ಅಥಣಿ : ತಾಲೂಕಿನ ಮಲಾಬಾದ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಬೇವನೂರು ಗ್ರಾಮದ ಭಂಡಾರ ದೇವರು ಎಂದು ಪ್ರಖ್ಯಾತಿ ಹೊಂದಿರುವ ಶ್ರೀ ಅಮೋಘಸಿದ್ದೇಶ್ವರ ಜಾತ್ರೆಯು ಬಹಳ ಮಹತ್ವಪೂರ್ಣವಾಗಿ ಜಾತ್ರಾ ಮಹೋತ್ಸವ ಅತ್ಯಂತ ಅದ್ದೂರಿಯಾಗಿ ಜರುಗಿತು.
ಜಾತ್ರಾ ಕಮಿಟಿಯ ಯುವ ನಾಯಕರಾದ ಅಶೋಕ್ ಜಾದವ್ ಅವರು ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವೂ ನಮ್ಮ ಗ್ರಾಮದ ದೇವರಾದ ಶ್ರೀ ಅಮೋಘಸಿದ್ದೇಶ್ವರ ಜಾತ್ರೆಯು ಸತತ ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳೊಂದಿಗೆ ಅತ್ಯಂತ ವಿಜೃಂಭಣೆಯಿಂದ ಜಾತ್ರೆಯು ಜರುಗಿತು. ಈ ಕಾರ್ಯಕ್ರಮದ ಮೂರನೇ ದಿನದ ವಿಶೇಷವೇನೆಂದರೆ ದೇವರ ಗುಡಿಯಿಂದ ಗದ್ದೆಯ ವರಿಗೆ ವಿವಿಧ ವಾದ್ಯ ಮೇಳ ಹಾಗೂ ಡೊಳ್ಳು ಕುಣಿತ ದೊಂದಿಗೆ ಹಾಗೂ ಭಕ್ತರು ಭಂಡಾರ ಹಾರಿಸುವ ಮೂಲಕ ಜಾತ್ರೆಯು ಅದ್ದೂರಿಯಾಗಿ ಆಚರಣೆ ಮಾಡಿದರು.
ನಂತರ ಲಕ್ಷ್ಮಣ್ ಕುಂಬಾರ್ ಅವರು ಮಾತನಾಡಿ ಭಂಡಾರ ದೇವರು ಎಂದು ಪ್ರಸಿದ್ಧವಾದ ಶ್ರೀ ಅಮೋಘಸಿದ್ದೇಶ್ವರ ಜಾತ್ರೆಯಲ್ಲಿ ಬೇರೆ ಬೇರೆ ಊರುಗಳಿಂದ ಹಾಗೂ ಮಹಾರಾಷ್ಟ್ರದಿಂದ ಬಂದು ದೇವರುಗಳ ಪಲ್ಲಕ್ಕಿ ಭಾಗವಹಿಸಿದ್ದು ಜಾತ್ರೆಯಲ್ಲಿ ಮೂರು ದಿನಗಳ ಕಾಲ ಸತತ ಬಂದಂತ ಭಕ್ತರಿಗೆ ಊಟದ ವ್ಯವಸ್ಥೆ ಮಾಡಲಾಯಿತು ಜಾತ್ರೆಯು ವಿಜೃಂಭಣೆಯಿಂದ ಜರುಗಿದ್ದು ಜಾತ್ರೆಯಲ್ಲಿ ಎಲ್ಲಾ ರೀತಿಯ ಅನುಕೂಲ ಮಾಡಿದ ಜಾತ್ರಾ ಕಮಿಟಿಗೆ ಶ್ರೇಯಸ್ಸು ಸಲ್ಲಿಸಬೇಕಾಗಿದೆ. ನಮ್ಮ ಗ್ರಾಮದ ಪರವಾಗಿ ಅಭಿನಂದನೆ ಸಲ್ಲಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಜಾತ್ರಾ ಕಮಿಟಿ ಹಿರಿಯರಾದ ಶಿವಾಜಿ ಯಮಗಾರ್ ಕಾಕಾಸಾಬ. ಚೌಗಲಾ. ಕಾಕಾಸಾಬ ಪಾಟೀಲ್. ಸದಾಶಿವ ವಾಘಮಾರೆ. ರುದ್ರಗೌಡ ಪಾಟೀಲ. ಅಪಸಾಬ ಬೋಸಲೆ. ಹನುಮಂತ ಪೂಜಾರಿ. ಶಂಕರ್ ಗ್ಯಾಂಡ್ ಸಚಿನ್ ಪವಾರ್ ಅಪ್ಪಾಸಾಬ್ ನಾಯಕ್ ಹಾಗೂ ಜಾತ್ರಾ ಕಮಿಟಿಯ ಸದಸ್ಯರು ಹಾಗೂ ಊರಿನ ಮುಖಂಡರು ಸುತ್ತಮುತ್ತಲಿನ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ವರದಿ : ರಾಜು ವಾಘಮಾರೆ

