ಚಾಮರಾಜನಗರ:ಯಳಂದೂರು ತಾಲೂಕಿನ ವೈಕೆ ಮೋಳೆ ಗ್ರಾಮದಲ್ಲಿ ಶಬರಿಮಲೆ ಸ್ವಾಮಿ ಅಯ್ಯಪ್ಪನ ಮಾಲಧಾರಿಗಳಿಂದ ಸೋಮವಾರ ರಾತ್ರಿ ಹಾಲರವೇ ಉತ್ಸವ ನಡೆಸಲಾಯಿತು.
ಸುಮಾರು 50ರಿಂದ 60 ಜನ ಅಯ್ಯಪ್ಪನ ಭಕ್ತರು 11 ದಿನಗಳ ಕಾಲ ಪೂಜೆ ವೃತವನ್ನು ಮಾಡಿ 11ನೇ ದಿನಕ್ಕೆ ಅಯ್ಯಪ್ಪ ಸ್ವಾಮಿಯ ಭಾವಚಿತ್ರ, ಹಾಗೂ ಮಂಟೇಸ್ವಾಮಿ,ಕಂಡಾಯ ದೊಡ್ಡಮ್ಮತಾಯಿ, ಚಾಮುಂಡೇಶ್ವರಿ ದೇವರುಗಳ ಉತ್ಸವ ಮೂರ್ತಿಗಳನ್ನು ಎರಡು ಕೆರೆ ಸಂಪು ನಿಂದ ಪೂಜೆ ಮಾಡಿ ಅಯ್ಯಪ್ಪನ ಭಕ್ತರು ಸ್ವಾಮಿಯೇ ಅಯ್ಯಪ್ಪ ಎಂದು ಕೂಗುತ್ತಾ ಚಾಮರ ವಾದ್ಯ, ಕೊಂಬು ಕಹಳೆಯೊಂದಿಗೆ ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.
ಗ್ರಾಮದ ಜನರೆಲ್ಲರೂ ಅಯ್ಯಪ್ಪ ಸ್ವಾಮಿಗೆ ಪೂಜೆಯನ್ನು ಸಲ್ಲಿಸಿದರು.ವಿಶೇಷವೆಂದರೆ ಅಯ್ಯಪ್ಪನ ಮಾಲಾದಾರಿಗಳು ಅಯ್ಯಪ್ಪ ಸ್ವಾಮಿಯ ಹಾಗೂ ಮಹಿಷಿಯ ವೇಶ ಧರಿಸಿ ಜನರಿಗೆ ಆಕರ್ಷಿತರಾದರು.
ಅದರಲ್ಲಿ ಮಹಿಷಿ ವೇಸ ಧರಿಸಿದ ಮಹಿಷಿ ಯಂತೆ ನಟಿಸಿ ನಿತಿನ್ ಹಾಲರುವೆ ಉತ್ಸವದಲ್ಲಿ ಎಲ್ಲ ಭಕ್ತಾದಿಗಳ ಗಮನ ಸೆಳೆದರು.
ಅಯ್ಯಪ್ಪ ಭಕ್ತರು ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಶಬರಿಮಲೆ ಯಾತ್ರೆಗೆ ನಾವು ಹೋಗುತ್ತಿದ್ದೇವೆ ಮಂಗಳವಾರ ಅನ್ನಸಂತರ್ಪನ ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದೇವೆ ಭಕ್ತಾದಿಗಳು ಬಂದು ಪ್ರಸಾದವನ್ನು ಸ್ವೀಕರಿಸಬೇಕು.
ಗುರುವಾರ ಇರುಮುಡಿ ಕಟ್ಟಿಕೊಂಡು ಅಯ್ಯಪ್ಪನ ಸನ್ನಿದಿಗೆ ತೇರಾಳುತೇವೆ ಎಂದು ತಿಳಿಸಿದರು.ಅಯ್ಯಪ್ಪನ ಮಾಲಾಧಾರಿಗಳು, ಭಕ್ತರು, ಊರಿನ ಗ್ರಾಮಸ್ಥರೆಲ್ಲರೂ ಹಾಲರುವೆ ಉತ್ಸವದಲ್ಲಿ ಭಾಗವಹಿಸಿದ್ದರು.
ವರದಿ :ಸ್ವಾಮಿ ಬಳೇಪೇಟೆ