ನಾಡ ಕಚೇರಿಯ ಮುಂಭಾಗದ ಯಾವುದೆ ಹಾಸನಗಳ ವ್ಯವಸ್ಥೆ ಇಲ್ಲದೆ ಸುಡು ಬಿಸಿಲಲ್ಲಿಯೇ ನಿಂತುಕೊಂಡು ಅವರವರ ಕೆಲಸಗಳನ್ನು ಮಾಡಿಕೊಳ್ಳಬೇಕು ಹಾಗೂ ಕಛೇರಿಯ ಆವರಣವು ಕಸದ ತ್ಯಾಜ್ಯ ಹಾಗೂ ಮದ್ಯದ ತ್ಯಾಜ್ಯಗಳಿಂದ ಗಬ್ಬು ನಾರುತ್ತಿದೆ ಕಸದಿಂದ ಕೂಡಿದ ವಾತಾವರಣದಲ್ಲೇ ಚಿಕ್ಕ ಮಕ್ಕಳ ಜೊತೆ ಮೂಗು ಮುಚ್ಚಿಕೊಂಡು ಕಛೇರಿ ಕೆಲಸವನ್ನು ಮಾಡಿಸಿಕೊಂಡು ಹೋಗುವ ದುಃಸ್ಥಿತಿ ಎದುರಾಗಿದೆ.

ಉದ್ಘಾಟನೆಗೊಂಡು ಹಲವು ವರ್ಷಗಳೇ ಕಳೆದರೂ ಕೆಲವು ಜಿಲ್ಲಾಧಿಕಾರಿಗಳು ಬೇಟಿ ನೀಡಿದರೂ ಕಟ್ಟಡದ ದುರಸ್ತಿ ಸುತ್ತುಗೋಡೆ ಸೂಕ್ತ ಶೌಚಾಲಯವಿಲ್ಲದ ಶುದ್ಧ ಕುಡಿಯುವ ನೀರು ಇಲ್ಲ ಸುತ್ತ ಮುತ್ತ ಗಬ್ಬು ವಾಸನೆ ಬರುತ್ತಿದೆ ಇದರಿಂದಾಗಿ ಸೊಳ್ಳೆಗಳು ಹೆಚ್ಚಿದ್ದು ಮಾರಕ ಕಾಯಿಲೆಗಳ ಭೀತಿಯು ಎದುರಾಗಿದೆ
ಸೂಕ್ತ ಭದ್ರತೆಯಿಲ್ಲದ ಕಾರಣ ಮದ್ಯಪಾನೀಯರು ಇಲ್ಲಿಯೇ ಕುಡಿದು ಬಿಸಾಡುತ್ತಿದ್ದು ಈ ಬಗ್ಗೆ ಸಂಬಂದಿಸಿದ ಇಲಾಖೆಯು ಗಮನಹರಿಸಿ ಸಾರ್ವಜನಿಕರಿಗೆ ಶುದ್ಧ ವಾತಾವರಣವನ್ನು ನಿರ್ಮಿಸಬೇಕೆಂಬುದು ಜಯ ಕರ್ನಾಟಕ ತಾಲೂಕು ಅಧ್ಯಕ್ಷ ನಾಗೇಶ್ ಗದ್ದಿಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿ : ರವಿ ಬುರನೋಳ್

