ಕಾರ್ಯಕ್ರಮದ ಉದ್ಘಾಟನೆಯಲ್ಲಿ ಭಾಗಿಯಾಗಿದ್ದ ಮುಧೋಳ್ ಪೊಲೀಸ್ ಠಾಣೆಯ ಎಎಸ್ಐ ಗೌರಿಶಂಕರ್ ಅವರು ಮಾತನಾಡಿ ಮಕ್ಕಳಿಗೆ ಸಂಪತ್ತು, ವಿಜ್ಞಾನ, ಫ್ಯಾಷನ್ ಮತ್ತು ಕಾನೂನಿಗಿಂತ ಹೆಚ್ಚಿನದು ಆತ್ಮಜ್ಞಾನ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಾದ ಅನುರಾಧಾ ಅವರು ಮಾತನಾಡಿ ಬಾಲ್ಯವಿವಾಹ ಕುರಿತು ಮತ್ತು ಕನ್ನಡ ಜಾಗೃತಿ ಕುರಿತು ಮಾತನಾಡಿದರು ತದನಂತರ ಕರ್ನಾಟಕ ನೌಕರರ ಸಂಘದ ತಾಲೂಕ ಅಧ್ಯಕ್ಷರಾದ ಅರವಿಂದ್ ಪಸರ್ ಅವರು ಕನ್ನಡ ಭಾಷೆ ಕುರಿತು ಮಾತನಾಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಗುರುಗಳಾದ ಮಸಿಯೂದ್ದಿನ್ ಅವರು ವಹಿಸಿದರು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸೈಲಾಜ ಮಧುಸೂಧನ್, ಮುಧೋಳ್ ಪೊಲೀಸ್ ಠಾಣೆಯ ಎ,ಎಸ್,ಐ ಗೌರಿಶಂಕರ್, ತಾಲೂಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳಾದ ಅನುರಾಧಾ, ತಾಲೂಕ ನೌಕರ ಸಂಘದ ಅಧ್ಯಕ್ಷರಾದ ಅರವಿಂದ್ ಪಸರ್, ಮೋತಕಪಲ್ಲಿ ಸಿ,ಆರ್,ಪಿ ಅಶೋಕ್ ರೆಡ್ಡಿ, ಸ್ಟಾರ್ ಕನ್ನಡ ನ್ಯೂಸ್24 ವರದಿಗಾರರಾದ ಮೌನೇಶ್ ವಿಶ್ವಕರ್ಮ, ಜಯ ಕರ್ನಾಟಕ ಜನಪರ ವೇದಿಕೆ ತಾಲೂಕ ಅಧ್ಯಕ್ಷರಾದ ಅಶೋಕ್ ಮಡಿವಾಳ, ಚಂದ್ರಶೇಖರ್ ರಿಬ್ಬನ್ ಪಲ್ಲಿ, ಉಮೇಶ್, ಮೌನೇಶ್ ಗೌಡ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್

