Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ತಾಲೂಕಾಡಳಿತದಿಂದ ದೇವರ ದಾಸಿಮಯ್ಯ ಜಯಂತ್ಯೋತ್ಸವ ಆಚರಣೆ

Advertisement
ಸಿರುಗುಪ್ಪ : ನಗರದ ತಾಲೂಕು ಕಛೇರಿಯಲ್ಲಿ ತಾಲೂಕಾಡಳಿತ ಹಾಗೂ ಪದ್ಮಶಾಲಿ, ಸ್ವಕುಳಶಾಲಿ, ಕುರುಹಿನಶೆಟ್ಟಿ, ತೊಗಟಿವೀರ, ದೇವಾಂಗ ಮತ್ತು ನೇಕಾರ ಸಮುದಾಯಗಳ ಒಕ್ಕೂಟದ ವತಿಯಿಂದ ನಡೆದ ದೇವರ ದಾಸಿಮಯ್ಯ ಜಯಂತ್ಯೋತ್ಸವವನ್ನು ಶಿರಸ್ಥೆದಾರ ಸಿದ್ದಾರ್ಥ್ ಕಾರಂಜಿಯವರು ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ದೇವರ ದಾಸಿಮಯ್ಯನವರು ಉತ್ತಮ ನಡತೆ, ನೀತಿ, ನ್ಯಾಯ, ಧರ್ಮ ಹಾಗೂ ಜೀವನದ ಮೂಲ ಉದ್ದೇಶವನ್ನು ತಮ್ಮ ವಚನಗಳಲ್ಲಿ ಉಲ್ಲೇಸುತ್ತಾ ನೇಯ್ಗೆ ಕಾಯಕದ ಮೂಲಕ ಶಿವನನ್ನು ಒಲಿಸಿಕೊಂಡು ದೇವರ ದಾಸಿಮಯ್ಯನೆಂದು ಪ್ರಖ್ಯಾತಿಯಾಗಿದ್ದಾರೆ.

ಅವರಂತೆ ಸಮಾಜ ಹಿತಚಿಂತನೆಯ ಮಾರ್ಗದಲ್ಲಿ ನಮ್ಮೆಲ್ಲರಿಗೆ ಆದರ್ಶರಾಗಿರುವ ಸಂತರು, ದಾರ್ಶನಿಕರು, ಶರಣರ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಜೀವನವನ್ನು ನಡೆಸೋಣವೆಂದು ತಿಳಿಸಿದರು.

ಪದ್ಮಶಾಲಿ, ಸ್ವಕುಳಶಾಲಿ, ಕುರುಹಿನಶೆಟ್ಟಿ, ತೊಗಟಿವೀರ, ದೇವಾಂಗ ಮತ್ತು ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಬಿ.ಸತ್ಯನಾರಾಯಣ ಅವರು ಮಾತನಾಡಿ ಚೈತ್ರಶುದ್ದ ಪಂಚಮಿಯಂದು ಯಾದಗಿರಿ ಜಿಲ್ಲೆಯ ಮುದನೂರು ಗ್ರಾಮದಲ್ಲಿ ಜನಿಸಿದ ದೇವರ ದಾಸಿಮಯ್ಯ ಅವರು ಭಗವಂತನ ಅನುಕರಣೆಯೊಂದಿಗೆ ಶಿವ ಪರಮಾತ್ಮನನ್ನು ಒಲಿಸಿಕೊಂಡಿದ್ದಾರೆ.

176ಕ್ಕೂ ಅಧಿಕ ವಚನಗಳನ್ನು ಬರೆದಿರುವ ಅವರ ಅಂಕಿತ ನಾಮ ರಾಮನಾಥ ಎಂಬುದಾಗಿದೆ. ನೇಯ್ಗೆ ವೃತ್ತಿಯ ಮೂಲಕ ಹಲವು ಜೀವನದ ಸಾರಾಂಶವನ್ನು ತಿಳಿಸಿದ ಇವರು ನಮ್ಮ ನೇಯ್ಗೆ ಸಮುದಾಯಗಳ ಆರಾಧ್ಯ ದೇವ ಪುರುಷರಾಗಿದ್ದಾರೆಂದು ತಿಳಿಸಿದರು.

ಇದೇ ವೇಳೆ ನೇಯ್ಗೆ ಒಕ್ಕೂಟ ಸಮುದಾಯಗಳ ಗೌರವಾಧ್ಯಕ್ಷ ಶಿವಶಂಕರ ರೋಖಡೆ, ಮುಖಂಡರುಗಳಾದ ಶ್ರೀರಾಮುಲು, ಶರಣಪ್ಪ, ರಮೇಶ, ಗೋಪಾಲಕೃಷ್ಣ, ವೆಂಕಟೇಶ, ರಾಧಾದೇವಿ, ಲಕ್ಷ್ಮಿ ಸೇರಿದಂತೆ ಇನ್ನಿತರರು ಇದ್ದರು.

ವರದಿ : ಶ್ರೀನಿವಾಸ ನಾಯ್ಕ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ