ಕೊಪ್ಪಳ: ನಾನು ಹಾಗೂ ಬಿ.ಎಸ್ ಯಡಿಯೂರಪ್ಪ ಅವರು ಇಬ್ಬರೂ ಅಣ್ಣ, ತಮ್ಮನಂತೆ ಎಂದು ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಮತ್ತು ನನ್ನ ನಡುವೆ ವೈಯಕ್ತಿಕ ಸ್ನೇಹವಿದೆ ಆದರೆ ಅದಕ್ಕೂ, ರಾಜಕಾರಣಕ್ಕೂ ಸಂಬಂಧವಿಲ್ಲ.
ನಾನು ಯಡಿಯೂರಪ್ಪ ವಿರೋಧಿಯಲ್ಲ. ಯಡಿಯೂರಪ್ಪರ ವಿರುದ್ಧ ನಾನಿಲ್ಲ, ವೈಯಕ್ತಿಕವಾಗಿ ಅವರನ್ನು ವಿರೋಧಿಸುವುದಿಲ್ಲ. ಆದರೆ ಬಿಜೆಪಿ ಪಕ್ಷ ಅವರ ಕುಟುಂಬದ ಹಿಡಿತದಲ್ಲಿದೆ ಎಂದರು.
ಕಾಂಗ್ರೆಸ್ಗೆ ಹೋಗುತ್ತೀರಾ ಅಥವಾ ಮತ್ತೆ ಬಿಜೆಪಿಗೆ ಹೋಗುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಕೆ.ಎಸ್ ಈಶ್ವರಪ್ಪ, ಕುತ್ತಿಗೆ ಕೊಯ್ದರೂ ನಾನು ಕಾಂಗ್ರೆಸ್ಗೆ ಹೋಗುವುದಿಲ್ಲ, ಆದರೆ ಮತ್ತೆ ನಾನು ಬಿಜೆಪಿಗೆ ಹೋಗಬಹುದು.
ಯತ್ನಾಳ್ ಹಾಗೂ ನಾವು ಒಂದು ಸಂಘಟನೆ ಮಾಡುವ ಪ್ರಯತ್ನವಿಲ್ಲ. ನಾವು ಬಿಜೆಪಿಗೆ ವಾಪಸ್ ಹೋಗಬಹುದು. ನನ್ನ ಪ್ರಯತ್ನ ನಾನು ಮಾಡುತ್ತೇನೆ ಎಂದು ಹೇಳಿದ್ದಾರೆ