ಸಿಂಧನೂರು: ಫೆ:12 ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಪೋತ್ನಾಳ್ ಗ್ರಾಮದ ಶಾಲೆ ಒಂದರಲ್ಲಿ ಮುದ್ದಂಗುಡ್ಡಿ ಗ್ರಾಮದ ಏಳು ವರ್ಷದ ಬಾಲಕಿ ವಿದ್ಯಾ ಭಾರತಿ ಖಾಸಗಿ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿದ್ದು ಅದೇ ಗ್ರಾಮದ ಶಿವನಗೌಡ ಎಂಬ ಕಾಮುಕ 5.2.2025 ರಂದು ಶಾಲೆ ಬಿಟ್ಟು ನಂತರ ನಿನ್ನನ್ನು ಊರಿಗೆ ಬಿಡುತ್ತೇನೆ ಎಂದು ತನ್ನ ಬೈಕ್ ನಲ್ಲಿ ಬಾಲಕಿಯನ್ನು ಕರೆದುಕೊಂಡು ಹೋಗಿ ದಾರಿ ಮಧ್ಯದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಪರಾರಿಯಾಗಿ ನಂತರ ಪೊಲೀಸ್ರಿಗೆ ಸಿಕ್ಕಿದ್ದಾನೆ.
ಚಿಕ್ಕ ಬಾಲಕಿ ಎಂದು ನೋಡದೆ ಪಸುವಿನಂತೆ ವರ್ತಿಸಿದ ಈ ಆರೋಪಿಗೆ ಶೀಘ್ರವೇ ಗಲ್ಲು ಶಿಕ್ಷೆ ವಿಧಿಸಲು ಕರ್ನಾಟಕ ರಕ್ಷಣಾ ಸೇನೆ ತಾಲೂಕು ಸಮಿತಿ ಸಿಂಧನೂರು ತಹಸಿಲ್ದಾರ್ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ- ಉತ್ತರ ಕರ್ನಾಟಕದ ವಿಭಾಗಿ ಅಧ್ಯಕ್ಷ ಗುರುರಾಜ ಮುಕ್ಕುಂದಾ, ತಾಲೂಕ ಅಧ್ಯಕ್ಷ ಅಂಬಿರಾಜ ಮ್ಯಾಕಲ್, ಕಾರ್ಮಿಕ ಘಟಕ ತಾಲೂಕ ಅಧ್ಯಕ್ಷ ದುರುಗೇಶ ಬಾಲಿ, ಯಮನೂರು ಬಸಾಪುರ ಕೆ, ಮೈನುದ್ದೀನ್, ಮುನ್ನ, ಮೈಬೂಬ, ಸದ್ದಾಮ್, ಕಲೀಮ್ ಪಾಷಾ, ಮಂಜುನಾಥ, ಇನ್ನು ಅನೇಕರಿದ್ದರು.
ವರದಿ:ಬಸವರಾಜ ಬುಕ್ಕನಹಟ್ಟಿ