
ಅವರು ರೋಣ ತಾಲೂಕಿನ ಗ್ರಾಮದಲ್ಲಿ ವಿಶೇಷ ಹಿರೇಮಣ್ಣೂರು ಮುಖ್ಯಮಂತ್ರಿಗಳ ಅನುದಾನದಡಿ 25 ಲಕ್ಷ ರೂಪಾಯಿ ಅನುದಾನದಡಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ಮಾತನಾಡಿದರು.
ಅಭಿವೃದ್ಧಿಗೆ ಸ್ಥಳೀಯ ಸಾರ್ವಜನಿಕರ ಸಹಕಾರ ಅವಶ್ಯವಿದ್ದು ಸ್ಥಳೀಯರು ಕಾಮಗಾರಿಗಳನ್ನು ಉತ್ತಮ ರೀತಿಯಲ್ಲಿ ಮಾಡಿಸಿಕೊಳ್ಳಬೇಕು, ಗ್ಯಾರಂಟಿ ಯೋಜನೆಯಿಂದ ಸಾಕಷ್ಟು ಅನುಕೂಲವಾಗಿದ್ದು ರಾಜ್ಯದ ಜನತೆಗಾಗಿ ಸಿದ್ದರಾಮಯ್ಯನವರ ಸರ್ಕಾರ 53 ಸಾವಿರ ಕೋಟಿ ರೂಪಾಯಿಯನ್ನು ವೆಚ್ಚ ಮಾಡುತ್ತಿದೆ. ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ನೆಮ್ಮದಿಯಿಂದ ಜೀವನ ನಡೆಸುವಂತಾಗಿದೆ. ಈಗಾಗಲೇ ರಾಜ್ಯದಲ್ಲಿ ಐದು ನೂರು ಕೋಟಿ ಟಿಕೆಟ್ಗಳನ್ನು ಉಚಿತ ಬಸ್ ಪ್ರಯಾಣಕ್ಕಾಗಿ ಮಹಿಳೆಯರಿಗಾಗಿ ನೀಡಲಾಗಿದೆ. ಹಿರೇಮಣ್ಣೂರು
ಮಹಿಳೆಯರಿಗೆ ಗ್ರಾಮದಲ್ಲಿ ಸಾರ್ವಜನಿಕ ಶೌಚಾಲಯಕ್ಕಾಗಿ ಜಾಗ ಅವಶ್ಯವಿದ್ದು ಗ್ರಾಮಸ್ಥರು ಜಾಗವನ್ನು ನೀಡಲು ಮುಂದೆ ಬಂದರೆ ಸರ್ಕಾರದಿಂದ ಶೌಚಾಲಯಕ್ಕೆ ಅನುದಾನ ಬಿಡುಗಡೆ ಮಾಡಲು ತಕ್ಷಣ ಕ್ರಮ ಕೈಗೊಳ್ಳುತ್ತೇನೆ, ಅಭಿವೃದ್ಧಿಗೆ ಜನರ ಸಹಕಾರವು ಮುಖ್ಯವಾಗಿದ್ದು ಮುಂದಿನ ದಿನಮಾನಗಳಲ್ಲಿ ಗ್ರಾಮಕ್ಕೆ ಹಾಗೂ ಗ್ರಾಮೀಣ ಭಾಗಕ್ಕೆ ಹಂತ ಹಂತವಾಗಿ ಅವಶ್ಯಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಶಡಕ್ಷರಯ್ಯ ಹಿರೇಮಠ, ಶರಣಪ್ಪ ಕುರಿ,ಕೂಡ್ಲೆಪ್ಪಗೌಡ ಪ್ಯಾಟಿಗೌಡ್ರ, ರಾಮಣ್ಣ ಕುರಿ, ಶಂಕರಗೌಡ ಪಾಟೀಲ, ಧರ್ಮಗೌಡ ಪಾಟೀಲ, ಬಸವರಾಜ ನವಲಗುಂದ, ಯೂಸುಫ್ ಇಟಗಿ, ಮುತ್ತಪ್ಪ ಸೂಡಿ, ಶಿವಪ್ಪ ಪಟ್ಟೇದ, ಚನ್ನಬಸಯ್ಯ ಪುರಾಣಿಕಮಠ, ಬಸವರಾಜ ಕಾತರಕಿ, ವಿಶಾಲಾಕ್ಷಿ ಪ್ಯಾಟಿಗೌಡ್ರ, ಮಲ್ಲನಗೌಡರ ಪರಡ್ಡಿ ಸೇರಿದಂತೆ ಅನೇಕರಿದ್ದರು.

