LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಯೋಗಾಸನ ಕಟ್ಟೆ ಉದ್ಘಾಟನೆ : ಶಾಸಕ ಲಕ್ಷ್ಮಣ ಸವದಿ

Advertisement
ಅಥಣಿ :  ಕರ್ನಾಟಕ ಸರಕಾರ ಅರಣ್ಯ ಇಲಾಖೆ, ಬೆಳಗಾವಿ ವೃತ್ತ, ಬೆಳಗಾವಿ ಘಟಪ್ರಭಾ ವಿಭಾಗ ಗೋಕಾಕ ಪ್ರಾದೇಶಿಕ ಅರಣ್ಯ ವಲಯ ಅಥಣಿ ಅರಣ್ಯ ಮಕ್ಕಳ ಉದ್ಯಾನವನದಲ್ಲಿ ಶಾಸಕ ಲಕ್ಷ್ಮಣ ಸವದಿ ಅವರ ಸ್ಥಳಿಯ ಪ್ರದೇಶಾಭಿವೃದ್ಧಿ ಯೋಜನೆ ಅಡಿ ನಿರ್ಮಿಸಲಾದ ಯೋಗಾಸನ ಕಟ್ಟೆ ಉದ್ಘಾಟನೆ ಸಮಾರಂಭ ಹಾಗೂ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿಗೆ ನೀರು ಉನಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಮ್ಮ ಬದುಕಿಗೆ ಯೋಗ ಮತ್ತು ಪರಿಸರ ಎರಡು ಬಹುಮುಖ್ಯ ಅಂಗಗಳಾಗಿವೆ.ಕೇವಲ ಪರಿಸರ ದಿನಕ್ಕೆ ಮಾತ್ರ ಆಚರಣೆ ಸೀಮಿತವಾಗದೆ ಸಂಪೂರ್ಣ ಮಕ್ಕಳ ಉದ್ಯಾನವನದ ಅಭಿವೃದ್ಧಿಗೆ ಒತ್ತು ನೀಡಿ ಸುಂದರ ವನವನಾಗಿ ರೂಪಿಸಬೇಕೆಂದು ಕರೆ ನೀಡಿದರು. ಪ್ರತಿಯೊಬ್ಬರೂ ಗಿಡ ಮರಗಳನ್ನು ಬೆಳೆಸುವಂತೆ ಸಲಹೆ ನೀಡಿದರು. ಶಾಸಕರ ಪ್ರದೇಶ ಅಭಿವೃದ್ಧಿ ನಿಧಿಯಲ್ಲಿ 5 ಲಕ್ಷ ರೂ ಅನುದಾನ ನೀಡಿದ್ದು ಹಾಗೂ ಇದೆ ಸ್ಥಳದಲ್ಲಿ ಬರುವ ದಿನಗಳಲ್ಲಿ ಸುಂದರವಾದ ಗಾಜಿನ ಮನೆ ನಿರ್ಮಿಸಿ ಯೋಗ ಹಾಗೂ ವಾಯು ವಿಹಾರ ಮಾಡುವವರಿಗೆ ಅನುಕೂಲ ಕಲ್ಪಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಶಿವಯೋಗಿ ಯೋಗ ಬಳಗದ ಸದಸ್ಯರಿಂದ ಶಾಸಕ ಲಕ್ಷ್ಮಣ ಸವದಿಯವರಿಗೆ ಸತ್ಕರಿಸಿದರು.

ಈ ವೇಳೆ ತಹಶಿಲ್ದಾರ ಸಿದ್ದರಾಯ ಬೋಸಗಿ , ಪುರಸಭೆ ಉಪಾಧ್ಯಕ್ಷೆ ಭುವನೇಶ್ವರಿ ಯಕ್ಕಂಚಿ,ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪುರ , ಪ್ರಾದೇಶಿಕ ಅರಣ್ಯ ಇಲಾಖೆ ವಲಯ ಅಧಿಕಾರಿ ರಾಕೇಶ ಅರ್ಜುನವಾಡ , ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ರಾಮಗೊಂಡ ಪಾಟೀಲ್, ಸಾಮಾಜೀಕ ಅರಣ್ಯ ಇಲಾಖೆ ವಲಯ ಅರಣ್ಯಾಧಿಕಾರಿ ಪ್ರಶಾಂತ ಗೌರಾಣಿ, ಮುಖಂಡರಾದ ರಾಮನಗೌಡಾ ಧರಿಗೌಡ ,ಅಧಿಕಾರಿಗಳಾದ ಎಸ್.ಎಮ್.ಮುಂಜೆ, ಮಂಜುನಾಥ ಪಾಟೀಲ, ಪರಶುರಾಮ ಪಾಟೀಲ,ಪುರಸಭೆ ಸದಸ್ಯರಾದ ರಾಜಶೇಖರ ಗುಡ್ಡೋಡಗಿ,ಬಸವರಾಜ್ ಪಾಟೀಲ್, ರಾಜೇಶ ಪಾಟೀಲ,ಮಾರುತಿ ಸತ್ತಿಗೌಡರ, ಡಿ.ಡಿ.ಮೆಕನಮರಡಿ, ಸಂಗಮೇಶ ಹಚ್ಚಡದ, ಚಿಕ್ಕೋಡಿ ಯೋಗ ಪ್ರಭಾರಿ ಶಿವಾನಂದ ಮಾಲಗಾವಿ, ಯೋಗ ಶಿಕ್ಷಕರಾದ ಶ್ರೀಶೈಲ ಪಾಟೀಲ್,ಅಪ್ಪಾಸಾಹೇಬ ತಾoಬಟ ಶಿವಯೋಗಿ ಯೋಗ ಬಳಗದ ಎಸ್ ಎಸ್ ಗೊರಜನಾಳ, ಸಂಜಯ ಕಾಳೆ, ಎಸ್ ಎನ್ ನಾಗನೂರ, ನಾರಾಯಣ ಘೋರ್ಪಡೆ ಇತರರು ಸೇರಿದಂತೆ ಶಿವಯೋಗಿ ಯೋಗ ಬಳಗದ ಸರ್ವ ಸದಸ್ಯರು ಉಪಸ್ಥಿತರಿದ್ದರು.

ವರದಿ : ರಾಜು ವಾಘಮಾರೆ.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ