LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಮತ್ತೊಂದು ಗಂಭೀರ ಆರೋಪದಲ್ಲಿ ಸಿಲುಕಿದ ಪ್ರಭಾರಿ ಪ್ರಾಂಶುಪಾಲ ಡಾ. ನೀಲಪ್ಪ ಹೊಸಮನಿ

Advertisement
----------------------------------ಪ್ರಥಮ ದರ್ಜೆ ಸೆಮಿಸ್ಟರ್ ಪರೀಕ್ಷೆಯಲ್ಲಿ ವಿಚಕ್ಷಕರ ಮೇಲೆ ದಬ್ಬಾಳಿಕೆ ಮಾಡಿ

-----------------------------------ಎಂ ಪಿ ಸಿ ಕ್ಯಾನ್ಸಲ್ ಮಾಡಿಸಿದ ಪ್ರಾಂಶುಪಾಲ ನೀಲಪ್ಪ ಹೊಸಮನಿ

-----------------------------------ಪ್ರಾಂಶುಪಾಲರ ವಿರುದ್ಧ ಮತ್ತೊಂದು ಆರೋಪ: ಪರೀಕ್ಷಾ ದಳದ ಕೆಲಸಕ್ಕೆ 

 ----------------------------------ಅಡ್ಡಿಪಡಿಸಿದ ಡಾ. ನೀಲಪ್ಪ ಹೊಸಮನಿ
------------------------------------ಬಸವನಬಾಗೇವಾಡಿ, ಬಿಜಾಪುರ ಜಿಲ್ಲೆ

ಸರಕಾರಿ ಪ್ರಥಮ ದರ್ಜೆ ಕಾಲೇಜು, ಬಸವನಬಾಗೇವಾಡಿಯ ಪ್ರಭಾರಿ ಪ್ರಾಂಶುಪಾಲ ಡಾ. ನೀಲಪ್ಪ ಹೊಸಮನಿ ಅವರು ಇದೀಗ ಮತ್ತೊಂದು ಗಂಭೀರ ಆರೋಪದ ಅಡಿಯಲ್ಲಿ ಸಿಲುಕಿದ್ದಾರೆ. ರಾಜ್ಯದ ರಾಣಿ ಚನ್ನಮ್ಮ ವಿಶ್ವವಿದ್ಯಾನಿಲಯವು ನಡೆಸುತ್ತಿರುವ ಪದವಿ ಸೆಮಿಸ್ಟರ್ ಪರೀಕ್ಷೆಗಳಿಗೆ ಶೈಕ್ಷಣಿಕ ಗುಣಮಟ್ಟ ಕಾಯ್ದುಕೊಳ್ಳುವ ಉದ್ದೇಶದಿಂದ ನೇಮಕಗೊಂಡ ವಿಚಕ್ಷಕ ದಳದ ಸದಸ್ಯರ ಕೆಲಸಕ್ಕೆ ತಡೆಯುಂಟುಮಾಡಿದ ಆರೋಪ ಇದಾಗಿದೆ.



ಪರೀಕ್ಷೆಯ ವೇಳೆ, ವಿಚಕ್ಷಕ ದಳದ ಸದಸ್ಯರು ವಿದ್ಯಾರ್ಥಿಗಳು ಅಕ್ರಮವಾಗಿ ಪರೀಕ್ಷೆ ಬರೆಯುತ್ತಿರುವುದನ್ನು ಗಮನಿಸಿ ಕ್ರಮ ಕೈಗೊಳ್ಳಲು ಮುಂದಾದಾಗ, ಪ್ರಾಂಶುಪಾಲರಾದ ಡಾ. ಹೊಸಮನಿ ಅವರು ಶಾಸನಬದ್ಧ ಅಧಿಕಾರಿಗಳಿಗೆ ಶಬ್ದಬಲ ಬಳಸಿದಂತಾಗಿ ವರದಿಯಾಗಿದೆ. ಅವರಿಗೆ ಸಹಕರಿಸಬೇಕಾದ ಬದಲು, ಅವರ ಕರ್ತವ್ಯಕ್ಕೆ ಅಡ್ಡಿಯಾಗುವ ರೀತಿಯಲ್ಲಿ ಧಿಕ್ಕಾರ ವ್ಯಕ್ತಪಡಿಸಿದ್ದು, ಈ ವರ್ತನೆ ವಿಶ್ವವಿದ್ಯಾನಿಲಯದ ಪರೀಕ್ಷಾ ವ್ಯವಸ್ಥೆಯ ವಿಶ್ವಾಸಾರ್ಹತೆಗೆ ವಿರುದ್ಧವಾಗಿದೆ.

 

ಅಲ್ಲದೆ ದಳದಲ್ಲಿದ್ದ ಮಹಿಳಾ ಉಪನ್ಯಾಸಕರ ಮೇಲೂ ಅಸಭ್ಯ ಶಬ್ದ ಬಳಸಿ ಅವಮಾನಕಾರಿಯಾಗಿ ವರ್ತಿಸುತ್ತಾರೆ. ಸರ್ಕಾರದಿಂದ ಸಂಪೂರ್ಣ ಅನುದಾನಿತವಾಗಿರುವ ಶಿಕ್ಷಣ ಸಂಸ್ಥೆಯೊಬ್ಬ ಪ್ರಭಾರಿ ಪದವಿದಾರ ಪ್ರಾಂಶುಪಾಲರಿಂದ ಶಿಸ್ತು ಮತ್ತು ಪ್ರಾಮಾಣಿಕತೆಯ ಕೊರತೆ ಕಂಡುಬಂದಿರುವುದು ವಿದ್ಯಾರ್ಥಿಗಳ ಭವಿಷ್ಯ ಹಾಗೂ ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಅಪಾಯಕಾರಿಯಾಗಿರುವುದಾಗಿ ಶಿಕ್ಷಣ ಕ್ಷೇತ್ರದ ಹಲವರು ಅಭಿಪ್ರಾಯಪಟ್ಟಿದ್ದಾರೆ.



ಈ ಹಿಂದೆ ಡಾ. ಹೊಸಮನಿ ಅವರಿಂದ ಪ್ರಾಂಶುಪಾಲರ ಹುದ್ದೆ ದುರ್ಬಳಕೆಯಾದ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆ ನಡೆದಿದ್ದು, ಇದೀಗ ಮತ್ತೊಮ್ಮೆ ಅವರು ಶಿಸ್ತಿನ ಭಂಗ ಮತ್ತು ಅಧಿಕಾರ ದುರುಪಯೋಗದ ಆರೋಪಗಳನ್ನು ಎದುರಿಸುತ್ತಿದ್ದಾರೆ.

 

ಸಮಾಜಿಕ ಕಾರ್ಯಕರ್ತರು, ಉಪನ್ಯಾಸಕರ ಸಂಘಗಳು ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳು ಈ ಕುರಿತು ಪರಿಶೀಲನೆ ನಡೆಸಿ ಸೂಕ್ತ ಶಿಸ್ತು ಕ್ರಮ ಕೈಗೊಳ್ಳುವಂತೆ ಉನ್ನತ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸುವ ನಿರ್ಧಾರಕ್ಕೆ ಬಂದಿದ್ದಾರೆ.

ವರದಿ: ವಿನೋದ. ಎಂ. ಜೆ. 
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ