ಹುಕ್ಕೇರಿ :ತಾಲೂಕಿನ ಒಂದು ಗ್ರಾಮದಲ್ಲಿ ರಕ್ತ ಕ್ರಾಂತಿ ಆದಾಗ ಯಾರೂ ಧ್ವನಿ ಎತ್ತಲಿಲ್ಲ. ಆದರೆ ಸಮಾಜಕ್ಕಾಗಿ ಹೋರಾಟ ಮಾಡುವ ನಾಯಕನ ಬಗ್ಗೆ ಮಾತನಾಡಲು ಎಸಿ ರೂಮ್ನಲ್ಲಿ ಪತ್ರಿಕಾ ಗೋಷ್ಠಿ ಮಾಡುತ್ತೀರಿ" ಎಂದು ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ಹುಕ್ಕೇರಿ ಘಟಕದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಮಹಾಸಭಾ ಕಚೇರಿಯಲ್ಲಿ ಮಾತನಾಡಿದ ಮುಖಂಡರು, "ಒಬ್ಬ ನಾಯಕನನ್ನು 'ಸ್ವಯಂ ಘೋಷಿತ ನಾಯಕ' ಎನ್ನುತ್ತೀರಿ. ಆದರೆ ಅವರು ಕೆಳಮಟ್ಟದಿಂದ ಬೆಳೆದು ಕಾಂಗ್ರೆಸ್ ಪ್ರಚಾರ ಸಮಿತಿ ಸದಸ್ಯರ ಸ್ಥಾನ, ಜಿಲ್ಲಾ ಛಲವಾದಿ ಅಧ್ಯಕ್ಷ ಸ್ಥಾನ ಪಡೆದಿದ್ದಾರೆ. ಸಾಕಷ್ಟು ಹೋರಾಟ ಮಾಡಿದ್ದಾರೆ" ಎಂದರು.
ರಕ್ತ ಕ್ರಾಂತಿ ವೇಳೆ ಎಲ್ಲಿ ಹೋಗಿದ್ದೀರಿ ಹುಕ್ಕೇರಿ ತಾಲೂಕಿನ ಗ್ರಾಮವೊಂದರಲ್ಲಿ ರಕ್ತ ಕ್ರಾಂತಿ ಆದಾಗ 12 ಮಂದಿ ಇದ್ದಾಗ ದಲಿತ ಮುಖಂಡರು ಯಾರೂ ಧ್ವನಿ ಎತ್ತಲಿಲ್ಲ. ನಮ್ಮ ಸಮಾಜದ 500 ಕುಟುಂಬಗಳಿಗೆ ಸ್ಮಶಾನ ಭೂಮಿ ಇಲ್ಲ. ಸರ್ಕಾರಿ ಮೀಸಲು ಜಾಗವನ್ನೂ ಕೊಡುತ್ತಿಲ್ಲ. ಮಂತ್ರಿಗಳ ಮನೆ ಬಾಗಿಲು, ಸ್ಥಳೀಯ ಶಾಸಕರ ಮನೆಗೆ ಹೋದೆವು. ರಾಷ್ಟ್ರೀಯ ಸುದ್ದಿ, ರಾಜ್ಯ ಮಟ್ಟದಲ್ಲಿ ಸುದ್ದಿಯಾಯಿತು. ಪಬ್ಲಿಕ್ ಟಿವಿಯ ರಂಗನಾಥ್ ಬಳಿ ಹೋದರು ಆಗ ಯಾರೂ ಬರಲಿಲ್ಲ ಎಂದು ಕಿಡಿಕಾರಿದರು.
"ದಲಿತ ಬಾಂಧವರು ಒಗ್ಗಟ್ಟಿನ ಜಪ ಮಾಡಿ. ನಿಮ್ಮ ನಿಮ್ಮಲ್ಲೇ ಕಿತ್ತಾಡಿ ದೊಡ್ಡ ನಾಯಕರನ್ನು ಹಂಚಿಕೊಳ್ಳಬೇಡಿ. ದಲಿತ ಮುಖಂಡರು ತಮ್ಮ ಒಳಿತಿಗಾಗಿ ಮಾತ್ರ ಕೆಲಸ ಮಾಡುತ್ತಿದ್ದಾರೆ" ಎಂದು ಆರೋಪಿಸಿದರು.
ಹುಕ್ಕೇರಿಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ಮುಖಂಡರು ಹಾಗೂ ಕಾರ್ಯಕರ್ತರು
ವರದಿ: ಶಿವಾಜಿ ಎನ್ ಬಾಲೆಶಗೋಳ


