Ad imageAd image

ರಾಣೆಬೆನ್ನೂರು ನಗರ ಸಭೆ ನೂತನ ಅಧ್ಯಕ್ಷರಿಗೆ, ಉಪಾಧ್ಯಕ್ಷರಿಗೆ ಅಭಿನಂದನೆ : ಕೆಪಿಜೆಪಿ ರಾಷ್ಟ್ರಾಧ್ಯಕ್ಷ ಡಾ.ಡಿ.ಮಹೇಶ್ ಗೌಡ್ರು

Bharath Vaibhav
ರಾಣೆಬೆನ್ನೂರು ನಗರ ಸಭೆ ನೂತನ ಅಧ್ಯಕ್ಷರಿಗೆ, ಉಪಾಧ್ಯಕ್ಷರಿಗೆ ಅಭಿನಂದನೆ : ಕೆಪಿಜೆಪಿ ರಾಷ್ಟ್ರಾಧ್ಯಕ್ಷ ಡಾ.ಡಿ.ಮಹೇಶ್ ಗೌಡ್ರು
WhatsApp Group Join Now
Telegram Group Join Now

ಬೆಂಗಳೂರು: ರಾಜ್ಯದಲ್ಲಿ ಅಂದರೆ 2018ರಲ್ಲಿ ನಡೆದ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ಸಂಸ್ಥಾಪಕ ರಾಷ್ಟ್ರಾಧ್ಯಕ್ಷ ಪೂತ್ತೂರಿನ ಮುತ್ತು ಡಾ.ಡಿ. ಮಹೇಶ್ ಗೌಡರ ನೇತೃತ್ವದಲ್ಲಿ ನಮ್ಮ ಕೆಪಿಜೆಪಿಯಿಂದ ರಾಣೆಬೆನ್ನೂರು ವಿಧಾನ ಸಭೆಗೆ ಸ್ಪರ್ಧಿಸಿ ರಾಜ್ಯದಲ್ಲೇ ಓರ್ವ ಶಾಸಕರು ಆಯ್ಕೆಯಾಗಿ ಸಚಿವರು ಕೂಡಾ ಆದರು ಆಯ್ಕೆಯಾದ ಕೀರ್ತಿ ನಾಡಿನ ಪ್ರಜ್ಞಾವಂತ ಮತದಾರರಿಗೆ ಮತ್ತು ರಾಣೆಬೆನ್ನೂರು ಕ್ಷೇತ್ರದ ಜನತೆಗೆ ಸಲ್ಲುತ್ತದೆ.

ಪ್ರಸ್ತುತ ರಾಣೆಬೆನ್ನೂರು ನಗರ ಸಭೆ ಚುನಾವಣೆಯಲ್ಲಿ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಯ 10 ಸ್ಥಾನವನ್ನು ಗೆಲುವು ಸಾಧಿಸಿ ಎರಡನೇ ಅತಿ ದೊಡ್ಡ ಪಕ್ಷವಾಗಿ ಅದ್ಬುತ ಹೊರ ಹೊಮ್ಮಿದೆ. ಕೆಪಿಜೆಪಿ ಪಕ್ಷವು ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ರಾಣೆಬೆನ್ನೂರು ನಗರ ಸಭೆಗೆ ಅಧಿಕಾರ ಗಿಟ್ಟಿಸಿಕೊಳ್ಳುವಲ್ಲಿ ಕೆಪಿಜೆಪಿ ಪಕ್ಷ ಕಿಂಗ್ ಮೇಕರ್ ಆಗಿ ಸಹಕಾರವನ್ನು ನೀಡಿದೆ.

ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ದಂಡಿನ ಮನೆಯ ನಿವಾಸಿಯಾದ ಪೂತ್ತೂರಿನ ಮುತ್ತು ಡಾ.ಡಿ. ಮಹೇಶ್ ಗೌಡರು ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ ಸ್ಥಾಪಿಸಿದರು.
ಪ್ರಸಕ್ತ ರಾಣೆಬೆನ್ನೂರು ನಗರ ಸಭೆಗೆ ಕಾಂಗ್ರೆಸ್ಸಿನ ಅಧ್ಯಕ್ಷರಾಗಿ ಚಂಪಾ ಬಿಸಲಹಳ್ಳಿ ಮತ್ತು ಕೆಪಿಜೆಪಿಯ ಉಪಾಧ್ಯಕ್ಷರಾಗಿ ನಾಗರಾಜ್ ಪವಾರ್ ಆಯ್ಕೆಯಾಗಿದ್ದು.

ರಾಜ್ಯದಲ್ಲಿ ಇತಿಹಾಸವನ್ನು ನಿರ್ಮಿಸಿದ ಖ್ಯಾತಿ ರಾಣೆಬೆನ್ನೂರು ಮತದಾರ ಪ್ರಭುಗಳಿಗೆ ಸಲ್ಲುತ್ತದೆ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಯ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷ ಡಾ. ಡಿ. ಮಹೇಶ್ ಗೌಡ್ರು ನಗರ ಸಭೆಯ ನೂತನ ಅಧ್ಯಕ್ಷರಿಗೆ, ಉಪಾಧ್ಯಕ್ಷರಿಗೆ ಸರ್ವ ಸದಸ್ಯರಿಗೆ ಮಾಧ್ಯಮ ದ ಮೂಲಕ ಡಾ. ಡಿ. ಮಹೇಶ್ ಗೌಡ್ರು ಅಭಿನಂದನೆ ತಿಳಿಸಿದ್ದಾರೆ.

ವರದಿ : ಅಯ್ಯಣ್ಣ ಮಾಸ್ಟರ್

WhatsApp Group Join Now
Telegram Group Join Now
Share This Article
error: Content is protected !!