LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಗುಡಸ ಗ್ರಾಮದ ಗಾಯರಾಣ ಜಮೀನಿನ ಅತಿಕ್ರಮಣ ತೆರವಿಗೆ ಆಗ್ರಹ

Advertisement
ಹುಕ್ಕೇರಿ: ಹುಕ್ಕೇರಿ ತಾಲೂಕಿನ ಹುಕ್ಕೇರಿ ಪಟ್ಟಣದ ಕೋರ್ಟ ವೃತ್ತದಲ್ಲಿ ಕುರಿ ಹಾಗೂ ಮೇಕೆಗಳಿಂದ ಪ್ರತಿಭಟನೆ ನಡೆಸಲಾಯಿತು. ಗಾಯರಾಣ ಜಾಗೆಯ ಅತಿಕ್ರಮಣ ತೆರವುಗಾಗಿ ಕುರಿಗಾಹಿಗಳಿಂದ ವಿನೂತನ ಪ್ರತಿಭಟನೆ ಜರುಗಿತು.

5 ಸಾವಿರ ಕುರಿಗಳಿಂದ ರಸ್ತೆ ತಡೆ ನಡೆಸಿ ಪ್ರತಿಭಟನೆ ಕುರಿ ಮೇಕೆಗಳ ಪ್ರತಿಭಟನೆಯಿಂದ ಒಂದು ಕಿ.ಮೀ ಟ್ರಾಫಿಕ್ ಜಾಮ್ ಆಯಿತು. ಪ್ರತಿಭಟನಾ ರ್ಯಾಲಿ ಮೂಲಕ ತಹಶೀಲ್ದಾರ ಕಚೇರಿಗೆ ತೆರಳಲಿರುವ ಮೂಲಕ ಪ್ರತಿಭಟನೆ ನಡೆಯಿತು.



ಮುಖಂಡ ಭೀಮಶಿ ಭಾಗಿ ಮಾತನಾಡಿ, ಪೂರ್ವಜರಿಂದಲೂ ಕುರಿ ಮೇಯಿಸಲು ಮೀಸಲಿಟ್ಟಿದ ಜಮೀನನ್ನು ಅತಿಕ್ರಮಿಸುವ ಮೂಲಕ ಕಟ್ಟಡಗಳನ್ನು ಕಟ್ಟುತ್ತಿದ್ದ, ಅತಿಕ್ರಮವನ್ನು ತಹಶೀಲ್ದಾರರು ತೆರವುಗೊಳಿಸಿ ಕುರಿ ಮೇಯಿಸಲು ಅನುವುಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಕುರಿಗಾಯಿ ಬಸವಣ್ಣಿ ಮಾತನಾಡಿ ಅತಿಕ್ರಮಣದಿಂದ ಕುರಿ ಮೇಯಿಸಲು ಜಾಗ ಇಲ್ಲದಂತ್ತಾಗಿದ್ದು, ಈ ಬಗ್ಗೆ ಹಲವು ಬಾರಿ ತಹಶೀಲ್ದಾರರಿಗೆ ಮನವಿ ಕೊಟ್ಟರು, ಯಾವುದೇ ಕ್ರಮ ಕೈಗೊಂಡಿಲ್ಲ, ಕೂಡಲೇ ಕುರಿ ಮೇಯಿಸಲು ಅನವು ಮಾಡಿಕೊಡಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದರು. ಹಾಲುಮತ ಸಮಾಜದ ತಾಲೂಕಾ ಮುಖಂಡರು ಹಿರಿಯರು ಕುರಿಮಯಿಸುವ ತಾಯಂದಿರು ಯುವಕರು ಭಾಗಿಯಾಗಿದ್ದರು.

ಈ ಸಂದರ್ಭದಲ್ಲಿ ಬಸವಣ್ಣಿ ಭೀ ನಿಡಸೋಶಿ, ಗುರುಸಿದ್ದ ಗೋಟುರಿ, ರಾಮಪ್ಪ ಚಂದರಗಿ, ಲಕ್ಕಪ್ಪ ಸ ಹಾಲಟ್ಟಿ, ಮಲ್ಲಪ್ಪಾ ಹಾಲಟ್ಟಿ, ಬೀರಪ್ಪ ಮಾ ಮರ್ಣಣಿಕೇರಿ, ಸತ್ತೆಪ್ಪಾ ಖಿಲಾರಿ, ಬಸಪ್ಪಾ ಸಿ ವಂಟಮೂರಿ, ಶಂಕರ ಕರಿಗಾರ, ರಾಯಪ್ಪಾ ಕೆಂಪಾಮಲದಿನ್ನಿ ಹಾಗೂ ಹಾಲು ಮತದ ಕುರುಬರ ಸಮಾಜದ ಮುಖಂಡರು ಹಾಗೂ ಕುರಿಗಾಯಕರು ಉಪಸ್ಥಿತರಿದ್ದರು.

ವರದಿ: ಶಿವಾಜಿ ಎನ್ ಬಾಲೇಶಗೋಳ
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ