ರಾಯಬಾಗ : ಕೆ.ಏ.ಬಿ. ಸಭಾಭವನದಲ್ಲಿ ಇವತ್ತು ರಾಯಭಾಗ ಕ್ಷೇತ್ರ ಶಾಸಕರಾದ ಶ್ರೀ ದುರ್ಯೋಧಣ ಐಹೊಳೆ ಹಾಗೂ ಕುಡಚಿ ಕ್ಷೇತ್ರ ಶಾಸಕರಾದ ಶ್ರೀ ತಮ್ಮನ್ನವರ ಇವರ ನೇತೃತ್ವದಲ್ಲಿ ಕೆ.ಡಿ.ಪಿ. ಸಭೆ ಹಮ್ಮಿಕೊಳ್ಳಲಾಯಿತು.
ಈ ಸಭೆಯಲ್ಲಿ ರಾಯಬಾಗ್ ರನ್ನ ಆಫೀಸಿನ ಹಿಂದುಗಡೆ ಇರುವ ಸಸಿಗೆ ನೀರು ಹಾಕುವ ಮೂಲಕ ತಾಲೂಕಿಗೆ ಸಂಬಂಧಪಟ್ಟ ಎಲ್ಲ ಅಧಿಕಾರಿಗಳು ಪಿಡಬ್ಲ್ಯೂಡಿ, ಝಡ್ ಪಿ, ಅರಣ್ಯ ಇಲಾಖೆ, ಕೃಷಿ, ಶಿಶು ಅಭಿವೃದ್ಧಿ ಇಲಾಖೆ, ಲ್ಯಾಂಡ್ ಆರ್ಮಿ, ಸಮಾಜ ಕಲ್ಯಾಣ, ಪೊಲೀಸ್ ಇಲಾಖೆ. ಅಬಕಾರಿ, ಮೀನುಗಾರಿಕೆ, ಇನ್ನೂ ಹಲವಾರು ಇಲಾಖೆಯ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿ ವರ್ಷದ ಮೂರು ತಿಂಗಳಿನ ಜಿಲ್ಲಾ ಕಾವರು ಪ್ರಗತಿಯನ್ನು ಚರ್ಚಿಸಿ ಯಾವ ಅಧಿಕಾರಿಗಳು ಎಷ್ಟರ ಮಟ್ಟಿಗೆ ಕೆಲಸ ಕಾರ್ಯಗಳನ್ನು ಮುಗಿಸಿ ಪ್ರಗತಿಯಲ್ಲಿ ಇದ್ದಾರೆ ಅಥವಾ ಬಾಕಿ ಇರುವ ಕಾರ್ಯಗಳನ್ನು ಶಾಸಕರ ಸಮಕ್ಷಮ ಚರ್ಚಿಸಿ ಶಾಸಕರ ಗಮನಕ್ಕೆ ತರಲಾಯಿತು.
ಈ ಸಮಯ ಸಂದರ್ಭದಲ್ಲಿ ಮಾನ್ಯ ರಾಯಬಾಗ ದಂಡಾಧಿಕಾರಿಯಾದ ಮುoಜೆ ಸರ, ತಾಲೂಕ ಪಂಚಾಯತ್ ಇ.ಓ ಶ್ರೀ ಕದ್ದು ಸರ್ ,ಪಿ ಡಬ್ಲ್ಯೂ ಡಿ ಅಧಿಕಾರಿಯಾದ ಶ್ರೀ ಮನುವಡ್ಡರ್, ಝಡ್ ಪಿ ಅಧಿಕಾರಿ ಶ್ರೀ ಶಭಾಷ್ ಭಜಂತ್ರಿ, ಎಲ್ಲಾ ಇಲಾಖೆಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಕೆ.ಡಿ.ಪಿ. ಸಭೆ ನಡೆಸಲಾಯಿತು.
ವರದಿ : ರಾಜು ಮುಂಡೆ




