Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಗುರುಮಾಠಕಲ್ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನ ಗಳ ದರ್ಬಾರ್ ಜನರು ಪರದಾಟ

Advertisement
ಗುರುಮಾಠಕಲ್ : ರಾಜ್ಯ ಸಾರಿಗೆ ಸಂಸ್ಥೆ ನೌಕರರು ಮುಷ್ಕರದ ಬಿಸಿ ತೆಲಂಗಾಣದ ಗಡಿ ಭಾಗದ ಗುರುಮಾಠಕಲ್ ಜನರಿಗೆ ಮುಟ್ಟಿದೆ.

ಮುಂಗಡವಾಗಿ ರೈಲು ಪ್ರಯಾಣ, ಆಸ್ಪತ್ರೆ ಸೇರಿದಂತೆ ಹಲವು ಕಾರ್ಯಗಳಿಗೆ ತೆರಳಬೇಕಿರುವ ಜನರು ತಡಬಡಿಸುತ್ತಿದರೆ.

ಗಡಿ ತಾಲೂಕು ಗುರುಮಠಕಲ್ ದಿಂದ ಯಾದಗಿರಿ ಹೋಗುವ ಸಾಮಾನ್ಯವಾಗಿ 50ರೂ. ಒಳಗೆ ಟಿಕೇಟ್ ದರ ಇದ್ದು, ಸಾರಿಗೆ ಬಸ್ ಬಂದ್ ಆಗಿರುವುದನ್ನು ಕಂಡು ಖಾಸಗಿ ವಾಹನದ ಮಾಲೀಕರು 80 ರಿಂದ 100 ರೂಪಾಯಿಗಳು ತೆಗೆದುಕುಳ್ಳುತ್ತಿದ್ದರು ಗಾಳಿ ಬಿಟ್ಟಗೆ ತುರಿಕೊಳ್ಳಬೇಕು ಎಂಬಂತೆ ಜನರ ಜೇಬಿಗೆ ಕನ್ನ ಹಾಕುತ್ತಿರುವ ಖಾಸಗಿ ವಾಹನಗಳ ಚಾಲಕರು ಬಸ್‌ ನಿಲ್ದಾಣದಲ್ಲಿಯೇ ಖಾಸಗಿ ವಾಹನಗಳಲ್ಲಿ ಜನರನ್ನು ತುಂಬಿಕೊಂಡು ಹೆಚ್ಚಿನ ಹಣ ಪೀಕುತ್ತಿರುವುದು ಕಂಡು ಬಂತು.

ಈ ಬಗ್ಗೆ ಪ್ರಯಾಣಿಕರು ಹೆಚ್ಚಿನ ಹಣ ನೀಡಲು ಸಹಜವಾಗಿಯೇ ನಿರಾಕರಿಸಿದರೇ, ಆದರೆ ಅನಿವಾರ್ಯ ಪರಸ್ಥಿತಿ ಯಲ್ಲಿ ಪ್ರಯಾಣಿಕರನ್ನೇ ದಬಾಯಿಸಿ, ಹೋಗೊದಿದ್ದರೆ ಹೋಗು, ಎಲ್ಲರೂ ಹೋಗುತ್ತಿಲ್ಲವೇ ಎಂದು ಹೆದರಿಸಿ ಖಾಸಗಿ ವಾಹನಗಳ ಹತ್ತಿಸುತ್ತಿರುವು ಕಂಡು ಬಂತು.

ಇಡಿ ನಮ್ಮ ಕರ್ನಾಟಕ ರಾಜ್ಯ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಬಸ್ ಬಂದ್‌ ಆಗುವ ಸುದ್ದಿ ತಿಳಿದು ಹೆಚ್ಚಿನ ಜನರು ಪ್ರಯಾಣ ಮುಂದೆ ಹಾಕಿದ್ದಾರೆ. ಹಾಗಾಗಿ ಗುರುಮಠಕಲ್‌ ಬಸ್‌ ನಿಲ್ದಾಣದಲ್ಲಿ ಜನರಿಲ್ಲದೇ ಬಿಕೋ ಎನ್ನುತ್ತಿತ್ತು ದೃಶ್ಯ ನೋಡಿ

ಯಾದಗಿರಿ, ಗುರುಮಠಕಲ್ ಮಾರ್ಗವಾಗಿ ಹೈದರಾಬಾದ್ ತೆರಳುವ ಪ್ರಯಾಣಿಕರಿಗೆ ಯಾವುದೇ ತೊಂದರೆಯಿಲ್ಲದೆ ತೆಲಂಗಾಣದ ಸಾರಿಗೆ ವಾಹನಗಳು ಸೇವೆ ನೀಡುವುದು ಕಂಡು ಬಂತು.
ಅಮಾಯಕರಿಂದ ವಸೂಲಿ ತಡೆಯುವವರಾರು : ಸಾರಿಗೆ ಬಸ್ ಗಳು ಬಂದ್ ಆಗಿದ್ದರಿಂದ ಗುರುಮಠಕಲ್ ದಿಂದ ಯಾದಗಿರಿಗೆ 80ರೂ ವಸೂಲಿ ಮಾಡಲಾಗುತ್ತಿದೆ. ಇದರಿಂದ ಸಾರ್ವಜನಿಕರ ಜೇಬಿಗೆ ಕತ್ತರಿ ಬೀಳುತ್ತದೆ ಇದನ್ನು ತಕ್ಷಣ ತಡೆಯಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.

ಪೊಲೀಸ್ ಬಂದೋಬಸ್ತ್: ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಬಸ್ ನಿಲ್ದಾಣದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್‌ ಬಂದೋಬಸ್ತ್ ಮಾಡಲಾಗಿದೆ.

ವರದಿ : ರವಿ ಬುರನೋಳ್
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ