LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಬೆಸ್ಕಾಂ ಇಲಾಖೆಗೆ 34 ಲಕ್ಷ ಬೆಲೆಬಾಳುವ ಲಾರಿ ಹಸ್ತಾಂತರ

Advertisement
ಮೊಳಕಾಲ್ಮುರು: ಶಾಸಕ ಎನ್ ವೈ ಗೋಪಾಲಕೃಷ್ಣ ಶುಕ್ರವಾರದಂದು ಬೆಸ್ಕಾಂ ಇಲಾಖೆಗೆ 34 ಲಕ್ಷ ಬೆಲೆಬಾಳುವ ಲಾರಿ ಹಸ್ತಾಂತರಿಸಿದರು ಮತ್ತು ವಾಲ್ಮೀಕಿ ಭವನದ ಕಟ್ಟಡದ ಅಂತಿಮ ಹಂತದ ಕಾಮಗಾರಿಯನ್ನು ವೀಕ್ಷಿಸಿದರು.

ಬೆಸ್ಕಾಂ ಇಲಾಖೆಯಿಂದ ಮೊಳಕಾಲ್ಮೂರು ಬೆಸ್ಕಾಂ ಉಪ ವಿಭಾಗದ ಕಚೇರಿಗೆ ನೂತನ ಲಾರಿಯ ವಾಹನವನ್ನು ಪಟ್ಟಣದಲ್ಲಿ ಬೆಸ್ಕಾಂ ಕಚೇರಿ ಆವರಣದಲ್ಲಿ ಹಸ್ತಾಂತರಿಸಿದರು, 34 ಲಕ್ಷ ರೂಪಾಯಿ ಬೆಲೆಬಾಳುವ ಈ ವಾಹನವು ಬೆಸ್ಕಾಂ ಇಲಾಖೆಯ ಟ್ರಾನ್ಸ್ಫಾರಂ ವಿದ್ಯುತ್ ವೈರ್ ಗಳು ಹಾಗೂ ವಿದ್ಯುತ್ ಕಂಬಗಳು ಸೇರಿದಂತೆ ಬೃಹತ್ ಪ್ರಮಾಣ ಸಾಮಗ್ರಿಗಳನ್ನು ಹೊತ್ತಯ್ಯುವ ಲಾರಿ ಇದಾಗಿದೆ, ಇದರಿಂದ ಬೆಸ್ಕಾಂ ಇಲಾಖೆಗೆ ಬೇರಡೆಗೆ ವಿದ್ಯುತ್ ಸಾಮಾಗ್ರಿಗಳನ್ನು ಸಾಗಿಸಲು ಅನುಕೂಲವಾಗುತ್ತದೆ ಇದರಿಂದ ಬೆಸ್ಕಾಂ ಇಲಾಖೆಗೆ ಅನುಕೂಲವಾಗಿದೆ.

ಅದೇ ರೀತಿ ಈ ಭಾಗದ ಪ್ರಮುಖ ಬೇಡಿಕೆಯಾದ ವಾಲ್ಮೀಕಿ ಭವನವು ಅಂತಿಮ ಹಂತದ ಸಿದ್ಧತೆಗಳನ್ನು ನಾಯಕ ಸಮುದಾಯದ ಮುಖಂಡರ ಜೊತೆ ವೀಕ್ಷಿಸಿದರು.ಮುಂದಿನ ತಿಂಗಳ ಒಳಗಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಸ್ಥಳದಲ್ಲಿದ್ದ ಕೆಆರ್ ಐಡಿಎಲ್ ಎ ಇ ಇ ನಟರಾಜ್ ಗೆ ಸೂಚಿಸಿದರು. ಈ ವಾಲ್ಮೀಕಿ ಭವನವು ಈ ಭಾಗದಲ್ಲಿ ಬಡವರಿಗೆ ಅನುಕೂಲವಾಗುತ್ತದೆ. ಕೆಲವೇ ದಿನಗಳಲ್ಲಿ ಉದ್ಘಾಟನೆಗೆ ರೆಡಿಯಾಗಬೇಕು ಎಂದು ಇಂಜಿನಿಯರಿಗಳಿಗೆ ಎಚ್ಚರಿಕೆ ನೀಡಿ ವಾಲ್ಮೀಕಿ ಮುಖಂಡರ ಜೊತೆ ಅಡಿಗೆ ಕೊಟ್ಟಡಿ ಮದುವೆ ಮಂಟಪದ ಒಳಾಂಗಣ ಪಾರ್ಕಿಂಗ್ ವ್ಯವಸ್ಥೆ ಎಲ್ಲಾ ವಿಚಾರವಾಗಿ ವೀಕ್ಷಣೆ ಮಾಡಿ ಕೆಲವೇ ದಿನಗಳಲ್ಲಿ ಉದ್ಘಾಟನೆಗೆ ತಯಾರು ಮಾಡಬೇಕು ಎಂದು ಇಂಜಿನಿಯರಿಗೆ ಎಚ್ಚರಿಸಿದರು.

ಈ ಸಂದರ್ಭದಲ್ಲಿ ತಹಸಿಲ್ದಾರರಾದ ಟಿ ಜಗದೀಶ್ ಬೆಸ್ಕಾಂ ಇಂಜಿನಿಯರಿಂಗ್ಗಳು ಮತ್ತು ಬೆಸ್ಕಾಂ ಸಿಬ್ಬಂದಿ ಮತ್ತು ಬೆಸ್ಕಾಂ ಗುತ್ತಿಗೆದಾರರಾದ ಜಬ್ಬರ್, ಗುತ್ತಿಗೆದಾರರು ಮತ್ತು ಪಟ್ಟಣ ಪಂಚಾಯತಿ ಸದಸ್ಯರಾದ ಎಸ್ ಖಾದರ್, ನಾಗಸಮುದ್ರ ಗೋವಿಂದಪ್ಪ,ನಾಮ ನಿರ್ದೇಶನ ಸದಸ್ಯರಾದ ಜಿ ಪ್ರಕಾಶ್ ಪಟ್ಟಣ ಪಂಚಾಯತಿ ಅಧ್ಯಕ್ಷರು ಸದಸ್ಯರು ಮುಖ್ಯ ಅಧಿಕಾರಿ ಮತ್ತು ವಾಲ್ಮೀಕಿ ಮುಖಂಡರಾದ ಪಟೇಲ್ ಜಿ ಪಾಪು ನಾಯಕ್, ಜಗಳೂರಯ್ಯ ದೇವಯ್ಯ ಮಾರ ನಾಯಕ್ ಪ್ರೇಮ ಸುಧಾ ದೇವಯ್ಯ, ಸತ್ಯನಾರಾಯಣ, ಕಾಂಗ್ರೆಸ್ ಮುಖಂಡರಾದ ಯರ್ಜನಹಳ್ಳಿ ನಾಗರಾಜ್ ಬಿಟಿ ನಾಗಭೂಷಣ್, ಓಬಣ್ಣ ದೇವದಾಸ್ ಇನ್ನು ಹಲವರು ಉಪಸ್ಥಿತರಿದ್ದರು.

ವರದಿ: ಪಿಎಂ ಗಂಗಾಧರ
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ