ಸಿಂಧನೂರು : ನಗರ ಪೊಲೀಸ್ ಠಾಣೆಯಲ್ಲಿ ಮಾನ್ಯ ಪೋಲಿಸ್ ವರಿಷ್ಠಾಧಿಕಾರಿ ಅರುಣಾಂಕ್ಷಿಗಿರಿ ಅವರ ನೇತೃತ್ವದಲ್ಲಿ ಶನಿವಾರ 4:30ಕ್ಕೆ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶಾಂತಿ ಸಭೆ ನಡೆಯಿತು ಎಂದು ನಗರ ಪೊಲೀಸ್ ಠಾಣೆಯ ಪಿ ಐ, ವಿರಾರೆಡ್ಡಿ ತಿಳಿಸಿದರು.
ಎಸ್ಪಿ, ಅರುಣಾಂಕ್ಷಿಗಿರಿ ಮಾತನಾಡಿ ಪ್ರವಾದಿ ಮಹಮ್ಮದ್ ಅವರ ಜನ್ಮದಿನ ಅಂಗವಾಗಿ ಸಂದೇಶ ಸಾರಲು ನಗರದಲ್ಲಿ ಧಾರ್ಮಿಕ ಮೆರವಣಿಗೆಯನ್ನು ಅರ್ಥಪೂರ್ಣವಾಗಿ ನೆರವೇರಿಸಬೇಕು, ಯಾವುದೇ ಅಹಿತಕರ ಘಟನೆಗೆ ಅವಕಾಶ ಕಲ್ಪಿಸದೆ ಈದ್ ಮಿಲಾದ್ ಹಬ್ಬವನ್ನು ಪ್ರತಿಯೊಬ್ಬರೂ ಶಾಂತಿ ರೀತಿಯಿಂದ ಸೌಹಾರ್ದತೆಯಿಂದ ಆಚರಣೆ ಮಾಡಬೇಕೆಂದು ತಿಳಿಸಿದರು. 
ನಂತರ ಪಿ ಐ, ವೀರರೆಡ್ಡಿ ಮಾತನಾಡಿ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರು ನಿಯಮಗಳನ್ನು ಪಾಲಿಸಿ ಎಲ್ಲರೂ ಕಾನೂನು ಚೌಕಟ್ಟಿನೊಳಗೆ ಹಬ್ಬವನ್ನು ಆಚರಿಸಬೇಕು ಡಿಜೆ ಬಳಕೆ ಹಾಗೂ ಬೈಕ್ ಸೈಲೆನ್ಸರ್ ತೆಗೆದು ಕರ್ಕಶ ಶಬ್ದ: ಮಾಡಿಕೊಂಡು ಬೈಕ್ ಚಲಾಯಿಸುವುದು ಸಂಪೂರ್ಣ ನಿಷೇಧಿಸಲಾಗಿದೆ ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುವಂತಹ ಯಾವುದೇ ಚಟುವಟಿಕೆಗಳಲ್ಲಿ ತೊಡಗಿದರೆ ಅಂತವರ ವಿರುದ್ಧ ನಿರ್ಧಾಕ್ಷಣವಾಗಿ ಕಠಿಣ ಕ್ರಮ ಜರಗಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಮಾತೆ ಇಸ್ಲಾಂ ಹಿಂದ್ ಅಧ್ಯಕ್ಷ ಹುಸೇನ್ ಸಾಬ್. ಎಚ್ ಎನ್. ಬಡಿಗೇರ್. ನದೀಮ್ ಮುಲ್ಲಾ. ಖಾಜಾ ಮಲ್ಲಿಕ್. ಶಫಿ ಉಲ್ಲಾ ಖಾನ್. ಖಾನ್ ಸಾಬ್. ಅಭಿಬ್ ಖಾಜಾ. ಯಾಸುಪ್ ಎತ್ಮರಿ. ಕಾರುಣ್ಯಶ್ರಮ ಡಾ. ಚನ್ನಬಸಯ್ಯಸ್ವಾಮಿ. ದುರುಗೇಶ್ ಬಾಲಿ. ಸುರೇಶ್ ಗೊಬ್ಬರಕಲ್. ಕೆ.ಮರಿಯಪ್ಪ ಬಿಎಸ್ಪಿ. ಮೂಲಪ್ಪ ಮಾಡಿಸಿರುವಾರ. ಕರವೇ, ರಾಜಸಾಬ್ ಗಾಂಧಿನಗರ ಸೇರಿದಂತೆ ಮುಸ್ಲಿಂ ಸಮಾಜದ ಮುಖಂಡರು ಸಾರ್ವಜನಿಕರು ಸಂಘ-ಸಂಸ್ಥೆ ಮುಖಂಡರು ಈ ಸಭೆಯಲ್ಲಿ ಭಾಗವಹಿಸಿದ್ದರು
ವರದಿ:ಬಸವರಾಜ ಬುಕ್ಕನಹಟ್ಟಿ


