Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಐಫೋನ್ 17 ಖರೀದಿಗಾಗಿ ಮಳಿಗೆ ಮುಂದೆ ಸಾರ್ವಜನಿಕರ ಹೊಡೆದಾಟ

Advertisement
ಮುಂಬೈ: ಶುಕ್ರವಾರದಂದು ಆಪಲ್‌ನ ಐಫೋನ್ 17 ಸರಣಿಯ ಬಿಡುಗಡೆಯ ಸಂದರ್ಭದಲ್ಲಿ ಮುಂಬೈ , ದೆಹಲಿಯ ಆಪಲ್ ಸ್ಟೋರ್‌ಗಳ ಹೊರಗೆ ಭಾರಿ ಜನಸಂದಣಿ ಸೇರಿತ್ತು.

ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (BKC) ಕಟ್ಟಡದಲ್ಲಿ ಭಾರೀ ಜನದಟ್ಟಣೆ ಇದ್ದು, ಸರತಿ ಸಾಲಿನಲ್ಲಿ ಕಾಯುತ್ತಿದ್ದ ಕೆಲವು ಜನರ ನಡುವೆ ಜಗಳ ಹಾಗೂ ಹೊಡೆದಾಟ ಏರ್ಪಟ್ಟಿತ್ತು.

ಈ ಗದ್ದಲದಿಂದಾಗಿ ಸರದಿಯಲ್ಲಿ ನಿಂತಿದ್ದವರ ಸಮಯ ಅಸ್ತವ್ಯಸ್ತವಾಯಿತು. ತಕ್ಷಣ ಆಪಲ್ ಸ್ಟೋರ್‌ನಲ್ಲಿ ನಿಯೋಜಿಸಲಾಗಿದ್ದ ಕಾವಲುಗಾರರು ಮಧ್ಯಪ್ರವೇಶಿಸಿ ಕ್ರಮ ಕೈಗೊಂಡರು.

ಆದರೆ ವಾಗ್ವಾದಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಘಟನೆಯ ಹೊರತಾಗಿಯೂ, ಐಫೋನ್‌ 17 ಸರಣಿಯನ್ನು ಖರೀಸಿದ ಗ್ರಾಹಕರು ಹರ್ಷ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಆಪಲ್ ಬಿಡುಗಡೆ ಮಾಡಿದ ಐಫೋನ್ 17 ಸರಣಿಯ ಬೆಲೆ 82,900 ರೂ. ಯಿಂದ 2,29,900 ರೂ. ವರೆಗೆ ಇದ್ದು, ಸೆಪ್ಟೆಂಬರ್ 19 ರಂದು ಭಾರತದಲ್ಲಿ ಮುಂಗಡ ಬುಕ್ ಮಾಡಿದ ಮತ್ತು ವಾಕ್-ಇನ್ ಖರೀದಿದಾರರಿಗೆ ಮಾರಾಟಕ್ಕೆ ಬಂದಿದೆ.

ಮುಂಬೈನ ಮೊದಲ ಗ್ರಾಹಕರಲ್ಲಿ ಒಬ್ಬರಾದ ಅಮನ್ ಮೆಮನ್ ಮಾಧ್ಯಮಗಳೊಂದಿಗೆ ಮಾತನಾಡಿ, ನಾನು ನನ್ನ ಕುಟುಂಬ ಮತ್ತು ನನಗಾಗಿ ಮೂರು ಐಫೋನ್‌ಗಳನ್ನು ಖರೀದಿಸಿದ್ದೇನೆ.

ಆಪಲ್ ಈ ವರ್ಷ ಉತ್ತಮ ವಿನ್ಯಾಸವನ್ನು ಬಿಡುಗಡೆ ಮಾಡಿದೆ ಮತ್ತು ಈ ವರ್ಷ ಫೋನ್‌ನ ಬಣ್ಣವೂ ತುಂಬಾ ವಿಭಿನ್ನವಾಗಿದೆ. ಇದು ನನ್ನ ನೆಚ್ಚಿನ ಬಣ್ಣ, ಅದಕ್ಕಾಗಿಯೇ ನಾನು ತುಂಬಾ ಉತ್ಸುಕನಾಗಿದ್ದೇನೆ ಎಂದು ತಿಳಿಸಿದ್ದಾರೆ.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ