LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Crime News

ಹೆಂಡತಿಯ ಮೇಲಿನ ಸಿಟ್ಟಿಗೆ ಪುಟ್ಟ ಮಗುವನ್ನು ಮುಳುಗಿಸಿ ಕೊಲೆಗೈದ ತಂದೆ

Advertisement

ಕಲಬುರಗಿ: ಕೌಟುಂಬಿಕ ಜಗಳದ ಹಿನ್ನೆಲೆಯಲ್ಲಿ ಹೆಂಡತಿಯ ಮೇಲಿದ್ದ ಸಿಟ್ಟನ್ನು ಮುಗ್ಧ ಮಗುವಿನ ಮೇಲೆ ತೀರಿಸಿಕೊಂಡ ಅಮಾನವೀಯ ಘಟನೆಯೊಂದು ಜಿಲ್ಲೆಯ ಚಿಂಚೋಳಿ ತಾಲೂಕಿನ ಹಸರಗುಂಡಗಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. 

ಕೇವಲ ನಾಲ್ಕು ವರ್ಷದ ಪುಟ್ಟ ಮಗುವನ್ನು ತಂದೆಯೇ ಜಲಾಶಯದ ನೀರಿನಲ್ಲಿ ಮುಳುಗಿಸಿ ಬರ್ಬರವಾಗಿ ಕೊಲೆ ಮಾಡಿದ್ದಾನೆ.

ಹಸರಗುಂಡಗಿ ನಿವಾಸಿ ಸೋಮರಾವ್ ಹೂಗಾರ್ ಎಂಬಾತನೇ ಈ ಕೃತ್ಯವೆಸಗಿದ ದುರುಳ. ಪತ್ನಿ ಕಲ್ಪನಾ ಜೊತೆಗೆ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿದ್ದ ಈತ, ಆಕೆಯ ಮೇಲಿನ ಸೇಡಿಗೆ ಮಗು ಗುಂಡೇಶ್‌ನನ್ನು (4) ಬಲಿಪಶು ಮಾಡಿದ್ದಾನೆ.

ಜಗಳದ ಬಳಿಕ ಏನೂ ಅರಿಯದ ಪುಟ್ಟ ಮಗುವನ್ನು ಆಡಿಸುವ ನೆಪದಲ್ಲಿ ಮನೆಯಿಂದ ಹೊರಗೆ ಕರೆದೊಯ್ದಿದ್ದ ಈತ, ನೇರವಾಗಿ ನಾಗರಾಳ ಜಲಾಶಯಕ್ಕೆ ಕರೆದೊಯ್ದು ನೀರಿಗೆ ಎಸೆದು ಪರಾರಿಯಾಗಿದ್ದ.

ಮಗು ನಾಪತ್ತೆಯಾಗಿರುವ ಕುರಿತು ಗಾಬರಿಗೊಂಡ ತಾಯಿ ಕಲ್ಪನಾ, ಪತಿಯ ಕೃತ್ಯದ ಬಗ್ಗೆ ಅನುಮಾನಗೊಂಡು ತಕ್ಷಣವೇ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ.

ಮಾಹಿತಿ ಮೇರೆಗೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಕಾರ್ಯಾಚರಣೆ ನಡೆಸಿ ನಾಗರಾಳ ಜಲಾಶಯದಿಂದ ಮಗುವಿನ ಮೃತದೇಹವನ್ನು ಹೊರತೆಗೆದಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿ ಸೋಮರಾವ್‌ನನ್ನು ಪೊಲೀಸರು ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ. ತಂದೆಯ ಕ್ರೂರ ವರ್ತನೆಗೆ ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಾರಿಗೆ ನಿಗಮಗಳ ಮೇಲೆ 'ಶಕ್ತಿ'ಯ ಆರ್ಥಿಕ ಹೊರೆ: 5,650 ಕೋಟಿ ರೂ. ಬಾಕಿ ಪಾವತಿಗೆ ಸವಾಲು ಬೆಳಗಾವಿ, ಕಲಬುರಗಿ, ಹುಬ್ಬಳ್ಳಿ-ಧಾರವಾಡ ಸೇರಿ 5 ಕಡೆ ಜಾಗತಿಕ ತಂತ್ರಜ್ಞಾನ ಕೇಂದ್ರ ಸ್ಥಾಪನೆ ಸಿಎನ್‌ಜಿ ಬೆಲೆ ಮತ್ತೆ ಹೆಚ್ಚಳ : ಕೆಜಿಗೆ 3.89 ರೂ. ಏರಿಕೆ ಪ್ರತಿ ತಿಂಗಳ ಎಲ್ಲಾ ಶನಿವಾರಗಳಂದು 'ಪ್ರಜಾಸೇವಾ ಅಭಿಯಾನ : ಮಾರ್ಗಸೂಚಿ ಬಿಡುಗಡೆ ಲಾಡ್ಸ್ ಟೆಸ್ಟ್ : ಪಾಕಿಸ್ತಾನ 5 ವಿಕೆಟ್ ಗೆ 91ಶ್ರೀ ವೆಂಕಟೇಶ್ವರ ಪ್ರೌಢಶಾಲೆ ಪರಿಸರದ ಮಾಹಿತಿ ಕಾರ್ಯಗಾರ ಕೊಪ್ಪಳ ನಗರಾಭಿವೃದ್ದಿ ಪ್ರಾಧಿಕಾರದಲ್ಲಿ 8.89 ಕೋಟಿ ರೂ. ಹಗರಣ: ದಂಪತಿ ಸೇರಿ ಮೂವರು ಅರೆಸ್ಟ್ ಫೋನ್ ಪೇ ಮೂಲಕ ಲಂಚ : ಮೂವರು ಹೆಡ್ ಕಾನ್ಸ್ ಟೇಬಲ್ ಹಾಗೂ ಓರ್ವ ಹೋಂ ಗಾರ್ಡ್ಹುಬ್ಬಳ್ಳಿಯಲ್ಲಿ ಹಾಡಹಗಲೇ ಯುವಕನ ಬರ್ಬರ ಹತ್ಯೆ :ನಡುರಸ್ತೆಯಲ್ಲೇ ಕೊಚ್ಚಿ ಕೊಂದ ದುಷ್ಕರ್ಮಿಗಳುಹೆಂಡತಿಯ ಮೇಲಿನ ಸಿಟ್ಟಿಗೆ ಪುಟ್ಟ ಮಗುವನ್ನು ಮುಳುಗಿಸಿ ಕೊಲೆಗೈದ ತಂದೆ