Ad imageAd image

ಶಾಸಕರುಚಾಲನೆ ನೀಡಿದ ಕಾರ್ಯಗಳು ಎಲ್ಲಿವರೆಗೆ ಮುಕ್ತಾಯಗೊಂಡಿವೆ ಎಂಬುದನ್ನು ಕೂಡ ಗಮನ ಹರಿಸಬೇಕಿದೆ: ಮಹಾಂತೇಶ್

Bharath Vaibhav
ಶಾಸಕರುಚಾಲನೆ ನೀಡಿದ ಕಾರ್ಯಗಳು ಎಲ್ಲಿವರೆಗೆ ಮುಕ್ತಾಯಗೊಂಡಿವೆ ಎಂಬುದನ್ನು ಕೂಡ ಗಮನ ಹರಿಸಬೇಕಿದೆ: ಮಹಾಂತೇಶ್
WhatsApp Group Join Now
Telegram Group Join Now

ಶಾಸಕರು ತಾವು ಅಭಿವೃದ್ಧಿಯ ಹರಿಕಾರರೆಂದು ಹೇಳಿಕೊಳ್ಳುತ್ತಾರೆ ಆದರೆ ತಾವು ಚಾಲನೆ ನೀಡಿದ ಕಾರ್ಯಗಳು ಎಲ್ಲಿವರೆಗೆ ಮುಕ್ತಾಯಗೊಂಡಿವೆ ಎಂಬುದನ್ನು ಕೂಡ ಗಮನ ಹರಿಸಬೇಕಿದೆ: ಮಹಾಂತೇಶ್

ಸೇಡಂ : ತಾಲೂಕಿನ ಬರುವಂತಹ ಮದನಾ ದಿಂದ ಗುರುಮಠಕಲ್ ಹೋಗುವ ಮಾರ್ಗ ಮಧ್ಯ ಬರುವಂತಹ ಮೋತಕಪಲ್ಲಿ ಶಕಲಾಸಪಲ್ಲಿ ಇಟಕಾಲ ಗೇಟ್ ವರೆಗೆ ರೋಡ್ ಸಂಬಂಧಿಸಿದಂತೆ 2 ತಿಂಗಳ ಹಿಂದೆ 25 ಕೋಟಿ ರೂಪಾಯಿ ಅಡಿಗಲ್ಲು ಪೂಜೆ ಸ್ಥಳೀಯ ಶಾಸಕರು ಹಾಗೂ ಸಚಿವರಾದ ಡಾ.ಶರಣಪ್ರಕಾಶ್ ಪಾಟೀಲ್ ನೇತೃತ್ವದಲ್ಲಿ ಮಾಡಲಾಯಿತು.

ರೋಡ್ ಪಕ್ಕದಲ್ಲಿ ಸ್ವಲ್ಪ ಸ್ವಲ್ಪ ಮಣ್ಣು ತೆಗೆದು ಕೆಲಸ ಪ್ರಾರಂಭವಾಯಿತು ಅನ್ನೊ ರೀತಿ ಮಾಡಿದರು.
ನಂತರ ದಿನಗಳು ಕಳೆದರು ಇದುವರೆಗೂ ಕೆಲಸ ಪ್ರಾರಂಭವಾಗಿಲ್ಲ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಪರಿಹಾರ ನೀಡುವ ಕೆಲಸ ಮಾಡಬೇಕು ಎಂದು ಮಹಾಂತೇಶ ಸಾಹುಕಾರ ಸಾಮಾಜಿಕ ಸೇವಕ ಶಕಲಾಸಪಲ್ಲಿ ಅವರು ಪತ್ರಿಕಾ ಪ್ರಕಟಣೆ ಮುಖಾಂತರ ಆಗ್ರಹ ವ್ಯಕ್ತಪಡಿಸಿದರು.

ಅನೇಕ ರೀತಿಯ ಕೆಲಸಗಳು ನಡೆಯುತ್ತಿವೆ ಆದರೆ ಪ್ರತಿಯೊಂದು ಕೆಲಸವೂ ಅರ್ಧದಲ್ಲಿಯೇ ನಿಂತು ಹೋಗುತ್ತಿವೆ.ಸರಿಯಾದ ಸಮಯಕ್ಕೆ ಕೆಲಸ ಮಾಡದೆ ಇದ್ದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ಮಾಡಿ ಪ್ರಯೋಜನೆ ಏನಿದೆ ಎಂದು ಪ್ರಶ್ನಿಸಿದರು.

ಶಾಸಕರು ತಾವು ಅಭಿವೃದ್ಧಿಯ ಹರಿಕಾರರೆಂದು ಹೇಳಿಕೊಳ್ಳುತ್ತಾರೆ ಆದರೆ ತಾವು ಚಾಲನೆ ನೀಡಿದ ಕಾರ್ಯಗಳು ಎಲ್ಲಿವರೆಗೆ ಮುಕ್ತಾಯಗೊಂಡಿವೆ ಎಂಬುದನ್ನು ಕೂಡ ಗಮನ ಹರಿಸಬೇಕಿದೆ.

ಅನೇಕ ವರ್ಷಗಳ ನಂತರ ಈ ಭಾಗದ ರಸ್ತೆ ಸುಧಾರಣೆಗೆ ಚಾಲನೆ ನೀಡಿ ಅನುಧಾನ ಘೋಷಣೆ ಮಾಡುವ ಮೂಲಕ ಸಂತೋಷ ತಂದಿದೆ ಆದರೆ ಅದನ್ನು ಸಂಪೂರ್ಣಗೊಳಿಸುವ ಕರ್ತವ್ಯ ಕೂಡ ತಮ್ಮ ಮೇಲಿದೆ ಎಂಬುದನ್ನು ಮರೆಯಬೇಡಿ ಎಂದು ಮಹಾಂತೇಶ್ ಹೇಳಿಕೆ ನೀಡಿದರು.

ವರದಿ: ವೆಂಕಟಪ್ಪ ಕೆ ಸುಗ್ಗಾಲ್

WhatsApp Group Join Now
Telegram Group Join Now
Share This Article
error: Content is protected !!