ಹುಮನಾಬಾದ : ಹುಮನಾಬಾದ ತಾಲ್ಲೂಕಿನ ಹುಡಗಿ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕಚ್ಚಾ ರಸ್ತೆ ಕಾಮಗಾರಿ ಮಾಡದೆ ಭೋಗಸ್ ಬಿಲ್ ಸ್ರಷ್ಟಿಸಿ ಸರಕಾರದ ಹಣ ದೂರಪಯೋಗವಾಗಿದೆ ಎಂದು ಆರೋಪಿಸಲಾಗಿದೆ.
ಗ್ರಾಮದ ರಾಜಶೇಖರ ಮಡಿವಾಳ ಹೊಲದಿಂದ ಚಾಂದಪಾಶಾ ಹೊಲದವರೆಗೆ ಹಾಗೂ ಬಾಬು ಉಳಾಗಡ್ಡಿ ಹೊಲದಿಂದ ಮಡಿವಾಳಪ್ಪ ಹೊಲದವರೆಗೆ ಮೆಟಲಿಂಗ್ ರಸ್ತೆ ಕಾಮಗಾರಿ ಮಾಡದೆ ನಕಲಿ ಬಿಲ್ ರೆಡಿ ಮಾಡಿ ಸರ್ಕಾರಕ್ಕೆ ವಂಚಿಸಿ ರೈತರಿಗೆ ಮೋಸ ಮಾಡಿದ್ದಾರೆ ಎಂದು ಗ್ರಾಮದ ರೈತರು,ಗ್ರಾಮಸ್ಥರು ಶುಕ್ರವಾರ ಆರೋಪಿಸಿದರು.
ರೈತರಿಗೆ ಅನುಕೂಲವಾಗಲೆಂದು ಕಚ್ಚಾ ರಸ್ತೆ ಕಾಮಗಾರಿಗೆ ಅನುಮತಿ ನೀಡುತ್ತಿದೆ,ಆದರೆ ಅಧಿಕಾರಿಗಳು ಇದನ್ನು ದುರುಪಯೋಗ ಪಡಿಸಿಕೊಂಡು ಸರಕಾರದ ದುಡ್ಡು ಕೊಳ್ಳೆ ಹೊಡೆಯುತ್ತಿದ್ದಾರೆ.ಇಂತಹ ಅಧಿಕಾರಿಗಳ ವಿರುದ್ಧ ತನಿಖೆಯಾಗಬೇಕು ಹಾಗೂ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯ ಮಾಡಿದರು.
ಪಿಡಿಒ ಶಿವರಾಜ ಮಂಗಲಗಿಕರ್ ಮಾತನಾಡಿ, ಕಾಮಗಾರಿ ಕೈಗೊಳ್ಳಲಾಗಿದೆ ಆದರೆ ಹೆಸರು ಬದಲಾವಣೆಯಾಗಿದೆ.ರೈತರ ಅನುಕೂಲಕ್ಕಾಗಿ ಸ್ವಲ್ಪ ದಿನಗಳಲ್ಲಿ ಕಾಮಗಾರಿ ನಿರ್ಮಿಸಲಾಗುತ್ತದೆ.ಇದಕ್ಕೆ ರೈತರ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.