LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಪ. ಜಾತಿ ಪ್ರಮಾಣ ಪತ್ರಕ್ಕೆ ಸಲ್ಲಿಸದ ಅರ್ಜಿಗೆ ಆಕ್ಷೇಪಣೆ !

Advertisement
ಸಿಂಧನೂರು : ಜೂ.೧೨, ತಹಸಿಲ್ ಕಾರ್ಯಾಲಯಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ ಅರ್ಜಿದಾರರಾದ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ರವಿ ಹಿರೇಮಠ ತಂದೆ ನಾಗಯ್ಯ ಹಿರೇಮಠ ಸಾಕಿನ್ ಪಟೇಲ್ ವಾಡಿ ಸಿಂಧನೂರು ಇವರು ಬೇಡ ಜಂಗಮ ಪರಿಶಿಷ್ಟ ಜಾತಿ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದು ಈ ಅರ್ಜಿ ಕುರಿತು ಕರ್ನಾಟಕ ಅನುಚಿತ ಜಾತಿಗಳು/ ಅನುಚಿತ ಬುಡಕಟ್ಟುಗಳು ಹಾಗೂ ಇತರೆ ಹಿಂದುಳಿದ ವರ್ಗಗಳ ನೇಮಕಾತಿ ಮುಂತಾದವುಗಳು ಮೀಸಲಾತಿ ನಿಯಮಗಳು ೧೯೯೨ರ ನಿಯಮ 3 (ಎ) ರನ್ವಯ ವಿಚಾರಣೆ ಕೈಗೊಂಡಿದ್ದು ಸದರಿ ಅರ್ಜಿಯ ಜಾತಿ ಕುರಿತು ಅಕ್ಷೇಪಣೆ ಸಲ್ಲಿಸಲಾಯಿತು ಅರ್ಜಿದಾರ ರವಿ ಹಿರೇಮಠ ತಂದೆ ನಾಗಯ್ಯ ಹಿರೇಮಠ ಇವರು ಬೇಡ ಜಂಗಮ ಪ. ಜಾತಿ ಎಂದು ಸುಳ್ಳು ಮಾಹಿತಿಯನ್ನು ನೀಡಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಪಡೆಯಲು ಪ್ರಯತ್ನಿಸುತ್ತಿದ್ದು ಇದಕ್ಕೆ ಆಕ್ಷೇಪಣೆ ಯನ್ನು ಸಲ್ಲಿಸಲಾಯಿತು.

ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ಅರ್ಜಿದಾರರು ಎಸ್ಸಿ ಪಟ್ಟಿಯಲ್ಲಿ ಬರುವ, ಬೇಡ ಜಂಗಮ ಜಾತಿಗೆ ಅರ್ಜಿ ಸಲ್ಲಿಸಿದ್ದು ಸಮಾಜ ಕಲ್ಯಾಣ ಇಲಾಖೆಯ ಕಾಲಕಾಲಕ್ಕೆ ಹೊರಡಿಸಿರುವ ಆದೇಶದ ಅನ್ವಯ ಎಸ್ಸಿ ೧೦೧ ಜಾತಿಗಳಲ್ಲಿ ಬೇಡ ಜಂಗಮ /ಬುಡ್ಗ ಜಂಗಮ ನಿಜವಾದ ಅಲೆಮಾರಿ ಎಸ್ಸಿ ಸಮುದಾಯವಾಗಿದ್ದು ಇದನ್ನು ಕಬಳಿಸುವ ಹುನ್ನಾರ ಅವರದಾಗಿದ್ದು ಅರ್ಜಿದಾರರು ಸಮಾಜದಲ್ಲಿ ಆರ್ಥಿಕವಾಗಿ ಸದೃಢವಾಗಿದ್ದು ಯಾವುದೇ ರೀತಿಯಲ್ಲೂ ಶೋಷಣೆಗೆ ಮತ್ತು ಬಹಿಷ್ಕಾರಕ್ಕೆ ಒಳಪಟ್ಟಿರುವುದಿಲ್ಲ ಇವರು ಹಾಕಿದ ಅರ್ಜಿ ತಿರಸ್ಕರಿಸಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತೇವೆ ಎಂದು ಮಾನ್ಯ ತಹಶೀಲ್ದಾರಲ್ಲಿ ಮನವಿ ಮಾಡಿ ಒಂದು ವೇಳೆ ಆಕ್ರಮವಾಗಿ ಬೇಡ ಜಂಗಮ ಪ್ರಮಾಣ ಪತ್ರ ಪಡೆದಲ್ಲಿ ಮತ್ತು ನೀಡದಲ್ಲಿ ದಲಿತ ಪ್ರಗತಿಪರ ಮತ್ತು ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾ ವತಿಯಿಂದ ರಾಜ್ಯದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ತಿಳಿಸಿದರು.

ಈ ಸಂದರ್ಭದಲ್ಲಿ, ಅಂಬ್ರುಸ್ ಕೊಡ್ಲಿ. ಅಲ್ಲಮಪ್ರಭು ಪೂಜಾರ್. ಚಿನ್ನಪ್ಪ ಮೋತಿ. ಹುಸೇನಪ್ಪ ವಿಭೂತಿ. ಹನುಮಂತ ಗೋನವಾರ. ಶೇಖರಪ್ಪ ಧುಮುತಿ ವಕೀಲರು. ನರಸಪ್ಪ ಕಟ್ಟಿಮನಿ. ಅಮರೇಶ್ ಗಿರಿಜಾರಿ. ಗುರುರಾಜ ಮುಕ್ಕುಂದ. ಹನುಮಂತ ಹಂಪನಾಳ. ಇನ್ನು ಅನೇಕರಿದ್ದರು

ವರದಿ : ಬಸವರಾಜ ಬುಕ್ಕನಹಟ್ಟಿ
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಸಾಯಿ ಸುದರ್ಶನ ಡೌಟ್ಕ್ರಿಕೆಟರ್ ಜತೆ ಡೇಟಿಂಗ್ ವದಂತಿ ತಳ್ಳಿ ಹಾಕಿದ ನಟಿ ಮೃನಾಲ್ ಥಾಕೂರ್ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಸಚಿವರಿಗೆ ಮನವಿದೇವದತ್ತ ಪಡಿಕಲ್ ಸುಂದರ ಶತಕಕರಡಿ ದಾಳಿಗೆ ರೈತ ಬಲಿ ಯುಪಿಐ ಸೇವೆ ಸಂಪೂರ್ಣ ಉಚಿತ : ಯಾವುದೇ ರೀತಿಯ ವಹಿವಾಟು ಶುಲ್ಕ ಇರುವುದಿಲ್ಲಟಾಕ್ಸಿಕ್ ಟ್ರೈಲರ್ ಔಟ್ : ದ್ವಿ ಪಾತ್ರದಲ್ಲಿ ಮಿಂಚಿದ ಯಶ್, ಇಲ್ಲದೆ ಲಿಂಕ್ ಬೂದಿಹಾಳ ಸರಕಾರಿ ಪ್ರೌಢಶಾಲೆಯಲ್ಲಿ ಪೋಕ್ಸೋ, ಬಾಲ್ಯವಿವಾಹ ನಿಷೇದ ಕಾಯಿದೆಗಳ ಜಾಗೃತಿ ಕಾರ್ಯಕ್ರಮಸಿಟ್ಟು ತ್ಯಾಗ ಮಾಡಿದ್ರೆ ಮುಂದೆ ಸಿಎಂ ಆಗ್ತೀಯಾ : ಸಚಿವ ವಿಜಯಾನಂದ ಕಾಶಪ್ಪನವರ್‌ಗೆ ಸಿದ್ದನಕೊಳ್ಳ ಶ್ರೀಗಳ ಸ್ಫೋಟಕ ಭವಿಷ್ಯಶೀಘ್ರದಲ್ಲೇ ಸಮಾನ ಮನಸ್ಕರ ಪಕ್ಷ ಸ್ಥಾಪನೆ : ಚೇತನ್ ಅಹಿಂಸಾ