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ವಾಸುದೇವ್ ಕಣಕಾಲ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದರು. ಶಿಕ್ಷಕನ ಸಾವಿನ ಸುದ್ದಿಕೇಳಿ ವಿದ್ಯಾರ್ಥಿಗಳು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಬಸವನಬಾಗೇವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

WhatsApp Group Join Now
Telegram Group Join Now
Share This Article
error: Content is protected !!