ಹೊಸಪೇಟೆ(ವಿಜಯನಗರ ):ವೈದ್ಯರು ರೋಗಿಗಳಿಗೆ ಚಿಕಿತ್ಸೆಯ ಜೊತೆಗೆ ಗಿಡಗಳನ್ನು ನೀಡುವುದು ಪರಿಸರ ಜಾಗೃತಿಯನ್ನು ಹೆಚ್ಚಿಸುವ ಒಂದು ಉತ್ತಮ ಕ್ರಮವಾಗಿದೆ ಎಂದು ವೈದ್ಯ ದಂಪತಿಗಳಾದ ಸರ್ಜನ್ ಡಾ. ರೇಖಾ ಹಾಗೂ ನೇತ್ರ ತಜ್ಞರು ಡಾ. ರಾಜಶೇಖರ್ ಹೇಳಿದರು.ನಗರದಲ್ಲಿ ಆರ್ ಟಿ ಸಿ ಬಸ್ ಸ್ಟ್ಯಾಂಡ್ ಪಕ್ಕದಲ್ಲಿ ಇರುವ ಮೈಲಾರ ಆಸ್ಪತ್ರೆಯಲ್ಲಿ ರೋಗಿಗಳಿಗೆ ಗಿಡಗಳನ್ನು ನೀಡಿದ ನಂತರ ಮಾತನಾಡಿದರು
ಗಿಡಗಳನ್ನು ನೆಡುವುದು ಮತ್ತು ಪೋಷಿಸುವುದು ದೈಹಿಕ ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಅನುಕೂಲ ವಾಗುತ್ತದೆ ಎಂದರು ಗಾಳಿಯನ್ನು ಶುದ್ಧೀಕರಿಸಲು ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಪ್ರೇರೇಪಿಸಲು ನೆರವಾಗುತ್ತದೆ ಎಂದರು.
ಗಿಡಗಳ ಆರೈಕೆ ಮಾಡುವುದು ಮತ್ತು ಹಸಿರು ಪರಿಸರದಲ್ಲಿ ಕಾಲ ಕಳೆಯುವುದು ರೋಗಿಗಳಲ್ಲಿ ಖಿನ್ನತೆ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ.ಆರೋಗ್ಯಕರ ಆಹಾರ ಪದ್ಧತಿ: ಮನೆಯಲ್ಲಿಯೇ ಬೆಳೆಯಬಹುದಾದ ತುಳಸಿ, ಪುದೀನಾ, ಲೆಮನ್ಗ್ರಾಸ್ನಂತಹ ಗಿಡಗಳನ್ನು ನೀಡುವುದರಿಂದ ರೋಗಿಗಳು ತಾಜಾ ಮತ್ತು ಔಷಧೀಯ ಗುಣವುಳ್ಳ ಪದಾರ್ಥಗಳನ್ನು ಬಳಸಲು ಸಾಧ್ಯವಾಗುತ್ತದೆ ಎಂದರು . ಪ್ರಕೃತಿಯನ್ನು ರಕ್ಷಿಸುವ ಜವಾಬ್ದಾರಿಯನ್ನು ಪ್ರತಿಯೊಬ್ಬರಿಗೂ ನೆನಪಿಸುವುದು ಇದರ ಹಿಂದಿನ ಮುಖ್ಯ ಉದ್ದೇಶವಾಗಿದೆ ಎಂದರು.
ವರದಿ :.ಪಿ. ಶ್ರೀನಿವಾಸ್


