LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಸಿಐಟಿಯು ಬಂಡಿಗಾಡಿ ಪಕ್ಷದ ಎಸ್ ಎಂ ಶಫೀ, ಕೆ ಮಹಾಂತೇಶ ಜಯಭೇರಿ

Advertisement
ಗೋವಾ ಟೀಮ್ ಎಂದವರಿಗೆ ಗೋ ಬ್ಯಾಕ್ ಎಂದ ಕಾರ್ಮಿಕರು

ಹಟ್ಟಿ ಚಿನ್ನದ ಗಣಿ ಸಿಬ್ಬಂದಿ ಹಾಗೂ ಕಾರ್ಮಿಕರ ಸಂಘದ ಚುನಾವಣೆ
ಬುದ್ಧಿವಂತ ಚಿನ್ನದ ಗಣಿ ಕಾರ್ಮಿಕ ಚಿನ್ನದ ಗಣಿ ಕಾರ್ಮಿಕರ ಆಶೀರ್ವಾದದಿಂದ ಇಂದು ಸಿಐಟಿಯು ಬಂಡಿಗಾಲಿ ಪಕ್ಷ 13 ಸ್ಥಾನಗಳನ್ನು ಗೆಲ್ಲುವ ಮೂಲಕ ಜಯಭೇರಿ ಬಾರಿಸಿದೆ ಅಧ್ಯಕ್ಷರಾಗಿ ಕೆ ಮಹಾಂತೇಶ ಗೆಲುವು ಸಾಧಿಸಿದರೆ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಎಸ್ ಎಂ ಶಫೀ ಗೆಲುವು ಸಾಧಿಸಿದ್ದಾರೆ.
ಚಂದ್ರಶೇಖರ್ ಆನ್ವರಿ ( ಶಾಂತಪ್ಪ ಆನ್ವರಿ ),ಯಂಕೋಬ ಮಿಯ್ಯಪುರ, ಜಮದಗ್ನಿ ಕೋಠಾ, ಗೌಸ್ ಮಿಯಾ, ನಾಗರಾಜ್ ಡಿ, ರಮೇಶ್ ಬಾಬು, ಮಹಮ್ಮದ್ ಹನೀಫ್, ಸಿದ್ದಪ್ಪ ಮುಂಡರಗಿ, ಚಂದ್ರಶೇಖರ್ ನೆಲೋಗಿ , ಹನುಮಂತಗೌಡ ಗುರಿಕಾರ್, ಗುಂಡಪ್ಪಗೌಡ ಗುರಿಕಾರ್, ಜಯಭೇರಿ

ಎಐಟಿಯುಸಿ ತಕ್ಕಡಿ ಪಕ್ಷದ ಆರು ಜನ ಅಭ್ಯರ್ಥಿಗಳಿಗೆ ಚಿನ್ನದ ಗಣಿ ಕಾರ್ಮಿಕರು ಆಶೀರ್ವಾದ ಮಾಡಿದ್ದಾರೆ ತಿಪ್ಪಣ್ಣ, ಗಂಗಪ್ಪ, ಎಂ ಡಿ ಮುನಿರುದ್ದೀನ್, ಉಮಾಪತಿ, ಹನುಮಂತರಾಯ, ಮಹಿಳೆ ಅಭ್ಯರ್ಥಿಯಾಗಿ ಪೆಂಚಲಮ್ಮ ಗೆಲುವು ಸಾಧಿಸಿದ್ದಾರೆ.

ಆಕಳು ಪಕ್ಷದಿಂದ ಸ್ಪರ್ಧೆ ಮಾಡಿದ ಆರು ಜನ ಅಭ್ಯರ್ಥಿಗಳು ಗುರುರಾಜ್, ಮೌನೇಶ್ ನಾಯಕ್, ಹಾಜಿ ಬಾಬು, ಅಮರೇಶ್, ಡಾ. ಕುಪ್ಪಣ್ಣ, ಗ್ಯಾನಪ್ಪ, ಗೆಲುವು ಸಾಧಿಸಿದ್ದಾರೆ.

ಈ ಬಾರಿ ಚಿನ್ನದ ಗಣಿ ಕಾರ್ಮಿಕರು ಬುದ್ದಿವಂತಿಕೆಯ ಮತದಾನ..!

ಎಐಟಿಯುಸಿ ಸಂಘದಿಂದ ಹೊರ ಬಂದ 15 ಜನ ಮುಖಂಡರು ಹಟ್ಟಿ ಚಿನ್ನದ ಗಣಿ ಸಿಬ್ಬಂದಿ ಹಾಗೂ ಕಾರ್ಮಿಕ ಸಂಘದ ಚುನಾವಣೆಯನ್ನು ಗೆಲ್ಲಲೇ ಬೇಕೆಂಬ ಆಟದಿಂದ ಎಸ್ ಎಂ ಶಫೀ ನೇತೃತ್ವದಲ್ಲಿ ಸಿಐಟಿಯು ಸಂಘಟನೆಯನ್ನು ಸೇರ್ಪಡೆಗೊಂಡು ಹಟ್ಟಿ ಚಿನ್ನದ ಗಣಿ ಸಿಬ್ಬಂದಿ ಹಾಗೂ ಕಾರ್ಮಿಕರ ಚುನಾವಣೆಗೆ ಬಂಡಿಗಾಲಿ ಗುರುತಿಗೆ ಸ್ಪರ್ಧೆಗೆ ಮುಂದಾದ ಮುಖಂಡರಿಗೆ
ಪ್ರಚಾರ ಸಂದರ್ಭದಲ್ಲಿ ಎಐಟಿಯುಸಿ ಸಂಘದ ಮುಖಂಡರು ಗೋವಾ ಟೀಮ್ ಎಂದು ಟೀಕೆ ಮಾಡಿದ್ದರು ಅದಕ್ಕೆ ಪ್ರತ್ಯುತ್ತರವಾಗಿ ಈ ಚುನಾವಣೆಯನ್ನು ಗೆದ್ದು ಗೋವಾ ಟೀಮ್ ಎಂದವರಿಗೆ ಗೋ ಬ್ಯಾಕ್ ಎಂದಿದ್ದಾರೆ ಎಐಟಿಯುಸಿ ತಕ್ಕಡಿ ಗುರುತಿನ ಪಕ್ಷದಲ್ಲಿ ಘಟಾನುಗಟಿ ಮುಖಂಡರು ಸೋಲನ್ನುವಿಸಿದ್ದು
ನೋಡಿದರೆ ಒಬ್ಬ ಸ್ಥಳೀಯ ಹಿರಿಯ ಮುಖಂಡನಾದ ಎಸ್ ಎಂ ಶಫಿ ಇವರನ್ನು ದೂರ ಮಾಡಿರುವುದರಿಂದ ಕಳೆದ ಬಾರಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಎಐಟಿಯುಸಿ ತಕ್ಕಡಿ ಪಕ್ಷ ಈ ಚುನಾವಣೆಯಲ್ಲಿ ಘಟಾನುಘಟಿ ನಾಯಕರು ಸೋಲುವಂತಾಗಿದೆ. ಈ ಬಾರಿ ಆಕಳು ಪಕ್ಷ ಹಲವಾರು ಭರವಸೆಗಳೊಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದರು ಚಿನ್ನದ ಗಣಿ ಕಾರ್ಮಿಕರು ಕೇವಲ ಆರು ಜನ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ನೀಡಿದ್ದಾರೆ ಪಕ್ಷದ ಪ್ರಮುಖ ನಾಯಕರದ ವಾಲೇ ಬಾಬ್ ಕೆಲವೇ ಕೆಲವು ಮತಗಳ ಅಂತರದಿಂದ ಸೋಲನ್ನು ಕಂಡಿದ್ದಾರೆ.

ಈ ಬಾರಿ ಚುನಾವಣೆಯಲ್ಲಿ ಟಿ ಯು ಸಿ ಐ ಮತ್ತು ಬಿಎಂಎಸ್ ಪಕ್ಷಗಳ ಅಭ್ಯರ್ಥಿಗಳು ಯಾರು ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ ಮುಂಬರುವ 2026 ಹೊಸ ವೇತನ ಒಪ್ಪಂದದ ಆಶಾಕಿರಣದಲ್ಲಿ ಹಾಗೂ ಕಾರ್ಮಿಕರ ಬಹುನಿರೀಕ್ಷಿತ ಮೆಡಿಕಲ್ ಆನ್ ಫಿಟ್ ಈಗಾಗಲೇ ಬಹುದೊಡ್ಡ ಕಾರ್ಮಿಕರ ಆಶೀರ್ವಾದ ಪಡೆದು ಜಯಭೇರಿ ಬಾರಿಸಿದ ಸಿಐಟಿಯು ಬಂಡಿಗಾಲಿ ಪಕ್ಷದ ಮುಖಂಡರು ಕಾರ್ಮಿಕರಿಗೆ ನೀಡಿದ ಆಶ್ವಾಸನೆಗಳನ್ನು ಯಾವ ರೀತಿ ಈಡೇರಿಸುತ್ತಾರೆ ಅನ್ನುವುದನ್ನು ಕಾಯ್ದು ನೋಡೋಣ.

ವರದಿ : ಶ್ರೀನಿವಾಸ ಮಧುಶ್ರೀ
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ