ಕಣದಲ್ಲಿರುವ ಟ್ರ್ಯಾಕ್ಟರ್, ದನಗಳನ್ನು, ಕುರಿಗಳನ್ನು ಹಾಗೂ ಮೆಕ್ಕೆಜೋಳದ ರಾಶಿ ಬೆಂಕಿಯಿಂದ ಬಣವೆಗಳು ತಡೆಗಟ್ಟುವಲ್ಲಿ ಯುವಕರು ಮತ್ತು ಇಲ್ಲಿನ ಊರಿನ ಸಾರ್ವಜನಿಕರು ಮುಂದಾಗಿ ನಂತರ ಅಗ್ನಿಶಾಮಕ ದಳ ವಾಹನ ಕರೆಸಿ ನಂದಿಸಲು ಪ್ರಯತ್ನಿಸಿದರು.

ಸ್ಥಳಕ್ಕೆ ಅಗಮಿಸಿದ ಕರ್ನಾಟಕ ರಾಜ್ಯರೈತ ಸಂಘ ಹಸಿರು ಸೇನೆ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಎನ್ ಭರ್ಮಣ್ಣ. ತಾಲೂಕು ಅಧ್ಯಕ್ಷರಾದ ಶ್ರೀಧರ..ಗ್ರಾಮದ ಶಿವಜ್ಜ ಮಾತನಾಡಿ ನಷ್ಟವಾದ ರೈತರಿಗೆ ತಹಶಿಲ್ದಾರರು ಮತ್ತು ಜಿಲ್ಲಾಧಿಕಾರಿಗಳು ಸಂಬಂದಪಟ್ಟ ಅಧಿಕಾರಿಗಳು ಕೂಡಲೇ ಸರ್ಕಾರಕ್ಕೆ ವರದಿ ಒಪ್ಪಸಿ ರೈತರಿಗೆ ಸರ್ಕಾರದಿಂದ ದವಸ ಧಾನ್ಯ ಮೇವುಗಳನ್ನು ಒದಗಿಸಬೇಕು ಹಾಗೂ ರೈತರಿಗೆ ಸರ್ಕಾರ ದಿಂದ ಪರಿಹಾರ ನೀಡಬೇಕೆಂದು ಮನವಿ ಮಾಡಿಕೊಂಡರು. ವರದಿ ಎಂ ಮಂಜುನಾಥ್

