Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನವಗ್ರಹ ಮೈನಾರಿಟಿ ಸೊಸೈಟಿಗೆ 22 ಲಕ್ಷ 85 ಸಾವಿರ ರೂಪಾಯಿಗಳ ಲಾಭ:ಅಧ್ಯಕ್ಷ ಭರತ್ ಕುಮಾರ್ ಖೋತ

Advertisement
ನಿಪ್ಪಾಣಿ : ಶಮನೇವಾಡಿಯ ನವಗ್ರಹ ಮೈನಾರಿಟಿ ಸೊಸೈಟಿಗೆ 22 ಲಕ್ಷ 85 ಸಾವಿರ ರೂಪಾಯಿಗಳ ಲಾಭ. ವಾರ್ಷಿಕ ಸಭೆಯಲ್ಲಿ ಅಧ್ಯಕ್ಷ ಭರತ್ ಕುಮಾರ್ ಖೋತ ಅವರಿಂದ ಮಾಹಿತಿ.

ಮಿತ ಖರ್ಚು ಪಾರದರ್ಶಕ ಆಡಳಿತ, ಸಕಾಲಕ್ಕೆ ಸಾಲ ಮರುಪಾವತಿ, ಗ್ರಾಹಕರ ಠೇವುದಾರರ ಆತ್ಮವಿಶ್ವಾಸ, ಹಾಗೂ ಸಿಬ್ಬಂದಿಯ ತತ್ಪರ ಸೇವೆಯ ಫಲದಿಂದ ಅಲ್ಪಾವಧಿಯಲ್ಲಿಯೇ ಚಿಕ್ಕೋಡಿ ತಾಲೂಕಿನ ಶಮನೇವಾಡಿಯ ನವಗ್ರಹ ಮೈನಾರಿಟಿ ಸೊಸೈಟಿಗೆ ಸನ್ 2024 25 ರ ಅವಧಿಗೆ 22 ಲಕ್ಷ 85 ಸಾವಿರ ರೂಪಾಯಿ ಲಾಭ ಬಂದಿದ್ದು ಸಂಸ್ಥೆಯ ವತಿಯಿಂದ ಸದಸ್ಯರಿಗೆ ಶೇಕಡಾ 10ರಷ್ಟು ಲಾಭಾಂಶ ನೀಡಲಾಗುವುದೆಂದು ಅಧ್ಯಕ್ಷ ಭರತ್ ಕುಮಾರ ಖೋತ
ತಿಳಿಸಿದರು. ಅವರು ಸಂಸ್ಥೆಯ 8ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಾರಂಭದಲ್ಲಿ ನಿರ್ದೇಶಕ ಪುಷ್ಪಕ ಜನಾಜ್ ಸ್ವಾಗತಿಸಿದರು. ಪ್ರಶಾಂತ ಶಿರಗುಪ್ಪೆ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಸಿಬ್ಬಂದಿ ಪೂಜಾ ಪಾಟೀಲ ಪ್ರಸ್ತಾವನೆ ಮಾಡಿದರು.



ವೇದಿಕೆಯಲ್ಲಿಯ ಗಣ್ಯರಿಂದ ದೀಪ ಪ್ರಜ್ವಲನೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ನಡೆಯಿತು. ಸಭೆಯಲ್ಲಿ ಭರತ್ ಕುಮಾರ್ ಖೋತ ಅವರಿಂದ ವರದಿ ವಾಚನ, ಹಾಗೂ ವ್ಯವಸ್ಥಾಪಕಿ ಸುಧಾ ಹಿಪ್ಪರಗಿ ಅವರಿಂದ ಲಾಭ ಹಾನಿ ಅಂದಾಜು ಪತ್ರಿಕೆ ವಾಚನ ಮಾಡಿದರು. ವಾರ್ಷಿಕ ಸಭೆಯಲ್ಲಿ ಉಪಾಧ್ಯಕ್ಷ ಸುನಿಲ್ ಹೇರಿಗೆ ಸಂಚಾಲಕರಾದ ವೃಷಭ ಖೋತ, ಪೋಪಟ ಉದಗಾವೆ, ಶೀತಲ್ ಶಿರಗುಪ್ಪೆ ಅಭಿಜಿತ ಖೋತ, ರವೀಂದ್ರ ಮೋಳೆ,ಅಮಿತ್ ಚೌಗುಲೆ, ನೇಮಿನಾಥ ಮಗದುಮ, ಬಾಬಾ ಸಾಹೇಬ್ ಮಕಾಣದಾರ, ಪದ್ಮಾವತಿ ಖೋತ ಅಸ್ಮಿತಾ ಸಿರಗುಪ್ಪೆ, ಪ್ರಕಾಶ ಉಪಾಧ್ಯೆ ಸೇರಿದಂತೆ ಸಂಸ್ಥೆಯ ಸದಸ್ಯರು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ವರ್ಧಮಾನ ಶಿರಗನ್ನವರ್ ನಿರೂಪಿಸಿ ಭಾವು ಸಾಹೇಬ್ ಖೋತ ವಂದಿಸಿದರು.

ವರದಿ : ಮಹಾವೀರ ಚಿಂಚಣೆ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ