Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ದಲಿತರ ಮೇಲೆ ಜಾತಿ ನಿಂದನೆ :ಶಾಂತಿ ಸಭೆಗೆ ಒತ್ತಾಯ

Advertisement
ಹುಕ್ಕೇರಿ :ತಾಲೂಕಿನ ಗುಡಸ ಗ್ರಾಮದಲ್ಲಿ ದಲಿತ ಸಮುದಾಯದ ಮೇಲೆ ನಡೆಯುತ್ತಿರುವ ಜಾತಿ ನಿಂದನೆ ಮತ್ತು ದೌರ್ಜನ್ಯ ಪ್ರಕರಣಗಳು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಗ್ರಾಮಸ್ಥರು ಶಾಂತಿಯುತ ಧರಣಿ ಹೋರಾಟ ಆರಂಭಿಸಲು ಸಜ್ಜಾಗಿದ್ದಾರೆ.

ಗುಡಸ ಗ್ರಾಮದ ದಲಿತ ಸಮುದಾಯದವರು ಕಳೆದ 35-40 ವರ್ಷಗಳಿಂದ ಸರ್ಕಾರಿ ಗಾಯರಾಣ ಭೂಮಿಯಲ್ಲಿ ಜಾತ್ಯಾತೀತವಾಗಿ ವಾಸವಿದ್ದು, ದನಕರುಗಳಿಗೆ ಮೇಯಲು ಹಾಗೂ ಕೃಷಿ ಚಟುವಟಿಕೆಗಳ ಮೂಲಕ ತಮ್ಮ ಜೀವನ ನಡೆಸುತ್ತಿದ್ದಾರೆ. 258 ಎಕರೆ ಪ್ರದೇಶ ಖಾಲಿಯಿರುವ ಈ ಭೂಮಿಯಿಂದ ಯಾವುದೇ ಸಾರ್ವಜನಿಕ ಹಾನಿಯೂ ಉಂಟಾಗಿಲ್ಲ.

ಆದರೆ ಇತ್ತೀಚೆಗೆ ಕೆಲ ವ್ಯಕ್ತಿಗಳು ಈ ಪ್ರದೇಶದ ಮೇಲಿನ ಆಧಿಪತ್ಯಕ್ಕೆ ಸಂಬಂಧಿಸಿ ಜಾತಿ ನಿಂದನೆ, ಮೌಖಿಕ ಅವಮಾನ ಹಾಗೂ ದೌರ್ಜನ್ಯಕ್ಕೆ ಮುಂದಾಗಿದ್ದಾರೆ. ನಿನ್ನೆ ರಾತ್ರಿ ಕೂಡ ಇದೇ ರೀತಿಯ ಅಪಮಾನಕಾರಿ ಘಟನೆ ನಡೆದಿದ್ದು, ಸಮುದಾಯದಲ್ಲಿ ಭೀತಿಯ ವಾತಾವರಣ ಉಂಟಾಗಿದೆ.
ದಲಿತ ಮುಖಂಡರು:
“ಇದು ಕೇವಲ ನಮ್ಮ ಹಕ್ಕಿಗಾಗಿ ಹೋರಾಟ. ನಾವು ಶಾಂತಿಯುತವಾಗಿ ಈ ಭೂಮಿಯಲ್ಲಿ ವಾಸಿಸುತ್ತಿದ್ದೇವೆ. ಆದರೆ ಇತ್ತೀಚಿನ ಘಟನೆಗಳು ನಮ್ಮನ್ನು ನೋಯಿಸಿವೆ. ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕು.”

ಇಂದು, ದಲಿತ ಸಮುದಾಯದ ಪ್ರಮುಖರು ಹುಕ್ಕೇರಿ ತಹಶೀಲ್ದಾರ್ ಹಾಗೂ ಸಿಪಿಐ ಅಧಿಕಾರಿಗಳಿಗೆ ಭೇಟಿ ನೀಡಿ ಘಟನೆ ಕುರಿತು ವಿವರ ನೀಡಿ, ಶಾಂತಿ ಸಭೆ ನಡೆಸಬೇಕು ಹಾಗೂ ಆರೋಪಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.

ಬೇಡಿಕೆಗಳು:
ಶಾಂತಿ ಸಭೆ ನಡೆಸಿ ಗ್ರಾಮದಲ್ಲಿ ಶಾಂತಿಯುತ ವಾತಾವರಣ ಕಾಪಾಡಬೇಕು,ಜಾತಿ ನಿಂದನೆ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ,ಗಾಯರಾಣ ಭೂಮಿಯಲ್ಲಿ ವಾಸವಿರುವ ದಲಿತರಿಗೆ ಹಕ್ಕು ಕಾಯ್ದುಕೊಳ್ಳಲು ಅವಕಾಶ
ಯಾವುದೇ ತೊಂದರೆ ಇಲ್ಲದೆ ವಾಸಿಸಲು ಸರ್ಕಾರದಿಂದ ಅನುಮತಿ
ಹೋರಾಟದ ಎಚ್ಚರಿಕೆ:
“ಇದು ಕೇವಲ ಗುಡಸವಷ್ಟೆ ಅಲ್ಲ, ಇಡೀ ತಾಲೂಕಿನಲ್ಲಿ ಇದಕ್ಕಿಂತಲೂ ಭಯಾನಕ ಅತಿಕ್ರಮಣಗಳಿವೆ. ನಮ್ಮ ಮೇಲೆ ಕ್ರಮ ಕೈಗೊಳ್ಳುವುದಕ್ಕಿಂತ ಮುಂಚೆ ಎಲ್ಲೆಡೆ ಸಮಾನವಾದ ನೀತಿ ಅನ್ವಯಿಸಬೇಕು. ಇಲ್ಲವಾದರೆ ನಾಳೆಯಿಂದ ಧರಣಿ ಹಾಗೂ ಗೆರಾವ್ ಚಳವಳಿಗೆ ನಾವು ಸಿದ್ಧ.”

ಈ ಸಂದರ್ಭದಲ್ಲಿ ಶ್ರೀಕಾಂತ ತಳವಾರ, ಕೆಂಪಣ್ಣ ಶಿರಹಟ್ಟಿ, ಯಮನಪ್ಪ ಕಾಂಬಳೆ, ಮಾರುತಿ ಕಾಂಬಳೆ, ಶಿವಾನಂದ ಮಾಳಕರಿ, ಮಂಜು ಕಾಮತ, ಸಾವಿತ್ರಿ ಬಂಗಾರಿ ಮತ್ತು ಅನೇಕ ದಲಿತ ಮುಖಂಡರು ಈ ಸಂದರ್ಭ ಹಾಜರಿದ್ದರು. ಶಾಂತತೆಯೊಂದಿಗೆ ನ್ಯಾಯ ಒದಗಿಸಲು ಅಧಿಕಾರಿಗಳು ಮುಂದಾಗಬೇಕೆಂದು ಅವರ ಮನವಿ.

 ವರದಿ: ಶಿವಾಜಿ ಎನ್ ಬಾಲೆಶಗೋಳ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ