LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಬಡವರ ಬಂಧು ಅಂಬಿರಾಜ್ ಮ್ಯಾಕಲ್ಲ್ ಗೆ! ಒಂದು ಸಲಾಂ!

Advertisement
ಸಿಂಧನೂರು : ಜುಲೈ 13 ರಂದು ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಕ್ಷಣಾ ಸೇನೆ ತಾಲೂಕಾಧ್ಯಕ್ಷ ಅಂಬಿರಾಜ್ ಮ್ಯಾಕಲ್ ಅವರ ನೇತೃತ್ವದಲ್ಲಿ ಪದಾಧಿಕಾರಿಗಳು ಸಭೆ ಸೇರಿ ಪ್ರತಿ ತಿಂಗಳ ದಂತೆ ಈ ತಿಂಗಳು ಕಡು ಬಡವರನ್ನು ಹುಡುಕಿ ಅವರಿಗೆ ನಮ್ಮ ಸಂಘಟನೆ ವತಿಯಿಂದ ಪತಿ ಬಾರಿ ಒಂದು ತಿಂಗಳಿಗೆ ಆಗುವಷ್ಟು ದವಸ ಧಾನ್ಯ ಮತ್ತು ತರಕಾರಿಗಳನ್ನು ಆ ಬಡ ಕುಟುಂಬಕ್ಕೆ ನೀಡಲಾಗುತ್ತಿದ್ದು ಈ ತಿಂಗಳ ನಗರದ ಅಂಬೇಡ್ಕರ್ ಕಾಲೋನಿಯ ಯಲ್ಲಮ್ಮ ಕುಂಟ ಜಂಬಣ್ಣ ಸಿಂಧೂಳ್ಳ ಸಮುದಾಯದ ಕುಟುಂಬವನ್ನು ಗುರುತಿಸಿ ಅವರಿಗೆ ದವಸ ಧಾನ್ಯ ಮತ್ತು ತರಕಾರಿಗಳನ್ನು ನಮ್ಮ ಪದಾಧಿಕಾರಿಗಳ ಸಹಾಯದಿಂದ ವಿತರಿಸಲಾಯಿತು ಎಂದು ಅಧ್ಯಕ್ಷ ಅಂಬಿ ರಾಜ್ ಮ್ಯಾಕಲ್ ತಿಳಿಸಿದರು.



ಇದೇ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ಸೇನೆಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಳ್ಳಲಾಯಿತು
"ಪರಶುರಾಮ್ ವಕೀಲರು ಕಾನೂನು ಸಲಹೆಗಾರರಾಗಿ, ವಿಜಯಕುಮಾರ್ ಅಂಬೇಡ್ಕರ್ ನಗರ ಕಾರ್ಮಿಕ ನಗರ ಘಟಕ ಅಧ್ಯಕ್ಷರರಾಗಿ, ಶರಣು ಬಸವ ಸಾಲ್ಗುಂದ ಗ್ರಾಮ ಘಟಕ ಸದಸ್ಯರಾಗಿ, ಯಂಕಮ್ಮ ಹುಲುಗಪ್ಪ ನಗರ ಘಟಕ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು, ಸಮಾಜ ಸೇವೆಯಲ್ಲಿ ತೊಡಗಿರುವ ಸಿದ್ದು ಹೂಗಾರ್, ಪಿಯಾಜ್ ಪೀರ್, ನಾಗರಾಜ್ ಗಸ್ತಿ ಇವರನ್ನು ಸಂಘಟನೆ ವತಿಯಿಂದ ಗೌರವಿಸಿ ಸನ್ಮಾನ ಮಾಡಲಾಯಿತು.



ಈ ಸಂದರ್ಭದಲ್ಲಿ. ತಾಲೂಕಾಧ್ಯಕ್ಷ ಅಂಬಿರಾಜ್ ಮ್ಯಾಕಲ್. ತಾಲೂಕ ಕಾರ್ಮಿಕ ಘಟಕ ಅಧ್ಯಕ್ಷ ದುರುಗೇಶ್ ಬಾಲಿ, ತಾಲೂಕ ಪ್ರಧಾನ ಕಾರ್ಯದರ್ಶಿ , ವಿಜಯಕುಮಾರ್ ಅಂಬಾಮಠ, ತಾಲೂಕ ಉಪಾಧ್ಯಕ್ಷ ಎಂಡಿ. ಮುನ್ನ, ಕಾರ್ಮಿಕ ಘಟಕ ಕಾರ್ಯದರ್ಶಿ ಯಮನೂರು ಬಸಾಪುರ ಕೆ. ರಂಗಾಪುರ ಗ್ರಾಮ ಘಟಕ ಅಧ್ಯಕ್ಷ ಮಹಮ್ಮದ್, ಮಂಜುನಾಥ್ ಗ್ರಾಮೀಣ ಘಟಕ ಅಧ್ಯಕ್ಷ. ಗ್ರಾಮ ಘಟಕ ಅಧ್ಯಕ್ಷ ಮನುಕುಮಾರ್, ಫಾತಿಮಾ ಮಹಿಳಾ ಘಟಕ ತಾಲೂಕ ಅಧ್ಯಕ್ಷೆ, ರೇಣುಕ ನಾಯಕ್ ಮಹಿಳಾ ನಗರ ಘಟಕ ಅಧ್ಯಕ್ಷೆ, ಹುಲಿಗಮ್ಮ ತಾಲೂಕ ಉಪಾಧ್ಯಕ್ಷೆ ಇನ್ನಿತರ ಇದ್ದರು.

ವರದಿ : ಬಸವರಾಜ ಬುಕ್ಕನಹಟ್ಟಿ
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ