ಸೇಡಂ : ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚರಿಯ ವಿಧಾನಸಭೆ ಚುನಾವಣೆಯಲ್ಲಿ ಏನ್ ಡಿ ಎ ಮೈತ್ರಿ ಕೂಟ ಅಭೂತಪೂರ್ವ ಘನವಿಜಯ ಸಾಧಿಸಿರುವ ಸಂದರ್ಭದಲ್ಲಿ ಮುಧೋಳ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ , ಸಿಹಿ ಹಂಚಿ ಸಂಭ್ರಮ ಆಚರಣೆ ಮಾಡಿದರು.
ಸುಮಾರು 75ವರ್ಷಗಳ ನಂತರ ಪಶ್ಚಿಮ ಬಂಗಾಳದಲ್ಲಿ ಜಯಗಳಿಸಿದ್ದು ಅತ್ಯಂತ ಸಂತಸ ತಂದಿದೆ ಎಂದು ಬಿಜೆಪಿ ಕಾರ್ಯಕರ್ತರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಲಕ್ಷ್ಮಿಕಾಂತ್ ಹೊನಕೇರಿ ಮುಧೋಳ ಮಹಾ ಶಕ್ತಿ ಕೇಂದ್ರ ಅಧ್ಯಕ್ಷರು, ವಿಜಯಕುಮಾರ ಖೇವುಜಿ ಮುಧೋಳ ಶಕ್ತಿ ಕೇಂದ್ರದ ಅಧ್ಯಕ್ಷರು, ಶಿವರಾಮ ರೆಡ್ಡಿ ಕೋಡಿಗಂಟಿ ಜೆಡಿಎಸ್ ಮುಖಂಡರು, ತಮ್ಮಪ್ಪ ಬಾಗಳಿ ಸಮಾಜ ಸೇವಕರು , ಬಸವರಾಜ್ ಗೌಡ ಬಿಜೆಪಿ ಯುವ ಮುಖಂಡರು , ಅಶೋಕ್ ಬೋಯಿನಿ, ಶ್ರೀಕಾಂತ್ ಗುಂಡಿ, ವೆಂಕಟೇಶ್ ಸೇರಿದಂತೆ ಇನ್ನಿತರ ಕಾರ್ಯಕರ್ತರು ಭಾಗವಹಿಸಿದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್.

