ಮಲ್ಲಮ್ಮನ ಬೆಳವಡಿ : ಬೈಲಹೊಂಗಲ ತಾಲೂಕಿನ ದೊಡವಾಡ ವಲಯದ ದೊಡವಾಡ ಬಿ ಕಾರ್ಯಕ್ಷೇತ್ರದಲ್ಲಿ ರೈತ ಕ್ಷೇತ್ರ ಪಾಠ ಶಾಲೆಯನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶೋಭಾ ಮಡಿವಾಳರವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಊರಿನ ಹಿರಿಯವರಾದ ಶಂಕ್ರಪ್ಪ ಅಂದಾಶೆಟ್ಟಿ, ಚನ್ಬಸಯ್ಯ ಚರಂತಿಮಠರವರು ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ನಿವೃತ್ತ ಕೃಷಿ ಅಧಿಕಾರಿಗಳಾದ ವಿದ್ಯಾಧರ್ ಹೊಸೂರು ಸರ್ ಅವರು ಮಣ್ಣು ಪರೀಕ್ಷೆ,ಬೀಜೋಪಚಾರ,ಕೀಟ ಬಾಧೆಗಳ ಬಗ್ಗೆ ಸಮಗ್ರವಾಗಿ ಮಾಹಿತಿ ಮಾರ್ಗದರ್ಶನವನ್ನು ನೀಡಿದರು.
ಈ ಕಾರ್ಯಕ್ರಮವನ್ನು ತಾಲೂಕಿನ ಕೃಷಿ ಮೇಲ್ವಿಚಾರಕರಾದ ರವಿ ಆರ್ ಗೊಂಡ ನಿರೂಪಿಸಿದರು ಉಪಸ್ಥಿತರಿರುವ ಅತಿಥಿಗಳನ್ನು ವಲಯದ ಮೇಲ್ವಿಚಾರಕರಾದ ಬಾಹುಬಲಿ ಆರ್ ಬಿ ಸ್ವಾಗತಿಸಿದರು ಕಾರ್ಯಕ್ಷೇತ್ರದ ಸೇವ ಪ್ರತಿನಿಧಿಯಾದ ಗಂಗಮ್ಮ ರವರು ಧನ್ಯವಾದವನ್ನು ತಿಳಿಸಿದರು ಈ ಸಂದರ್ಭದಲ್ಲಿ ಊರಿನ ರೈತ ಬಾಂಧವರು ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.
ವರದಿ: ದುಂಡಪ್ಪ ಹೂಲಿ

